Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ನಾಗರಹಾವು' ಚಿತ್ರಕ್ಕಾಗಿ ಮತ್ತೆ ವಿಷ್ಣು ಫ್ಯಾನ್ ಆದ ರಾಕಿಂಗ್ ಸ್ಟಾರ್
Recommended Video
'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಡಾ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿದ್ದರು. ಇದೀಗ, ಮತ್ತೆ ಅದೇ ವಿಷ್ಣುವರ್ಧನ್ ಗಾಗಿ ಯಶ್ ಮತ್ತೊಮ್ಮೆ ಅಭಿಮಾನಿಯಾಗಿದ್ದಾರೆ.
ಹೌದು, ಸಾಹಸ ಸಿಂಹ ವಿಷ್ಣುವರ್ಧನ್ ನಾಯಕನಾಗಿ ಅಭಿನಯಿಸಿದ್ದ ಚೊಚ್ಚಲ ಸಿನಿಮಾ 'ನಾಗರಹಾವು' ಇದೇ ವಾರ (ಜುಲೈ 20) ರಂದು ಹೊಸ ತಂತ್ರಜ್ಞಾನದಲ್ಲಿ, ಸಿನಿಮಾಸ್ಕೋಪ್ ಅವತಾರದಲ್ಲಿ ರಿ-ರಿಲೀಸ್ ಆಗ್ತಿದೆ. ಈ ಸಿನಿಮಾವನ್ನ ನೋಡಲು ರಾಕಿಂಗ್ ಸ್ಟಾರ್ ಮತ್ತೆ ಫ್ಯಾನ್ ಆಗಿದ್ದಾರೆ ಎಂದು ಸ್ವತಃ ಅವರೇ ಹೇಳಿದ್ದಾರೆ.
'ನಾಗರಹಾವು' ಚಿತ್ರದ ಬಗ್ಗೆ ಹಾಗೂ ವಿಷ್ಣುದಾದಾ ಬಗ್ಗೆ ಮಾತನಾಡಿರುವ ಯಶ್ ಆ ರಾಮಾಚಾರಿಯ ಬಗ್ಗೆ ಇಂಟ್ರೆಸ್ಟಿಂಗ್ ವಿಷ್ಯಗಳನ್ನ ಹಂಚಿಕೊಂಡಿದ್ದಾರೆ. ಪುಟ್ಣಣ್ಣ ಅವರ ನಾಗರಹಾವಿನ ಬಗ್ಗೆ ಹೊಸ ರಾಮಾಚಾರಿ ಏನಂದ್ರು ಎಂಬುದನ್ನ ಮುಂದೆ ಓದಿ....
ನನ್ನಲ್ಲಿರುವ ಅಭಿಮಾನಿ ಮತ್ತೆ ಬರ್ತಾನೆ
''ನಾಗರಹಾವು ಸಿನಿಮಾ ಮತ್ತೆ ಬರ್ತಿದೆ ಅಂದ್ರೆ ನಾನು ಮತ್ತೆ ಫ್ಯಾನ್ ಆಗ್ತೀನಿ. ನನ್ನಲ್ಲಿರುವ ಅಭಿಮಾನಿ ಮತ್ತೆ ಬರ್ತಾನೆ. ಚಿಕ್ಕ ವಯಸ್ಸಿನಿಂದಲೂ ಈ ಸಿನಿಮಾ ನೋಡಿದ್ದೀನಿ. ಈಗಲೂ ಅಷ್ಟು ಬೋಲ್ಡ್ ಆಗಿ ಯಾರೂ ಆಕ್ಟ್ ಮಾಡೋಕೆ ಆಗಲ್ಲ.''
'ನಾಗರಹಾವು' ಸಿನಿಮಾ ಬಗ್ಗೆ ಮಾತನಾಡುವ ಯೋಗ್ಯತೆ ನನಗೆ ಇಲ್ಲ
ಅಭಿಮಾನಿಗಳು ಹಬ್ಬ ಮಾಡ್ಬೇಕು
''ಈ ಸಿನಿಮಾ ಬರ್ತಿರೋದು ತುಂಬಾ ಖುಷಿ. ಇಂದಿನ ಅನೇಕ ವಿಷ್ಯಗಳು ಆ ಚಿತ್ರದಲ್ಲಿದೆ. ವಿಷ್ಣು ಸರ್ ಮತ್ತೆ ತೆರೆಮೇಲೆ ಬರ್ತಿರೋದು ಮತ್ತೆ ನಮಗೆ ಹಬ್ಬ. ಅದನ್ನ ಆಚರಿಸಬೇಕು ಅಷ್ಟೇ. ಬರಿ ವಿಷ್ಣು ಸರ್ ಫ್ಯಾನ್ಸ್ ಮಾತ್ರವಲ್ಲ, ಇಡೀ ಕರ್ನಾಟಕದ ಜನ ಇದನ್ನ ಹಬ್ಬ ಮಾಡ್ಬೇಕು''.
'ರಾಮಾಚಾರಿ' ಕಥೆ ಹೇಳಿದಾಗ...
''ನಾಗರಹಾವು ಚಿತ್ರದ ರಾಮಾಚಾರಿ ಪಾತ್ರವನ್ನಿಟ್ಟು ಕಥೆ ಮಾಡಿರುವ ಪಾತ್ರ ಅಂದಾಗ, ಫಸ್ಟ್ ಹಾವಿನ ದ್ವೇಷ ಹಾಡು ತಲೆಗೆ ಬಂತು, ನನಗೆ ಆ ರಾಮಾಚಾರಿ ತುಂಬಾ ಕಾಡಿರುವ ಪಾತ್ರ. ಆವತ್ತು ಮಾಡಿರುವ ಪಾತ್ರ ಇವತ್ತು ಎಲ್ಲರಿಗೂ ಸಂಬಂಧ ಕಲ್ಪಿಸುತ್ತೆ, ಇನ್ನು 20 ವರ್ಷ ಬಿಟ್ರು ರಿಲೇಟ್ ಆಗುತ್ತೆ. ಯಾಕಂದ್ರೆ ಅದು ಅಷ್ಟು ತೂಕವಿರುವ ಕ್ಯಾರೆಕ್ಟರ್'' - ಯಶ್
ಟಿಕೆಟ್ ತಗೊಂಡು 'ನಾಗರಹಾವು' ಸಿನಿಮಾ ನೋಡ್ತಿನಿ ಎಂದ ಅಂಬಿ
ತುಂಬಾ ಎಂಜಾಯ್ ಮಾಡಿದ್ದೀನಿ
''ನಾನೊಬ್ಬ ಪ್ರೇಕ್ಷಕನಾಗಿ ವಿಷ್ಣು ಸರ್ ಅವರ ಸಿನಿಮಾ ನೋಡಿ ಎಂಜಾಯ್ ಮಾಡಿದ್ದೀವಿ. ಅದು ಆ ಸಿನಿಮಾಗೆ ಇರೋ ಪವರ್. ಆ ಚಿತ್ರ ಅಂಶ ನಮ್ಮ ಚಿತ್ರದಲ್ಲಿದೆ ಅಂದಾಗ ಬಹಳ ಖುಷಿ ಆಯ್ತು. ಆಗೊಂದು ನಿರ್ಧಾರ ಮಾಡಿದ್ವಿ. ಅಲ್ಲಿರೋದನ್ನ ಎಲ್ಲೋ ಬಳಕೆ ಮಾಡಿಕೊಂಡ್ವಿ ಅಂತ ಬರಬಾರದು, ವಿಷ್ಣು ಸರ್ ಗೆ ಆ ಚಿತ್ರಕ್ಕೆ ನಾವು ಕೊಡೋ ಗೌರವ ಸಿಗಬೇಕು ಅಂತ'' - ಯಶ್
ನಮ್ಮ ಚಿತ್ರದಲ್ಲಿ ಟ್ಯಾಟೋ ಹಾಕಿದ್ದು ಯಾಕೆ.?
''ಪ್ರತಿಯೊಬ್ಬ ಕಲಾವಿದನೂ ಹೀರೋ ಆಗೋ ಮುಂಚೆ ಇನ್ನೊಬ್ಬ ಹೀರೋಗೆ ಫ್ಯಾನ್. ವಿಷ್ಣು ಸರ್ ಗೆ ನನ್ನ ಎದೆಯಲ್ಲಿ ಸ್ಥಾನ. ನಾನೊಬ್ಬ ಅಭಿಮಾನಿ ಅಂತ ಸಂಭ್ರಮಿಸೋಕೆ ಅದು ಬೇಕಿತ್ತು.''
'ನಾಗರಹಾವು' ಸಿನಿಮಾ ನೋಡಿ ಪುಟ್ಟಣ್ಣ ಬಳಿ ಶಿವಣ್ಣ ಹೇಳಿದ್ದೇನು.?
ನಮಗೆ ಸಿಕ್ಕಿರುವ ಗಿಫ್ಟ್
''ನಾನು ರಾಧಿಕಾ ಈಗಲೂ ಎಲ್ಲೇ ಹೋದ್ರು ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಅಂತಾಲೆ ಕರೆಯುತ್ತಾರೆ. ಅದು ಹಾಗೆ ಉಳಿದುಕೊಂಡಿದೆ. ಅದು ಈ ಚಿತ್ರದಿಂದ. ತುಂಬಾ ಖುಷಿ ಇದೆ''.