twitter
    For Quick Alerts
    ALLOW NOTIFICATIONS  
    For Daily Alerts

    ಹೊಸ ಪ್ರಯತ್ನವನ್ನು ಮೆಚ್ಚಿಕೊಂಡ ಭಟ್ರು, ಶೆಟ್ರು

    By Naveen
    |

    Recommended Video

    #IruvudellavaBittu: ಇರುವುದೆಲ್ಲವ ಬಿಟ್ಟು ಸಿನಿಮಾ ಬಗ್ಗೆ ಶೆಟ್ರು, ಭಟ್ರು ಹೇಳಿದ್ದೇನು..? | Filmibeat Kannada

    ''ಬೇರೆಯವರ ಮುಂದೆ ಗೆದ್ದು ಖುಷಿ ಪಡಬೇಕು..ನಮ್ಮವರ ಮುಂದೆ ಸೋತು ಖುಷಿ ಪಡಬೇಕು'' ಇಂತಹ ಅದ್ಬುತ ಸಾಲು ಇರುವುದು 'ಇರುವುದೆಲ್ಲವ ಬಿಟ್ಟು' ಸಿನಿಮಾ ಟ್ರೇಲರ್ ನಲ್ಲಿ.

    ಸದ್ಯ 'ಇರುವುದೆಲ್ಲವ ಬಿಟ್ಟು' ಸಿನಿಮಾ ದಿನೇ ದಿನೇ ಕುತೂಹಲವನ್ನು ಹೆಚ್ಚು ಮಾಡುತ್ತಿದೆ. ಈಗ ಸಿನಿಮಾದ ಟ್ರೇಲರ್ ನೋಡಿ ಕನ್ನಡ ಚಿತ್ರರಂಗದ ಇಬ್ಬರು ಪ್ರತಿಭಾವಂತ ನಿರ್ದೇಶಕರು ಮೆಚ್ಚಿಕೊಂಡಿದ್ದಾರೆ.

    ದರ್ಶನ್ ಅವ್ರದ್ದು ಲಕ್ಕಿ ಹ್ಯಾಂಡ್ ಎಂಬುದು ಮತ್ತೆ ನಿಜ ಆಯ್ತು ದರ್ಶನ್ ಅವ್ರದ್ದು ಲಕ್ಕಿ ಹ್ಯಾಂಡ್ ಎಂಬುದು ಮತ್ತೆ ನಿಜ ಆಯ್ತು

    ಟ್ರೇಲರ್ ವೀಕ್ಷಿಸಿ ಮಾತನಾಡಿದ ಯೋಗರಾಜ್ ಭಟ್ ''ಇರುವುದೆಲ್ಲವ ಬಿಟ್ಟು ಗೋಪಾಲಕೃಷ್ಣ ಅಡಿಗರ ಸಾಲು. ನಾನು ಅವರ ಭಕ್ತ. ಟೈಟೆಲ್ ಕೇಳಿದಾಗಲೇ ಕಂಟೆಂಟ್ ಏನು ಮಾಡಿಕೊಂಡಿದ್ದಾರೆ ಎಂದು ಕೇಳಿದೆ. ನಾನು ಚಿತ್ರಕ್ಕೆ ಪ್ರಮೋಷನಲ್ ಹಾಡನ್ನು ಬರೆದಿದ್ದೇನೆ. ನಿರ್ದೇಶಕ ಕಾಂತ ಕನ್ನಲ್ಲಿ ಒಳ್ಳೆಯ ನನಗೆ ಸ್ನೇಹಿತರು. ಅವರ ಎರಡನೇ ಸಿನಿಮಾ ಇದು. ಸದ್ಯದಲ್ಲಿಯೇ ಸಿನಿಮಾ ರಿಲೀಸ್ ಆಗುತ್ತದೆ. ಸಿನಿಮಾವನ್ನು ನೋಡಿ ಹರಸಿ.'' ಎಂದಿದ್ದಾರೆ.

    ಚಿತ್ರದ ಟ್ರೇಲರ್ ಬಗ್ಗೆ ಮಾತನಾಡಿರುವ ರಿಷಬ್ ಶೆಟ್ಟಿ ''ನಾನು ಸಿನಿಮಾದ ಟ್ರೇಲರ್ ನೋಡಿದೆ. ತುಂಬ ನೀಟ್ ಆಗಿ ಈ ಸಿನಿಮಾ ಮಾಡಿದ್ದಾರೆ. ಈ ರೀತಿಯ ಜಾನರ್ ಕನ್ನಡದಲ್ಲಿ ಬರುತ್ತಿಲ್ಲ. ಎಲ್ಲರೂ ಸಿನಿಮಾವನ್ನು ನೋಡಿ'' ಎಂದು ಮೆಚ್ಚುಗೆ ಸೂಚಿಸಿದ್ದಾರೆ.

    rishab shetty and yogaraj bhat liked Iruvudellava Bittu Iruve Bittukolluvude Jeevana movie trailer


    ಅಂದಹಾಗೆ, 'ಇರುವುದೆಲ್ಲವ ಬಿಟ್ಟು' ಸಿನಿಮಾದಲ್ಲಿ ನಟಿ ಮೇಘನಾ ರಾಜ್, ತಿಲಕ್ ಹಾಗೂ ಶ್ರೀ ಮಹದೇವ್ ನಟಿಸಿದ್ದಾರೆ. ಇತ್ತೀಚಿಗಷ್ಟೆ ದರ್ಶನ್ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ್ದು, ಟ್ರೇಲರ್ ಯೂ ಟ್ಯೂಬ್ ನಲ್ಲಿ ದೊಡ್ಡ ಹಿಟ್ ಆಗಿದೆ.

    English summary
    Kannada Director Rishab Shetty and Yogaraj Bhat liked 'Iruvudellava Bittu Iruve Bittukolluvude Jeevana' movie trailer.
    Monday, September 3, 2018, 19:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X