Don't Miss!
- News Gold Price: ಇಂದು ಮತ್ತಷ್ಟು ಹೆಚ್ಚಾದ ಬಂಗಾರದ ಬೆಲೆ: ಬೆಳ್ಳಿಯೂ ಬಲು ದುಬಾರಿ
- Technology AI Camera: ಎಐ ಕ್ಯಾಮೆರಾ ಆಯ್ಕೆ ಇರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳಿವು! ಬೆಲೆ ಎಷ್ಟು ?
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಿಷಿ ಕುಮಾರ ಸ್ವಾಮಿಜಿಯನ್ನು ತರಾಟೆ ತೆಗೆದುಕೊಂಡ ಅಪ್ಪು ಅಭಿಮಾನಿಗಳು
Recommended Video
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಪೋತಿಸ್ ಜಾಹೀರಾತಿನಲ್ಲಿ ಪವರ್ ಸ್ಟಾರ್ ಅಭಿನಯದ ಮಾಡಬಾರದಿತ್ತು. ಅದಷ್ಟೇ ಅಲ್ಲದೆ ಜಾಹೀರಾತು ಪ್ರಖ್ಯಾತಿ ಪಡೆಯಲು ಕೆಂಪೇಗೌಡರ ಹೆಸರನ್ನು ಬಳಸ ಬಾರದಿತ್ತು ಎಂದು ನಟ ಹಾಗೂ ಸ್ವಾಮಿಜಿ ರಿಷಿ ಕುಮಾರ ತಕರಾರು ತೆಗೆದಿದ್ದರು.
ಪೋತಿಸ್ ಕಂಪನಿಯ ಜಾಹೀರಾತು ಪ್ರಖ್ಯಾತಿ ಮಾಡುವ ಉದ್ದೇಶದಿಂದ ಕೆಂಪೇಗೌಡರ ಹೆಸರನ್ನ ಬಳಸಿಕೊಳ್ಳಲಾಗಿದೆ ಹಾಗೂ ರಾಜ್ ಕುಮಾರ್ ಅವರ ಪುತ್ರ ಇದರಲ್ಲಿ ಅಭಿನಯಿಸುವ ಮುನ್ನ ಯೋಚನೆ ಮಾಡಬೇಕಿತ್ತು ಎನ್ನುವ ಅಭಿಪ್ರಾಯವನ್ನ ವ್ಯಕ್ತ ಪಡಿಸಿದ್ದರು.
ಪುನೀತ್ ಜಾಹೀರಾತಿನ ವಿರುದ್ಧ ಆಕ್ರೋಶಗೊಂಡ ಕಾಳಿ ಸ್ವಾಮೀಜಿ
ಈ ವಿಚಾರ ತಿಳಿದ ಪುನೀತ್ ಅಭಿಮಾನಿಗಳು ರಿಷಿ ಕುಮಾರ ಅವರ ವಿರುದ್ಧ ಕಿಡಿ ಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಿಷಿ ವಿರುದ್ದ ಸ್ಟೇಟಸ್ ಹಾಕುವುದರ ಜೊತೆಯಲ್ಲಿ ರಿಷಿ ಕುಮಾರ ಸ್ವಾಮಿಜಿ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಎಚ್ಚೆತ್ತ ಕಾಳಿ ಸ್ವಾಮಿ ಮಾಡಿದ್ದೇನು ಗೊತ್ತಾ ಮುಂದೆ ಓದಿ
ಕಾಳಿ ಸ್ವಾಮಿಗೆ ಅಪ್ಪು ಅಭಿಮಾನಿಗಳ ಪ್ರಶ್ನೆ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜಾಹೀರಾತಿನಲ್ಲಿ ಕೆಂಪೇಗೌಡರ ಹೆಸರನ್ನ ಬಳಸಿಕೊಳ್ಳಲಾಗಿದೆ. ಜಾಹೀರಾತಿನಲ್ಲಿ ಪುನೀತ್ ಅಭಿನಯಿಸಬಾರದಿತ್ತು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ ಕಾಳಿ ಸ್ವಾಮಿ ವಿರುದ್ದ ಅಪ್ಪು ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ.
ನೀವು ಸ್ವಾಮಿಯೇ ಅಲ್ಲ
ಕಾಳಿ ಸ್ವಾಮಿಗೆ ಕರೆ ಮಾಡಿ ಪ್ರಶ್ನೆ ಮಾಡಿರುವ ಅಭಿಮಾನಿಗಳು . ನೀವು ಸಿನಿಮಾಗಳಲ್ಲಿ ಅಭಿನಯಿಸುತ್ತೀರ, ಚಿತ್ರದಲ್ಲಿ ಸಿಗರೇಟ್ ಸೇದುತ್ತಿರ, ಹುಡುಗಿಯರ ಜೊತೆ ಡ್ಯಾನ್ಸ್ ಮಾಡುತ್ತೀರಾ ನೀವು ಹೇಗೆ ಸ್ವಾಮಿ ಆಗುತ್ತೀರಾ ಎಂದಿದ್ದಾರೆ.
ನನ್ನ ಮಾತು ಕೇಳಿ ಎಂದ ಕಾಳಿ ಸ್ವಾಮಿ
ಅಭಿಮಾನಿಗಳು ಮೇಲಿಂದ ಮೇಲೆ ಕರೆ ಮಾಡಲು ಶುರು ಮಾಡಿದ ನಂತರ ಫೇಸ್ ಬುಕ್ ನಲ್ಲಿ ಲೈವ್ ಮಾಡಿದ ರಿಷಿ ಕುಮಾರ ಸ್ವಾಮಿ ನನ್ನ ಮಾತನ್ನ ಕೇಳಿ ನನ್ನ ಕೋಪ ಪುನೀತ್ ಮೇಲೆ ಅಲ್ಲ, ಪೋತಿಸ್ ಮಾಲೀಕರ ಮೇಲೆ ಎಂದಿದ್ದಾರೆ.
ನಾನು ಕೂಡ ಪುನೀತ್ ಅಭಿಮಾನಿ
ಲೈವ್ ನಲ್ಲಿ ನಾನು ಪವರ್ ಸ್ಟಾರ್ ಪುನೀತ್ ಕುಮಾರ್ ಅಭಿಮಾನಿ ನನ್ನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೀರ, ನನ್ನ ಹೋರಾಟ ಪೋತಿಸ್ ಸಂಸ್ಥೆಯ ಮೇಲೆ ಹೊರತು ರಾಜ್ ಕುಮಾರ್ ಕುಟುಂಬದ ಮೇಲೆ ಅಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.