Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುದೀಪ್-ದರ್ಶನ್ ಮಧ್ಯೆ ಮಾತ್ರ ಅಲ್ಲ, 'ಮೆಜೆಸ್ಟಿಕ್' ನಿರ್ಮಾಪಕರ ನಡುವೆಯೂ ಕಿತ್ತಾಟ.!
ಸರಿ ಸುಮಾರು ಹದಿನೈದು ವರ್ಷಗಳ ಹಿಂದೆ ಸ್ಯಾಂಡಲ್ ವುಡ್ ನಲ್ಲಿ 'ದರ್ಶನ್' ಎಂಬ 'ಚಾಲೆಂಜಿಂಗ್ ಸ್ಟಾರ್' ಉದಯವಾಗಿತ್ತು. ಹಾಗೆ 'ಚಾಲೆಂಜಿಂಗ್ ಸ್ಟಾರ್' ಉದಯವಾಗಲು ಕಾರಣವಾಗಿದ್ದು 'ಮೆಜೆಸ್ಟಿಕ್' ಎಂಬ ಪಕ್ಕಾ ಮಾಸ್ ಸಿನಿಮಾ.
ಫೆಬ್ರವರಿ 18, 2017... 'ಮೆಜೆಸ್ಟಿಕ್' ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿ ಹದಿನೈದು ವರ್ಷಗಳು ಉರುಳಿವೆ. ಈ ಸಂದರ್ಭದಲ್ಲಿ ಸವಿ ನೆನಪುಗಳನ್ನು ಮೆಲುಕು ಹಾಕುವ ಬದಲು 'ಮೆಜೆಸ್ಟಿಕ್' ಸಿನಿಮಾ ಬೇಡದ ವಿಷಯಕ್ಕೆ ಚರ್ಚೆಗೆ ಗ್ರಾಸವಾಗಿದೆ.['ದರ್ಶನ್-ಸುದೀಪ್' ಸ್ನೇಹದ ಬಿರುಕಿಗೆ ಕಾರಣವಾಗಿದ್ದು 'ಸುದೀಪ್ ಕೊಟ್ಟ ಆ ಹೇಳಿಕೆ'!]
'ಮೆಜೆಸ್ಟಿಕ್' ಚಿತ್ರದ 'ಚಾನ್ಸ್' ಕುರಿತು ಕಿಚ್ಚ ಸುದೀಪ್ ಆಡಿರುವ ಮಾತಿನ ವಿರುದ್ಧ 'ದಾಸ' ದರ್ಶನ್ ಬಹಿರಂಗವಾಗಿ ಆಕ್ರೋಶ ಹಾಗೂ ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗಲೇ, 'ಮೆಜೆಸ್ಟಿಕ್' ಚಿತ್ರದ ನಿರ್ಮಾಪಕರೂ ಕಿತ್ತಾಡುವ ಪರಿಸ್ಥಿತಿ ಎದುರಾಗಿದೆ.
'ಮೆಜೆಸ್ಟಿಕ್' ಚಿತ್ರದ ನಿರ್ಮಾಪಕರು ಯಾರು.?
ಚಾಲೆಂಜಿಂಗ್ ಸ್ಟಾರ್ ದರ್ಶನ್ 'ನಾಯಕ'ನಾಗಿ ಅಭಿನಯದ ಚೊಚ್ಚಲ ಸಿನಿಮಾ 'ಮೆಜೆಸ್ಟಿಕ್'ಗೆ ಇಬ್ಬರು ನಿರ್ಮಾಪಕರು. ಒಬ್ಬರು ಬಾ.ಮಾ.ಹರೀಶ್ ಮತ್ತೊಬ್ಬರು ಎಂ.ಜಿ.ರಾಮಮೂರ್ತಿ.[ದರ್ಶನ್ 'ಮೆಜೆಸ್ಟಿಕ್' ಬಗ್ಗೆ ಸಂದರ್ಶನದಲ್ಲಿ ಸುದೀಪ್ ಹೇಳಿದ್ದೇನು? ಇಲ್ಲಿದೆ ನೋಡಿ]
ನಾನೊಬ್ಬನೇ ಪ್ರೊಡ್ಯೂಸರ್ ಆಂತಾರೆ ಬಾ.ಮಾ.ಹರೀಶ್.!
''ಉಲ್ಲಾಸ್ ಎಂಟರ್ ಪ್ರೈಸಸ್'- 'ಮೆಜೆಸ್ಟಿಕ್' ಚಿತ್ರದ ನಿರ್ಮಾಪಕ ನಾನು ಅಂತ ಹೇಳಿಕೊಳ್ಳೋಕೆ ದಾಖಲೆ ಇದೆ. ಯಾಕಂದ್ರೆ, ಜನರಿಗೆ ಸತ್ಯ ಗೊತ್ತಾಗಬೇಕು. ನಮ್ಮ ಸ್ನೇಹ ಕಳೆದುಕೊಳ್ಳಲು ನಾನು ಇಷ್ಟ ಪಡುವುದಿಲ್ಲ. ಯಾರದ್ದೋ ಮಕ್ಕಳಿಗೆ ನಾವು ಅಪ್ಪ ಆಗಲು ಹೋಗಬಾರದು. ನಮ್ಮ ಮಕ್ಕಳಿಗೆ ನಾವು ಅಪ್ಪ ಆಗಿರಬೇಕು. 'ಮೆಜೆಸ್ಟಿಕ್' ಚಿತ್ರಕ್ಕೆ ನಾನೊಬ್ಬನೇ ನಿರ್ಮಾಪಕ. ಚಿತ್ರದ ಸ್ಯಾಟೆಲೈಟ್ ರೈಟ್ಸ್ ಕೂಡ ನನ್ನ ಬಳಿಯೇ ಇದೆ'' ಎನ್ನುತ್ತಾರೆ ನಿರ್ಮಾಪಕ ಬಾ.ಮಾ.ಹರೀಶ್ [ನಾನು ಸುದೀಪ್ ಇನ್ಮುಂದೆ ಗೆಳೆಯರಲ್ಲ : ದರ್ಶನ್ ತೂಗುದೀಪ]
ಹಾಗಾದ್ರೆ, ರಾಮಮೂರ್ತಿ ಯಾರು.?
'ಮೆಜೆಸ್ಟಿಕ್' ಚಿತ್ರ ರೆಡಿ ಮಾಡುವ ಹೊತ್ತಲ್ಲಿ ಸ್ಯಾಂಡಲ್ ವುಡ್ ಗೆ ರಾಮಮೂರ್ತಿ ಹೊಸಬರು. ವೃತ್ತಿಯಲ್ಲಿ ಕಂಟ್ರ್ಯಾಕ್ಟರ್ ಆಗಿದ್ದ ರಾಮಮೂರ್ತಿ ಚಿತ್ರ ನಿರ್ಮಾಣದ ಬಗ್ಗೆ ಆಸಕ್ತಿ ಹೊಂದಿದ್ದರು. 'ಮೆಜೆಸ್ಟಿಕ್' ಚಿತ್ರಕ್ಕೆ ಬಂಡವಾಳ ಕೂಡ ಹೂಡಿದರು.[ದರ್ಶನ್ ಗೆ ಟ್ವಿಟ್ಟರ್, ಫೇಸ್ ಬುಕ್ ಬಳಸಲು ಬರಲ್ವಂತೆ! ಟ್ವೀಟ್ ಮಾಡೋದ್ಯಾರು?]
ಬಾ.ಮಾ.ಹರೀಶ್ ಹೇಳುವುದೇ ಬೇರೆ.!
''ಮೆಜೆಸ್ಟಿಕ್' ಚಿತ್ರಕ್ಕೆ ರಾಮಮೂರ್ತಿ ಫೈನಾನ್ಸ್ ಮಾಡಿದ್ರು ಅಷ್ಟೇ. ಕೊಟ್ಟ ದುಡ್ಡಿಗಿಂತ ಹೆಚ್ಚು ವಾಪಸ್ ಕೊಟ್ಟಿದ್ದೇನೆ. ಹೀಗಾಗಿ ನಾನೊಬ್ಬನೇ ಪ್ರೊಡ್ಯೂಸರ್'' ಅಂತಾರೆ ಬಾ.ಮಾ.ಹರೀಶ್.
ಅಣಜಿ ನಾಗರಾಜ್ ಬಾಯಿಂದ ಬಂದ ಮಾತು
''ಮೆಜೆಸ್ಟಿಕ್' ಚಿತ್ರಕ್ಕೆ ಪಿ.ಎನ್.ಸತ್ಯ ಡೈರೆಕ್ಟರ್, ರಾಮಮೂರ್ತಿ ಪ್ರೊಡ್ಯೂಸರ್, ಬಾ.ಮಾ.ಹರೀಶ್ ಪ್ರೊಡಕ್ಷನ್ ನೋಡಿಕೊಳ್ತಿದ್ರು ಅವಾಗ'' ಅಂತ ಅಣಜಿ ನಾಗರಾಜ್ ಹೇಳುತ್ತಾರೆ.
ಹಳೇ ಕಥೆಗೆ ಈಗ ಕಿತ್ತಾಟ
ದುಡ್ಡಿನ ವಿಚಾರಕ್ಕೆ ರಾಮಮೂರ್ತಿ ಹಾಗೂ ಬಾ.ಮಾ.ಹರೀಶ್ ನಡುವೆ ಅಂದು ಆಗಿದ್ದ ಕಿರಿಕ್ ಈಗ ಭುಗಿಲೆದ್ದಿದೆ. ಇಬ್ಬರ ನಡುವೆ ಮಾಧ್ಯಮಗಳಲ್ಲಿ ವಾಕ್ಸಮರ ನಡೆಯುತ್ತಿದೆ.