Don't Miss!
- Lifestyle ಗಾಯ ಗುಣವಾಗಲು, ದೃಷ್ಟಿ ಸುಧಾರಣೆ ಸೇರಿ ಕೀವಿ ಹಣ್ಣಿನ ಲಾಭ ಎಷ್ಟಿದೆ ಗೊತ್ತಾ?
- News ಕುಡಿಯುವ ನೀರಿಲ್ಲದೇ ಜನ ಬೆಂಗಳೂರಿಗೆ ಬಾಯ್ ಹೇಳುತ್ತಿದ್ದಾರೆ: ಆರ್.ಅಶೋಕ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೆರೆಗೆ ಬರಲಿದೆ ನಿಜ ಡಾನ್ ಕತೆ : ನಾಯಕ ಪಾತ್ರದಲ್ಲಿ ರಿಷಬ್ ಶೆಟ್ಟಿ
ಅಂಡರ್ವಲ್ಡ್ ಡಾನ್ಗಳ ಮೂಟೆಗಟ್ಟಲೆ ಕತೆಗಳು ಸಿನಿಮಾಗಳಾಗಿವೆ. ಆದರೂ ಡಾನ್ ಕತೆಗಳಿಗೆ ಬೇಡಿಕೆ ಕಡಿಮೆ ಆಗಿಲ್ಲ.
Recommended Video
ನಿಜ ಜೀವನದಲ್ಲಿ ಡಾನ್ ಆಗಿ, ರೌಡಿಗಳಾಗಿ ಮೆರೆದವರ ಕತೆಗಳು ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಬಂದಿವೆ. ಇದಕ್ಕೆ ಹೊಸ ಸೇರ್ಪಡೆ ರಿಷಬ್ ಶೆಟ್ಟಿ ಅಭಿನಯಿಸುತ್ತಿರುವ ಇನ್ನೂ ಹೆಸರಿಡದ ಚಿತ್ರ.
ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ರಿಷಬ್ ಶೆಟ್ಟಿ ಸಿನಿಮಾ ಆಯ್ಕೆ
ಮಂಗಳೂರು, ಮುಂಬೈನಲ್ಲಿ ಹೆಸರು ಮಾಡಿದ್ದ ಡಾನ್ ಅಮರ್ ಆಳ್ವಾ ನಿಜ ಜೀವನ ಆಧರಿಸಿ ಸಿನಿಮಾ ನಿರ್ಮಿಸಲು ಯೋಜಿಸಿದ್ದು, ರಿಷಬ್ ಶೆಟ್ಟಿ ಅಮರ್ ಆಳ್ವಾ ಆಗಿ ಕಾಣಿಸಿಕೊಳ್ಳಲಿದ್ದಾರೆ.
90 ರ ದಶಕದಲ್ಲಿ ಹೆಸರಾಗಿದ್ದವರು
ಅಮರ್ ಆಳ್ವಾ 90 ರ ದಶಕದಲ್ಲಿ ಮಂಗಳೂರು, ಬೆಂಗಳೂರು, ಮುಂಬೈನಲ್ಲಿ ತಮ್ಮ ಪ್ರಭಾವ ಹೊಂದಿದ್ದ ಡಾನ್ ಆಗಿದ್ದರು. ಮುತ್ತಪ್ಪ ರೈ ಜೊತೆಗೂ ಆಳ್ವಾ ಗೆ ಸಂಬಂಧವಿತ್ತು. ಜಯರಾಜ್, ಆಯಿಲ್ ಕುಮಾರ್ ಕಾಲದಲ್ಲಿ ಇವರ ಹೆಸರೂ ಸಾಕಷ್ಟು ಚಾಲ್ತಿಯಲ್ಲಿತ್ತು.
1992 ರ ಜುಲೈ 14 ರಂದು ಕೊಲೆಯಾಗಿದ್ದರು
1992 ರ ಜುಲೈ 14 ರಂದು ಮಂಗಳೂರಿನ ಮಿಲಾಗ್ರೆಸ್ ಚರ್ಚ್ ಬಳಿ ಅಮರ್ ಆಳ್ವಾ ಮೇಲೆ ಗುಂಡಿನ ದಾಳಿ ನಡೆಸಿ ಕೊಲ್ಲಲಾಯಿತು. ಈ ಪ್ರಕರಣದಲ್ಲಿ ಅಶೋಕ್ ಶೆಟ್ಟಿ, ಉದಯ್ ಶೆಟ್ಟಿ ಹಾಗೂ ಇನ್ನೂ ಏಳು ಜನರ ಮೇಲೆ ಪ್ರಕರಣ ದಾಖಲಾಗಿತ್ತು. 2017 ರಲ್ಲಿ ಅಮರ್ ಆಳ್ವಾ ಕೊಲೆ ಕೇಸಿನ ತೀರ್ಪು ನೀಡಲಾಗಿ, ಎಲ್ಲಾ ಆರೋಪಿಗಳನ್ನೂ ಆರೋಪ ಮುಕ್ತ ಮಾಡಲಾಯಿತು.
ರಿಷಬ್ ಶೆಟ್ಟಿ ಚಿತ್ರದಲ್ಲಿ ಶೈನ್ ಶೆಟ್ಟಿ: ಬಿಗ್ ಬಾಸ್ ವಿನ್ನರ್ಗೆ ಒಲಿದ ಪ್ರಮುಖ ಪಾತ್ರ?
ನಿತೇಶ್ ಗೆ ಮೊದಲ ಸಿನಿಮಾ
ಇದೀಗ ಅಮರ್ ಆಳ್ವಾ ಜೀವನವನ್ನೇ ಸಿನಿಮಾ ಮಾಡಲಾಗುತ್ತಿದ್ದು, ರಿಷಬ್ ಶೆಟ್ಟಿ ಬಳಿ ಅಸಿಸ್ಟೆಂಟ್ ಆಗಿದ್ದ ನಿತೇಶ್ ಅವರೇ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಇದು ಅವರ ನಿರ್ದೇಶನದ ಮೊದಲ ಸಿನಿಮಾ. ಕತೆಯನ್ನು ರಿಷಬ್ ಶೆಟ್ಟಿ ಹಾಗೂ ನಿತೇಶ್ ಒಟ್ಟಾಗಿ ರಚಿಸುತ್ತಿದ್ದಾರೆ.
ಬಹು ಬ್ಯುಸಿಯಾಗಿರುವ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಪ್ರಸ್ತುತ ಬಹು ಬ್ಯುಸಿಯಾಗಿದ್ದಾರೆ. ಅವರ ಗರುಡ ಗಮನ ವೃಷಭ ವಾಹನ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ರುದ್ರಪ್ರಯಾಗ್ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಜೊತೆಗೆ ಹರಿ ಕತೆ ಅಲ್ಲ ಗಿರಿ ಕತೆ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.
'ಹರಿಕಥೆ ಅಲ್ಲ ಗಿರಿ ಕಥೆ' ಹೇಳಲು ಬರ್ತಿದ್ದಾರೆ ರಿಷಬ್: ಏನಿದು ಶೆಟ್ರಾ ಹೊಸ ಕಥೆ?