Don't Miss!
- News ಬಿಎಂಟಿಸಿ & ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳಕ್ಕೆ ಕಾರಣ ಏನು?-ಇಲ್ಲಿದೆ ಮಾಹಿತಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'3 ಪಾಯಿಂಟ್ ಹೇಳಿದ್ರೆ ಮಂಡ್ಯಗಿಂತ ವೈಬ್ರೆಷನ್ ಜಾಸ್ತಿ ಆಗುತ್ತೆ'
''ನನ್ನ ಸ್ನೇಹಿತರ ಕಡೆಯಿಂದ ನನಗೆ ಎಲ್ಲವೂ ಕ್ಲಿಯರ್ ಆಗಿದೆ, ಇನ್ನೇನಿದ್ರೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರಿಂದ ಸ್ಪಷ್ಟವಾಗಬೇಕಿದೆ'' ಎಂದು ನಟ ದರ್ಶನ್ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.
ಇದಕ್ಕೆ ಪ್ರತಿಯಾಗಿ ಪ್ರೆಸ್ಮೀಟ್ ಮಾಡಿದ ಉಮಾಪತಿ ಶ್ರೀನಿವಾಸ್ ಗೌಡ, ''ದರ್ಶನ್ ಅವರು ನನ್ನನ್ನು ಆರೋಪಿಯನ್ನಾಗಿ ಮಾಡಿಲ್ಲ, ನಿರ್ಮಾಪಕರ ಅಂಗಳದಲ್ಲಿ ಬಾಲ್ ಇದೆ, ಉಮಾಪತಿ ಬಕ್ರಾ ಆದ್ರಾ, ಅದನ್ನು ಅವರೇ ಸ್ಪಷ್ಟಪಡಿಸಬೇಕು ಅಂತ ಹೇಳಿದ್ದಾರೆ'' ಎಂದರು.
ಪೊಲೀಸರಿಂದ ಒತ್ತಡ, ಉಮಾಪತಿನಾ ಸಿಲುಕಿಸುವ ಷಡ್ಯಂತ್ರನಾ?
ಈ ನಡುವೆ ಮಾತು ಮುಂದುವರಿಸಿದ ಉಮಾಪತಿ, ''ಇನ್ನು ಮೂರು ಪಾಯಿಂಟ್ ಇದೆ, ಒಂದು ವೇಳೆ ನಾನು ಇದನ್ನು ಹೇಳಿದ್ರೆ ಮಂಡ್ಯಗಿಂತ ಜಾಸ್ತಿ ವೈಬ್ರೆಷನ್ ಆಗುತ್ತೆ, ಬೇಡ ಬಿಡಿ'' ಎನ್ನುವ ಮೂಲಕ ಈ ಪ್ರಕರಣದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದರು.
''ಹರ್ಷಾ ಲೋನ್ ತೆಗೆದುಕೊಳ್ಳುತ್ತಿದ್ದಾರೆ. ಅದಕ್ಕೆ ಉಮಾಪತಿ ಮತ್ತು ದರ್ಶನ್ ಅವರು ಶ್ಯೂರಿಟಿ ಹಾಕುತ್ತಿದ್ದಾರೆ. ಇಷ್ಟೇ ವಿಷಯ. ಆದರೆ, ನಮ್ಮ ಅರಿವಿಗೆ ಬಾರದೇ ಶ್ಯೂರಿಟಿ ಪ್ಲಾನ್ ಆಗಿದ್ದು ಹೇಗೆ ಎನ್ನುವುದೇ ಈಗ ಪ್ರಶ್ನೆಯಾಗಿದೆ'' ಎಂದು ಅನುಮಾನ ವ್ಯಕ್ತಪಡಿಸಿದರು.
ಅರುಣಾ ಕುಮಾರಿ ಸಂಬಂಧ ಬೆಂಗಳೂರಿನ ಜಯನಗರದಲ್ಲಿ ಹಾಗೂ ಮೈಸೂರಿನಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಶೀಘ್ರದಲ್ಲಿ ಸತ್ಯ ಹೊರಗೆ ಬರಲಿದೆ. ಅದುವರೆಗೂ ಕಾಯೋಣ ಎಂದು ಉಮಾಪತಿ ಪ್ರೆಸ್ಮೀಟ್ ಹೇಳಿದರು.
ನನ್ನನ್ನು ಗುಂಡಿಟ್ಟು ಸಾಯಿಸ್ತಾರಾ, ಆ ತಾಕತ್ತು ಇದಿಯಾ: ನಿರ್ಮಾಪಕ ಉಮಾಪತಿ ತಿರುಗೇಟು
Recommended Video
ಅರುಣಾ ಕುಮಾರಿ ಬಗ್ಗೆ ಮಾತಾನಾಡಿದ ದರ್ಶನ್, ''ಉಮಾಪತಿ ಅವರಿಂದಲೇ ನನಗೆ ಅರುಣಾ ಕುಮಾರಿ ಪರಿಚಯ ಆಗಿದ್ದು, ಲೋನ್ ಮಾಡಿಸುವುದು, ಶ್ಯೂರಿಟಿಗಾಗಿ ಪ್ರಾಪರ್ಟಿ ಪರಿಶೀಲನೆಗೆ ಬರುವುದು ಎಲ್ಲವೂ ತಿಳಿದ ಮೇಲೆ ನಾನು ಸ್ನೇಹಿತರನ್ನು ವಿಚಾರಿಸಿದೆ. ಈ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ರು ನಾನು ಸುಮ್ಮನೆ ಬಿಡುವುದಿಲ್ಲ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ'' ಎಂದಿದ್ದಾರೆ.