Don't Miss!
- News Bengaluru Heat: ಏ.25 ರಂದು ನಗರದಲ್ಲಿ ಅತ್ಯಧಿಕ ತಾಪಮಾನ: 12 ವರ್ಷಗಳ ದಾಖಲೆ ಉಡೀಸ್
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂದು ನಾಲಿಗೆ ಸತ್ತಿತ್ತಾ.? #ಮೀಟೂ 'ನಟಿ'ಯರಿಗೆ ರೇಖಾ ರಾಣಿ ಖಡಕ್ ಪ್ರಶ್ನೆ.!
ಹೆಣ್ಮಕ್ಕಳು ಅನುಭವಿಸಿದ್ದ ಕರಾಳ ಅನುಭವವನ್ನು ಹೊರಹಾಕಲು ಒಂದೊಳ್ಳೆ ವೇದಿಕೆ ಆಗಿದ್ದ #ಮೀಟೂ ಅಭಿಯಾನಕ್ಕೆ ಸದ್ಯ 'ಪಬ್ಲಿಸಿಟಿ'ಯ ಕಾರ್ಮೋಡ ಆವರಿಸಿದೆ. ನಟಿಯರು #ಮೀಟೂ ವೇದಿಕೆಯನ್ನ 'ಪಬ್ಲಿಸಿಟಿ'ಗಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
''#ಮೀಟೂ ಹಿಂದೆ ಬೇರೆಯದ್ದೇ ಉದ್ದೇಶ ಇದೆ'' ಎಂದು ವ್ಯಾಖ್ಯಾನ ಮಾಡುವವರೂ ಇದ್ದಾರೆ. ಹೀಗಿರುವಾಗಲೇ ಕನ್ನಡ ಚಿತ್ರರಂಗದಲ್ಲಿ #ಮೀಟೂ #ಮೀಟೂ ಎನ್ನುತ್ತಿರುವ 'ನಟಿ'ಯರ ಕುರಿತು ಹಿರಿಯ ಪತ್ರಕರ್ತೆ, ನಿರ್ಮಾಪಕಿ, ಅಶೋಕ್ ಕಶ್ಯಪ್ ಪತ್ನಿ ರೇಖಾ ರಾಣಿ ಗುಡುಗಿದ್ದಾರೆ.
''ಇಂದು ಧೈರ್ಯ ಇರುವವರಿಗೆ ಅಂದು ನಾಲಿಗೆ ಸತ್ತಿತ್ತಾ? ಕಾಲಲ್ಲಿ ಚಪ್ಪಲಿ ಇರಲಿಲ್ಲವಾ? ಪೊಲೀಸ್ ಸ್ಟೇಷನ್ ಕಾಣಿಸಲಿಲ್ಲವಾ? ತಮ್ಮದೇ ಸಂಘ ಸಂಸ್ಥೆಗಳು ಕಾಣಲಿಲ್ಲವಾ?'' ಎಂದು ರೇಖಾ ರಾಣಿ ಖಡಕ್ ಆಗಿ ಪ್ರಶ್ನಿಸಿದ್ದಾರೆ. ಮುಂದೆ ಓದಿರಿ....
ಪಬ್ಲಿಸಿಟಿಗಾಗಿ ಹಾತೊರೆಯುವುದು ಯಾಕೆ.?
''ಅದೆಷ್ಟು ಹಿಡನ್ ಅಜೆಂಡಾಗಳು. ಸಿನೆಮಾ ಇಂಡಸ್ಟ್ರಿಯಿರಲಿ ಮತ್ಯಾವುದೇ ಇರಲಿ...ಜನ ಪಬ್ಲಿಸಿಟಿಗಾಗಿ ಯಾಕೆ ಇಷ್ಟೊಂದು ಹಾತೊರೆಯುತ್ತಾರೋ ಗೊತ್ತಿಲ್ಲ. ಅನ್ಯಾಯ ಮಾಡಿದವರೊಡನೆ ಒಂದಷ್ಟು ಕಾಲ ನಗುನಗುತ್ತಾ ಹೆಜ್ಜೆಹಾಕಿ ನಂತರ ದಿಢೀರನೆ ಅವರಿಂದ ಅನ್ಯಾಯವಾಯಿತೆಂದರೆ...ಎರಡರಲ್ಲಿ ಯಾವುದು ನಾಟಕ? ನಟನೆ ಮಾಡುತ್ತಿರುವುದು ಪರದೆಯ ಮೇಲೋ? ಹಿಂದೆಯೊ?'' ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ ರೇಖಾ ರಾಣಿ.
ಶ್ರುತಿ ಹರಿಹರನ್ ವಿವಾದ: 'ಫೈರ್' ಸಂಸ್ಥೆಗೆ ಗುಡ್ ಬೈ ಹೇಳಿದ ಪ್ರಿಯಾಂಕಾ ಮತ್ತು ತಂಡ.!
ಅಂದು ನಾಲಿಗೆ ಸತ್ತಿತ್ತಾ.?
''ಇಷ್ಟೆಲ್ಲಾ ಧೈರ್ಯ ಇರುವವರಿಗೆ ಅಂದು ನಾಲಿಗೆ ಸತ್ತಿತ್ತಾ? ಕಾಲಲ್ಲಿ ಚಪ್ಪಲಿ ಇರಲಿಲ್ಲವಾ? ಪೋಲಿಸ್ ಸ್ಟೇಷನ್ ಕಾಣಿಸಲಿಲ್ಲವಾ? ತಮ್ಮದೇ ಸಂಘ ಸಂಸ್ಥೆಗಳು ಕಾಣಲಿಲ್ಲವಾ? ಹಿರಿಯರು, ಮಾರ್ಗದರ್ಶಕರು ಕಾಣಲಿಲ್ಲವಾ? ಇಂದು ಏಕಾಏಕಿ ಮೀಡಿಯಾ ಮುಂದೆ ನಿಂತು ಗಂಟಲು ಹರಿದುಕೊಳ್ಳುವುದೆಂದರೆ ಇದು ಪಬ್ಲಿಸಿಟಿಗಾಗಿ ಅಥವಾ ದ್ವೇಷಕ್ಕಾಗಿ ಅಂತ ನನಗನ್ನಿಸುತ್ತೆ'' ಎಂದಿದ್ದಾರೆ ರೇಖಾ ರಾಣಿ
ಧ್ರುವ ಜೊತೆ ಸಿನಿಮಾ ಸಿಗಲಿಲ್ಲ, ಸೇಡು ತೀರಿಸಿಕೊಳ್ಳಲು ಶ್ರುತಿ ಹೀಗೆ ಮಾಡಿದ್ರಂತೆ.!
ಈ ಅಭಿಯಾನ ಸತ್ತು ಹೋಯ್ತು
''ಒಟ್ನಲ್ಲಿ ಯಾರ್ಯಾರದ್ದೋ ತೆವಲಿಗೆ ಒಳ್ಳೆಯ ಸಂಚಲನ ಉಂಟುಮಾಡಿ ನ್ಯಾಯ ದೊರಕಿಸಬೇಕಿದ್ದ ಈ ಅಭಿಯಾನ ಸತ್ತು ಹೋಯ್ತು.
ಯಾವುದೇ ಪೂರ್ವತಯಾರಿ, ಸಿದ್ಧತೆ ಮಾಡಿಕೊಳ್ಳದೆ #MeToo ಅಭಿಯಾನ ಕೈಗೊಂಡರೆ ಹೀಗೇ ಆಗೋದು'' ಎಂದು ತಮ್ಮ ಅಭಿಪ್ರಾಯವನ್ನ ರೇಖಾ ರಾಣಿ ವ್ಯಕ್ತಪಡಿಸಿದ್ದಾರೆ.
ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಆರೋಪ: ಹಿಂದಿದ್ಯಾ ಷಡ್ಯಂತ್ರ, ಪ್ರತೀಕಾರ.?
'ಫೈರ್'ಗೆ ಗುಡ್ ಬೈ ಹೇಳಿದ್ದರು ರೇಖಾ ರಾಣಿ
'ಫೈರ್' ಎಂಬ ಸಂಸ್ಥೆ ಹುಟ್ಟುಹಾಕುವಲ್ಲಿ ನಟ ಚೇತನ್ ಹಾಗೂ ಪ್ರಿಯಾಂಕಾ ಉಪೇಂದ್ರ ಅವರಿಗೆ ಕೈ ಜೋಡಿಸಿದ್ದವರು ರೇಖಾ ರಾಣಿ. ಫೈರ್/ಐಸಿಸಿಗೆ ದೂರು ಕೊಡದೆ ಶ್ರುತಿ ಹರಿಹರನ್ ಏಕಾಏಕಿ ಪ್ರೆಸ್ ಮೀಟ್ ಮಾಡಿ ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ ಕಾರಣ ಪ್ರಿಯಾಂಕಾ ಉಪೇಂದ್ರ, ರೇಖಾ ರಾಣಿ ಸೇರಿದಂತೆ ಹಲವರು 'ಫೈರ್' ಸಂಸ್ಥೆಗೆ ಗುಡ್ ಬೈ ಹೇಳಿದ್ದಾರೆ.
ಅರ್ಜುನ್ ಸರ್ಜಾ ಹೆಸರನ್ನ ಮಾತ್ರ ಹೇಳಲು ಒಂದು ಕಾರಣ ಇದೆ ಎಂದ ಶ್ರುತಿ ಹರಿಹರನ್.!