Don't Miss!
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾರ್ ಅಪಘಾತ: ನಟಿ ರಿಷಿಕಾ ಸಿಂಗ್, ಜೈಜಗದೀಶ್ ಮಗಳು ಅರ್ಪಿತಾಗೆ ಗಾಯ
ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಗಳು, ನಟಿ ರಿಷಿಕಾ ಸಿಂಗ್ (ರೋಹಿಣಿ ಸಿಂಗ್) ಮತ್ತು ನಟ ಜೈಜಗದೀಶ್ ಮಗಳು ಅರ್ಪಿತಾ ಅವರಿದ್ದ ಕಾರು ಮಂಗಳವಾರ ಬೆಳಿಗ್ಗೆ ಯಲಹಂಕದಲ್ಲಿ ಅಪಘಾತಕ್ಕೀಡಾಗಿದೆ.
Recommended Video
ಮಂಗಳವಾರ ಬೆಳಿಗ್ಗೆ 5.50-6 ಗಂಟೆ ಸುಮಾರಿಗೆ ಯಲಹಂಕ-ಮಾವಳ್ಳಿಪುರ ರಸ್ತೆಯ ರಾಜಾನುಕುಂಟೆಯ ಮಾವಳ್ಳಿ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಫಾರ್ಚೂನರ್ ಕಾರು ನೀಲಗಿರಿ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ. ಕಾರ್ನಲ್ಲಿ ರಿಷಿಕಾ ಸಿಂಗ್, ಅರ್ಪಿತಾ ಮತ್ತು ಅವರ ಸ್ನೇಹಿತ ಇದ್ದರು ಎನ್ನಲಾಗಿದೆ.
ಆ ರಾತ್ರಿ ವಾಸ್ತವವಾಗಿ ನಡೆದಿದ್ದು ಏನು? ನಟಿ ಶರ್ಮಿಳಾ ಮಾಂಡ್ರೆ ಹೇಳಿದ ಸಂಗತಿ...
ಅಪಘಾತದಿಂದ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅರ್ಪಿತಾ, ರಿಷಿಕಾ ಹಾಗೂ ಕಾರು ಚಾಲನೆ ಮಾಡುತ್ತಿದ್ದ ಅವರ ಸ್ನೇಹಿತನಿಗೆ ಸಣ್ಣ ಪುಟ್ಟ ಗಾಯಗಳಾಗಿತ್ತು. ಮುಂದೆ ಓದಿ...
ರಿಷಿಕಾ, ಅರ್ಪಿತಾ ಆಸ್ಪತ್ರೆಗೆ
ಅಪಘಾತ ಸಂಭವಿಸಿದ್ದು ಕಂಡ ಸುತ್ತಮತ್ತಲಿನ ಜನರು ಸಹಾಯಕ್ಕೆ ಬಂದರು. ಆಂಬುಲೆನ್ಸ್ ಕರೆಸಿ ರಿಷಿಕಾ ಮತ್ತು ಅರ್ಪಿತಾ ಅವರನ್ನು ಶೇಷಾದ್ರಿಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಸ್ವಲ್ಪ ತರಚಿದ ಗಾಯಗಳಾಗಿದ್ದ ಅವರ ಸ್ನೇಹಿತ ಸ್ಥಳದಲ್ಲಿಯೇ ಇದ್ದರು. ನಂತರ ಅವರ ಸ್ನೇಹಿತರ ಕಾರೊಂದು ಅಲ್ಲಿಗೆ ಬಂದಿದ್ದು, ಅದರಲ್ಲಿ ತೆರಳಿದ್ದಾರೆ.
ಎರಡು ದಿನದ ಹಿಂದಿನ ಘಟನೆ
ಮಂಗಳವಾರ ಬೆಳಿಗ್ಗೆ ಈ ಘಟನೆ ನಡೆದಿದ್ದರೂ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ಸ್ಥಳಕ್ಕೆ ಪೊಲೀಸರು 9 ಗಂಟೆ ಸುಮಾರಿಗೆ ಬಂದು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆ ನಡೆದು 48 ಗಂಟೆಗಳಾದರೂ ಪ್ರಕರಣ ದಾಖಲಾಗಿಲ್ಲ ಎಂದು ಹೇಳಲಾಗಿದೆ.
ಆಘಾತ, ನೋವುಗಳ ನಡುವೆ ನನ್ನನ್ನು ಖಿನ್ನತೆ ಆವರಿಸಿತ್ತು: ಶರ್ಮಿಳಾ ಮಾಂಡ್ರೆ
ಪ್ರತ್ಯಕ್ಷದರ್ಶಿಯ ಹೇಳಿಕೆ
ವೇಗವಾಗಿ ಬಂದ ಕಾರು ನೀಲಗಿರಿ ಮರಕ್ಕೆ ಡಿಕ್ಕಿ ಹೊಡೆದಿದೆ. ಮಾವಳ್ಳಿಪುರದಿಂದ ಬರುತ್ತಿದ್ದ ಅವರಿಗೆ ತಿರುವು ಇರುವುದು ಗೊತ್ತಾಗಿಲ್ಲ. ಎಡಗಡೆಯಿಂದ ಬಂದು ಮರಕ್ಕೆ ಹೊಡೆದಿದೆ. ಪೊಲೀಸರು ದೂರು ದಾಖಲಿಸುವುದು ಬೇಡ ಎನ್ನುತ್ತಿದ್ದರು. ಕಾರಿನ ಚಾಲಕ ಇಲ್ಲಿಯೇ ಇದ್ದರು. ನಂತರ ಅವರ ಸ್ನೇಹಿತರ ಕಾರಲ್ಲಿ ತೆರಳಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಖಾಸಗಿ ವಾಹಿನಿಗೆ ತಿಳಿಸಿದರು.
ಮುಚ್ಚಿ ಹಾಕಲು ಪ್ರಯತ್ನ?
ಎರಡು ಮೂರು ಮರಗಳಿಗೆ ಕಾರು ಉಜ್ಜಿಕೊಂಡು ಹೋಗಿದೆ. ಕಾರಿನ ಒಂದು ಟೈರ್ ಕಳಚಿ ಹೋಗಿದೆ. ಅವರ ಚಪ್ಪಲಿಗಳು ಸೇರಿದಂತೆ ಕೆಲವು ವಸ್ತುಗಳು ಸ್ಥಳದಲ್ಲಿಯೇ ಬಿದ್ದಿದೆ. ಅಪಘಾತ ಸಂಭವಿಸಿ ಎರಡು ದಿನಗಳಾದರೂ ಪ್ರಕರಣ ದಾಖಲಾಗಿಲ್ಲದೆ ಇರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ.