Don't Miss!
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Automobiles ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಡಿಯೋ : ಜೀವನದ ದಿಕ್ಕು ತೋರಿಸೋ 'ರೇಖೆ'
ಇತ್ತಿಚೆಗೆ ಕನ್ನಡದಲ್ಲಿ ಕಿರುಚಿತ್ರಗಳು ಸದ್ದಿಲ್ಲದೆ ಹೊಸ ಹೊಸ ಪ್ರಯೋಗ ಮಾಡುತ್ತಿವೆ. ಅದೇ ರೀತಿ ಯಾರೊ ನಮ್ಮನ್ನ ಗುರುತ್ತಿಸುತ್ತಾರೆ ಅಂತ ಕೈ ಕಟ್ಟಿ ಕಾದು ಕೂರೊ ಬದಲು ಕೈಲಾದ ಮಟ್ಟಿಕೆ ಕಲಾತ್ಮಕವಾಗಿ ಗುರುತಿಸಿಕೊಳ್ಳೊ ಪ್ರಯತ್ನ ಮಾಡಿದ್ದಾರೆ ಈ ಹೊಸ ಹುಡುಗರು.
ಶಿವರಾಜ್ ಹಾಗೂ ಸಂಗಡಿಗರು ಈಗ 'ರೇಖೆ' ಎನ್ನುವಂತ ಒಂದು ಕಿರುಚಿತ್ರವನ್ನ ಮಾಡಿದ್ದಾರೆ. ಇದರ ಟ್ರೇಲರ್ ಜಂಕಾರ್ ಮ್ಯೂಸಿಕ್ ನಲ್ಲಿ ರಿಲೀಸ್ ಮಾಡಿದ್ದಾರೆ. ಟ್ರೇಲರ್ ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಟ್ರೈಲರ್ ಕುತೂಹಲ ಮೂಡಿಸುವುದರ ಜೊತೆಗೆ ಕ್ಯಾಮರಾ, ಸಾಹಿತ್ಯ, ಸಂಗೀತದಲ್ಲೂ ತಕ್ಕಮಟ್ಟಿಗೆ ಸೈ ಎನಿಸಿಕೊಂಡಿದ್ದಾರೆ.
'ರೇಖೆ Life will take you in its own stream' ಎನ್ನುವ ಅಡಿ ಬರಹದೊಂದಿಗೆ ಜನರಮುಂದೆ ಬಂದಿದ್ದಾರೆ. ಒಬ್ಬ ಹಳ್ಳಿ ಹುಡುಗ ಪಟ್ಟಣಕ್ಕೆ ಬರಬೇಕಾದಂತ ಪರಿಸ್ಥಿತಿ ಬರುತ್ತದೆ. ಬಂದಾಗ ಒಂದು ಘಟನೆ ನೆಡೆಯುತ್ತದೆ. ಜೀವನ ಅನ್ನೊ ರೇಖೆ ಅವನಿಗೆ ಯಾವುದೆಲ್ಲ ದಾರಿ ತೊರಿಸುತ್ತದೆ, ಅಷ್ಟಕ್ಕು ಅವನು ಬೆಂಗಳೂರಿಗೆ ಯಾಕೆ ಬರ್ತಾನೆ ಬಂದು ಏನ್ ಮಾಡ್ತಾನೆ ಅನ್ನೋದೆ ಚಿತ್ರದ ಕಥೆ ಅಂತಾರೆ ನಿರ್ದೇಶಕರ ತಂಡ.
ಟ್ರೈಲರ್ ನಲ್ಲಿ ವಿಭಿನ್ನ ಕ್ಯಾರೆಕ್ಟರ್ ಗಳ ಸುಳಿವು ನೀಡಿರುವ ಇವರು ಚಿತ್ರದಲ್ಲಿ ಏನ್ ಮಾಡಿದಾರೆ, ಕ್ವಾಲಿಟಿ ಹೇಗಿದೆ ಎಂಬುದನ್ನ ಕಾದು ನೋಡಬೇಕು.
ಈ ಚಿತ್ರಕ್ಕೆ ವಿನೋದ್ ರವರು ಆಕ್ಸನ್ ಕಟ್ ಹೇಳಿದ್ದು ಶಿವರಾಜ್ ಡಿ ಎನ್ ಎಸ್ ರವರು ಆಸೋಶಿಯೇಟ್ ಆಗಿ ವರ್ಕ್ ಮಾಡಿದ್ದಾರೆ. ರಾಕೇಶ್ ಭಾರಧ್ವಾಜ್ ಗೆಳೆಯರ ಈ ಚಿತ್ರಕ್ಕೆ ಬಂಡವಾಳ ಹೂಡಿ ಸಹಕರಿಸಿದ್ದಾರೆ. ರಾಜಶೇಖರ ಬಂಡೆ ಎನ್ನುವ ಯುವ ಸಾಹಿತಿ ಯೊಬ್ಬರು ಗೀತ ರಚನೆ ಮಾಡಿದ್ದು, ವಿಜಯ್ ರಾಜ್ ಎಂಬುವವರು ಸಂಗೀತ ಸಂಯೋಜನೆ ಮಾಡಿದ್ದಾರೆ ಸಂಕಲನ ಸಾಯಿ ಸಂದೇಶ್ ಮಾಡಿದಾರೆ. ಗಜ ಶ್ರೀಧರ್ ಮೂರ್ತಿ ಕ್ಯಾಮರಾ ಹಿಡಿದಿದ್ದಾರೆ
ಶಿವರಾಜ್ ಡಿ.ಎನ್.ಎಸ್, ಅರುಣ್ ಜಾನಕಿರಾಮ್, ಗುರುಪ್ರಸಾದ್, ಸಂಪ್ರತಿ ಆಳ್ವಾ, ಸಿದ್ದು ಕುಮಟಗಿ, ವಿಕ್ಕಿ ಚಿಕ್ಕಮಗಳೂರ್, ನಿಂಗರಾಜ್ ಬಿಜಾಪುರ್, ಹೇಮಂತ್ ಮುಂತಾದವರು ಕಾಣಿಸಿಕೊಂಡಿದ್ದಾರೆ.