ಮತದಾನ ಮಾಡಿದ ರಿಷಬ್ ಶೆಟ್ಟಿ, ಶ್ವೇತಾ ಪ್ರಸಾದ್
2019ರ ಲೋಕಸಭೆಯ ಚುನಾವಣೆಯ ಮೂರನೇ ಹಂತದ ಇಂದು ನಡೆಯುತ್ತಿದೆ. ಭಾರತದ ಒಟ್ಟು 15 ರಾಜ್ಯದಲ್ಲಿ ಚುನಾವಣೆ ನಡೆಯುತ್ತಿತ್ತು, ಕರ್ನಾಟಕದ 14 ಜಿಲ್ಲೆಗಳಲ್ಲಿ ಇಂದು ಮತದಾನ ಆಗುತ್ತಿದೆ.
ನಿರ್ದೇಶಕ ರಿಷಬ್ ಶೆಟ್ಟಿ ಉಡುಪಿಯಲ್ಲಿ ಮತದಾನ ಮಾಡಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆರಾಡಿಗೆ ಹೋಗಿ ವೋಟ್ ಮಾಡಿದ್ದಾರೆ. ಮತದಾನ ಮಾಡಿದ ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
''ಮತದಾನ ಪ್ರಜಾಪ್ರಭುತ್ವದ ಬದಲಾವಣೆಗೆ ಇರುವ ಏಕೈಕ ದಾರಿ. ಮತದಾನ ನನ್ನ ಹಕ್ಕು. ಮತದಾನ ಮಾಡದೆ ಕಾರಣ ಕೇಳುವುದನ್ನು ಬಿಡಿ.'' ಎಂದು ಬರೆದುಕೊಂಡು ಮತದಾನ ಮಹತ್ವದ ಬಗ್ಗೆ ತಿಳಿಸಿದ್ದಾರೆ.
ಇತ್ತ ನಟಿ ಶ್ವೇತ ಪ್ರಸಾದ್ ಕೂಡ ವೋಟ್ ಮಾಡಿದ್ದಾರೆ. ಮತದಾನದ ಫೋಟೋವನ್ನು ತನ್ನ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು ''ಪ್ರತಿ ಮತ ಕೂಡ ಮುಖ್ಯ. ನೀವು ವೋಟ್ ಮಾಡಿ'' ಎಂದು ಹೇಳಿದ್ದಾರೆ.

'ರಾಧ ರಮಣ' ಧಾರಾವಾಹಿಯಲ್ಲಿ ನಟಿಸಿದ್ದ ಶ್ವೇತ ಪ್ರಸಾದ್ ಇತ್ತೀಚಿಗೆ ತಾನೇ ಅವರಿಂದ ಹೊರಬಂದಿದ್ದಾರೆ. 'ಕಳ್ಬೆಟ್ಟದ ದರೋಡೆಕೋರರು' ಸಿನಿಮಾದಲ್ಲಿಯೂ ನಟಿಸಿದ್ದರು.


Click it and Unblock the Notifications











