Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಿಷಿ ಕುಮಾರ ಸ್ವಾಮಿಜಿಯನ್ನು ತರಾಟೆ ತೆಗೆದುಕೊಂಡ ಅಪ್ಪು ಅಭಿಮಾನಿಗಳು
Recommended Video
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಪೋತಿಸ್ ಜಾಹೀರಾತಿನಲ್ಲಿ ಪವರ್ ಸ್ಟಾರ್ ಅಭಿನಯದ ಮಾಡಬಾರದಿತ್ತು. ಅದಷ್ಟೇ ಅಲ್ಲದೆ ಜಾಹೀರಾತು ಪ್ರಖ್ಯಾತಿ ಪಡೆಯಲು ಕೆಂಪೇಗೌಡರ ಹೆಸರನ್ನು ಬಳಸ ಬಾರದಿತ್ತು ಎಂದು ನಟ ಹಾಗೂ ಸ್ವಾಮಿಜಿ ರಿಷಿ ಕುಮಾರ ತಕರಾರು ತೆಗೆದಿದ್ದರು.
ಪೋತಿಸ್ ಕಂಪನಿಯ ಜಾಹೀರಾತು ಪ್ರಖ್ಯಾತಿ ಮಾಡುವ ಉದ್ದೇಶದಿಂದ ಕೆಂಪೇಗೌಡರ ಹೆಸರನ್ನ ಬಳಸಿಕೊಳ್ಳಲಾಗಿದೆ ಹಾಗೂ ರಾಜ್ ಕುಮಾರ್ ಅವರ ಪುತ್ರ ಇದರಲ್ಲಿ ಅಭಿನಯಿಸುವ ಮುನ್ನ ಯೋಚನೆ ಮಾಡಬೇಕಿತ್ತು ಎನ್ನುವ ಅಭಿಪ್ರಾಯವನ್ನ ವ್ಯಕ್ತ ಪಡಿಸಿದ್ದರು.
ಪುನೀತ್ ಜಾಹೀರಾತಿನ ವಿರುದ್ಧ ಆಕ್ರೋಶಗೊಂಡ ಕಾಳಿ ಸ್ವಾಮೀಜಿ
ಈ ವಿಚಾರ ತಿಳಿದ ಪುನೀತ್ ಅಭಿಮಾನಿಗಳು ರಿಷಿ ಕುಮಾರ ಅವರ ವಿರುದ್ಧ ಕಿಡಿ ಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಿಷಿ ವಿರುದ್ದ ಸ್ಟೇಟಸ್ ಹಾಕುವುದರ ಜೊತೆಯಲ್ಲಿ ರಿಷಿ ಕುಮಾರ ಸ್ವಾಮಿಜಿ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಎಚ್ಚೆತ್ತ ಕಾಳಿ ಸ್ವಾಮಿ ಮಾಡಿದ್ದೇನು ಗೊತ್ತಾ ಮುಂದೆ ಓದಿ
ಕಾಳಿ ಸ್ವಾಮಿಗೆ ಅಪ್ಪು ಅಭಿಮಾನಿಗಳ ಪ್ರಶ್ನೆ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜಾಹೀರಾತಿನಲ್ಲಿ ಕೆಂಪೇಗೌಡರ ಹೆಸರನ್ನ ಬಳಸಿಕೊಳ್ಳಲಾಗಿದೆ. ಜಾಹೀರಾತಿನಲ್ಲಿ ಪುನೀತ್ ಅಭಿನಯಿಸಬಾರದಿತ್ತು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ ಕಾಳಿ ಸ್ವಾಮಿ ವಿರುದ್ದ ಅಪ್ಪು ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ.
ನೀವು ಸ್ವಾಮಿಯೇ ಅಲ್ಲ
ಕಾಳಿ ಸ್ವಾಮಿಗೆ ಕರೆ ಮಾಡಿ ಪ್ರಶ್ನೆ ಮಾಡಿರುವ ಅಭಿಮಾನಿಗಳು . ನೀವು ಸಿನಿಮಾಗಳಲ್ಲಿ ಅಭಿನಯಿಸುತ್ತೀರ, ಚಿತ್ರದಲ್ಲಿ ಸಿಗರೇಟ್ ಸೇದುತ್ತಿರ, ಹುಡುಗಿಯರ ಜೊತೆ ಡ್ಯಾನ್ಸ್ ಮಾಡುತ್ತೀರಾ ನೀವು ಹೇಗೆ ಸ್ವಾಮಿ ಆಗುತ್ತೀರಾ ಎಂದಿದ್ದಾರೆ.
ನನ್ನ ಮಾತು ಕೇಳಿ ಎಂದ ಕಾಳಿ ಸ್ವಾಮಿ
ಅಭಿಮಾನಿಗಳು ಮೇಲಿಂದ ಮೇಲೆ ಕರೆ ಮಾಡಲು ಶುರು ಮಾಡಿದ ನಂತರ ಫೇಸ್ ಬುಕ್ ನಲ್ಲಿ ಲೈವ್ ಮಾಡಿದ ರಿಷಿ ಕುಮಾರ ಸ್ವಾಮಿ ನನ್ನ ಮಾತನ್ನ ಕೇಳಿ ನನ್ನ ಕೋಪ ಪುನೀತ್ ಮೇಲೆ ಅಲ್ಲ, ಪೋತಿಸ್ ಮಾಲೀಕರ ಮೇಲೆ ಎಂದಿದ್ದಾರೆ.
ನಾನು ಕೂಡ ಪುನೀತ್ ಅಭಿಮಾನಿ
ಲೈವ್ ನಲ್ಲಿ ನಾನು ಪವರ್ ಸ್ಟಾರ್ ಪುನೀತ್ ಕುಮಾರ್ ಅಭಿಮಾನಿ ನನ್ನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೀರ, ನನ್ನ ಹೋರಾಟ ಪೋತಿಸ್ ಸಂಸ್ಥೆಯ ಮೇಲೆ ಹೊರತು ರಾಜ್ ಕುಮಾರ್ ಕುಟುಂಬದ ಮೇಲೆ ಅಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.