Don't Miss!
- News ನೇಹಾ ಹಿರೇಮಠ್ ಹತ್ಯೆ; ಕಾಣದ ಕೈಗಳಿಂದ ಕೊಲೆ ಆರೋಪಿ ರಕ್ಷಣೆ ಎಂದ ಜೆಡಿಎಸ್
- Finance bangalore royal challengers ತಂಡದಿಂದ ನಗರದ ಎರಡು ಕೆರೆಗಳ ಪುನರುಜ್ಜೀವನ
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರಾಬರ್ಟ್' ಫಸ್ಟ್ ಲುಕ್ ಆರ್ಭಟ: ಇಲ್ಲೂ ಇದೆ ಆ 'ಸಾಮಾನ್ಯ ಅಂಶ'
Recommended Video
ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ 25ನೇ ತಾರೀಕು ಬೆಳಿಗ್ಗೆ 11.45ಕ್ಕೆ ರಾಬರ್ಟ್ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದಂತೆ ಚಿತ್ರತಂಡ ಫಸ್ಟ್ ಲುಕ್ ಬಿಟ್ಟಿದೆ.
ನಿರೀಕ್ಷೆಯಂತೆ ರಾಬರ್ಟ್ ಫಸ್ಟ್ ಲುಕ್ ಗೆ ಡಿ ಬಾಸ್ ಭಕ್ತಗಣ ಖುಷ್ ಆಗಿದ್ದು, ಅದ್ಧೂರಿ ಸ್ವಾಗತ ಮಾಡಿದ್ದಾರೆ. ದರ್ಶನ್ ಅವರ ಹೊಸ ಲುಕ್, ಸ್ಟೈಲ್, ಗೆಟಪ್ ಕಂಡು ಅಚ್ಚರಿಯಾಗಿದ್ದಾರೆ.
ಡಿ ಬಾಸ್ 'ರಾಬರ್ಟ್' ತಂಡದಿಂದ ಹೊರಬಿತ್ತು ಭರ್ಜರಿ ಸುದ್ದಿ
ಕೈಯಲ್ಲಿ ಗನ್, ಕಪ್ಪು ಬಣ್ಣದ ಜಾಕೆಟ್, ಕತ್ತಲ್ಲಿ ಯೇಸುವಿನ ಶಿಲುಬೆ, ಲಾಂಗ್ ಹೇರ್...ಜೊತೆಗೆ ಭರ್ಜರಿ ಮ್ಯೂಸಿಕ್, ಇದೆಲ್ಲವೂ ಪ್ರೇಕ್ಷಕರು ಕುತೂಹಲವನ್ನ ಮತ್ತಷ್ಟು ಹೆಚ್ಚಿಸಿದೆ. ಹೀಗಿದ್ದರೂ ಈ ಫಸ್ಟ್ ಲುಕ್ನಲ್ಲಿ ಒಂದು ಸಾಮಾನ್ಯ ಅಂಶ ಕಂಡುಬಂದಿದೆ. ಏನದು? ಮುಂದೆ ಓದಿ.....
'ಬಾಸ್' ಬಿಡದ ಡೈರೆಕ್ಟರ್
ದರ್ಶನ್ ಅವರ ಚಿತ್ರಗಳ ಟೀಸರ್ ನಲ್ಲಿ ಬಾಸ್ ಅಥವಾ ಡಿ ಬಾಸ್ ಎನ್ನುವ ಹೆಸರು ಸಾಮಾನ್ಯವಾಗಿ ಕಂಡುಬರುತ್ತೆ. ಇದು ಅಭಿಮಾನಿಗಳಿಗೂ ಖುಷಿ ಕೊಡುತ್ತೆ. ಈಗ ರಾಬರ್ಟ್ ಚಿತ್ರದ ಮೋಷನ್ ಪೋಸ್ಟರ್ ನಲ್ಲೂ ಜೀಪ್ ಗೆ ಕಾರು ನಂಬರ್ ಬದಲು ಬಾಸ್ ಎಂದು ಬರೆಯಲಾಗಿದೆ.
ಯಜಮಾನ ಟ್ರೈಲರ್ನಲ್ಲೂ ಇತ್ತು
ಈ ಹಿಂದೆ ತೆರೆಕಂಡಿದ್ದ ಯಜಮಾನ ಚಿತ್ರದಲ್ಲೂ ಈ ಬಾಸ್ ಸದ್ದು ಮಾಡಿತ್ತು. ಟ್ರೈಲರ್ ನಲ್ಲಿ ದರ್ಶನ್ ಇಂಟ್ರೊಡಕ್ಷನ್ ಗೂ ಮುಂಚೆ ಆಕಾಸದಲ್ಲಿ ಮೂಡುವ ಸಿಡಿಲಿನಲ್ಲಿ ಬಾಸ್ ಎಂದು ಬಂದು ಹೋಗುತ್ತೆ. ಇದು ದರ್ಶನ್ ಚಿತ್ರಗಳಲ್ಲಿ ಸಹಜವಾಗಿ ಕಂಡು ಬರುತ್ತಿದೆ. ಇದರಿಂದ ಅಭಿಮಾನಿಗಳಲ್ಲೂ ಜೋಶ್ ಹೆಚ್ಚುತ್ತಿದೆ ಎನ್ನಲಾಗುತ್ತಿದೆ.
ಆಶಾ ಭಟ್ ನಂತರ 'ರಾಬರ್ಟ್' ಟೀಮ್ ಗೆ ಬಂದ ಮತ್ತೊಬ್ಬ ಚೆಲುವೆ
ವಾರಾಣಸಿಯಲ್ಲಿ ರಾಬರ್ಟ್
ರಾಬರ್ಟ್ ಚಿತ್ರದ ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡ ಸದ್ಯ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಬೀಡುಬಿಟ್ಟಿದೆ. ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣಕ್ಕಾಗಿ ಭಾರತದ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿರುವ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಇತ್ತೀಚಿಗಷ್ಟೆ ಈ ಫೋಟೋವನ್ನು ತರುಣ್ ಸುಧೀರ್ ಪೋಸ್ಟ್ ಮಾಡಿದ್ದರು.
ಯಾವಾಗ ರಾಬರ್ಟ್?
ಹೆಬ್ಬುಲಿ ನಿರ್ಮಿಸಿದ್ದ ಉಮಾಪತಿ ಶ್ರೀನಿವಾಸ ಗೌಡ ಈ ಚಿತ್ರ ನಿರ್ಮಿಸುತ್ತಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವಿನೋದ್ ಪ್ರಭಾಕರ್, ಆಶಾ ಭಟ್, ಜಗಪತಿ ಬಾಬು, ರವಿ ಕಿಶನ್ ಈ ಚಿತ್ರದಲ್ಲಿ ನಟಿಸುತ್ತಿದ್ದು, 2020ರ ಫಸ್ಟ್ ಹಾಫ್ ನಲ್ಲಿ ಈ ಸಿನಿಮಾ ನಿರೀಕ್ಷಿಸಬಹುದು.