Don't Miss!
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- News Karnataka Rain: ರಾಜ್ಯಕ್ಕೆ ಶೇ.20ರಷ್ಟು ಮಳೆ ಕೊರತೆ: ಏಪ್ರಿಲ್ 25 ದಿನದಲ್ಲಿ ಸುರಿದ ಮಳೆ ವರದಿ ಇಲ್ಲಿದೆ
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಕ್ ಲೈನ್ ನಿರ್ಮಾಣದ ಅದ್ದೂರಿ ಐತಿಹಾಸಿಕ ಚಿತ್ರದಲ್ಲಿ ದರ್ಶನ್
Recommended Video
ಕನ್ನಡದಲ್ಲಿ ಸದ್ಯ ಐತಿಹಾಸಿಕ ಮತ್ತು ಪೌರಾಣಿಕ ಸಿನಿಮಾ ಅಂದರೆ ಮೊದಲು ನೆನಪಿಗೆ ಬರುವ ನಟ ದರ್ಶನ್ ಇರಬೇಕು. ಯಾಕೆಂದರೆ, ಈಗ ಅವರಿಗೆ ಬರುತ್ತಿರುವ ಆಫರ್ ಗಳಲ್ಲಿ ಐತಿಹಾಸಿಕ ಮತ್ತು ಪೌರಾಣಿಕ ಚಿತ್ರಗಳು ಹೆಚ್ಚಾಗುತ್ತಿವೆ.
ಈಗಾಗಲೇ, 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾ ಮಾಡಿ ಕನ್ನಡಿಗರಿಂದ ಜೈಕಾರ ಹಾಕಿಸಿಕೊಂಡ ದರ್ಶನ್ ಇದೀಗ 'ಕುರುಕ್ಷೇತ್ರ' ಚಿತ್ರವನ್ನು ಸಹ ಮಾಡುತ್ತಿದ್ದಾರೆ. ಇದರ ಬಳಿಕ ಈಗ ಮತ್ತೆ ದರ್ಶನ್ ಐತಿಹಾಸಿಕ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಕೇಳಿಬಂದಿದೆ.
ಮತ್ತೊಂದು ಮಹತ್ವದ ಪಾತ್ರದಲ್ಲಿ ಡಿ ಬಾಸ್ : ಭಗತ್ ಸಿಂಗ್ ಆದ ದರ್ಶನ್!
ಅಂದಹಾಗೆ, ದರ್ಶನ್ ಅವರ ಮುಂದಿನ ಐತಿಹಾಸಿಕ ಸಿನಿಮಾ ಯಾವುದು? ಎಂಬ ವಿವರ ಮುಂದಿದೆ ಓದಿ..
'ವೀರ ಮದಕರಿನಾಯಕ'ನಾದ ಚಾಲೆಂಜಿಂಗ್ ಸ್ಟಾರ್
ನಟ ದರ್ಶನ್ ಸಂಗೊಳ್ಳಿ ರಾಯಣ್ಣ ಹಾಗೂ ಧುರ್ಯೋಧನನ ಪಾತ್ರಗಳ ಬಳಿಕ ಈಗ 'ವೀರ ಮದಕರಿನಾಯಕ'ನಾಗುವ ಸಮಯ ಬಂದಿದೆ. ಸ್ಯಾಂಡಲ್ ವುಡ್ ನಲ್ಲಿ ಮದಕರಿ ನಾಯಕರ ಜೀವನಾಧಾರಿತ ಸಿನಿಮಾ ಬರುತ್ತಿದ್ದು, ಇದಕ್ಕೆ ದರ್ಶನ್ ನಾಯಕರಗುವ ಸಾಧ್ಯತೆ ಇದೆ.
ಇದು ದೊಡ್ಡ ಅಚ್ಚರಿ, ಆದರೂ ಸತ್ಯ : ಒಂದೇ ಚಿತ್ರದಲ್ಲಿ ಶಿವಣ್ಣ, ದರ್ಶನ್!
ರಾಕ್ ಲೈನ್ ವೆಂಕಟೇಶ್ ನಿರ್ಮಾಣ
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಈ ಮಹಾ ಸಿನಿಮಾವನ್ನು ಮಾಡುವ ಕನಸು ಹೊಂದಿದ್ದಾರೆ. ರಾಕ್ ಲೈನ್ ಸಿನಿಮಾ ಅಂದಮೇಲೆ ಇದೊಂದು ಅದ್ದೂರಿ ಚಿತ್ರ ಆಗಿರಲಿದೆ. ಈ ಚಿತ್ರ ತಮ್ಮ ಬ್ಯಾನರ್ ಹಾಗೂ ದರ್ಶನ್ ಇಬ್ಬರಿಗೆ ಒಳ್ಳೆಯ ಹೆಸರು ತಂದುಕೊಡಲಿದೆ ಎಂಬ ನಂಬಿಕೆಯಲ್ಲಿ ರಾಕ್ ಲೈನ್ ಇದ್ದಾರೆ.
ಚಿತ್ರಕಥೆ ಕೆಲಸ ನಡೆಯುತ್ತಿದೆ
ಈಗಾಗಲೇ ಈ ಸಿನಿಮಾದ ಚಿತ್ರಕಥೆ ಕೆಲಸ ಶುರುವಾಗಿದೆಯಂತೆ. ಬಿ ಆರ್ ಮೇಣು ಚಿತ್ರದುರ್ಗದಲ್ಲಿ ಕುಳಿತು ಸಿನಿಮಾದ ಚಿತ್ರಕಥೆಯನ್ನು ಬರೆಯುತ್ತಿದ್ದಾರೆ. ಮುಂದಿನ ವರ್ಷ ಈ ಸಿನಿಮಾ ಲಾಂಚ್ ಆಗುವ ಸಾಧ್ಯತೆ ಇದೆ. ಸಿಪ್ಟ್ ಕೆಲಸ ಮುಗಿದ ಮೇಲೆ ಚಿತ್ರದ ಒಂದೊಂದೆ ವಿಷಯ ತಿಳಿಯಲಿದೆ.
ಭಗತ್ ಸಿಂಗ್ ಪಾತ್ರದಲ್ಲಿ ದರ್ಶನ್
ಈ ಚಿತ್ರಕ್ಕೆ ಮುಂಚೆ ಭಗತ್ ಸಿಂಗ್ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳುತ್ತಿದ್ದಾರೆ. ನಟ ಪ್ರಜ್ವಲ್ ದೇವರಾಜ್ ಅವರ 'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರದಲ್ಲಿ ದರ್ಶನ್ ಭಗತ್ ಸಿಂಗ್ ಆಗಿ ಆರ್ಭಟಿಸಲಿದ್ದಾರೆ. ಈ ಚಿತ್ರದ ದರ್ಶನ್ ಭಾಗದ ಚಿತ್ರೀಕರಣ ಸದ್ಯ ನಡೆಯುತ್ತಿದೆ.
ದರ್ಶನ್ ಮುಂದಿನ ಸಿನಿಮಾಗಳು
ದರ್ಶನ್ ಸದ್ಯ 'ಯಜಮಾನ' ಹಾಗೂ 'ಒಡೆಯ' ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಜೊತೆಗೆ ತರುಣ್ ಸುಧೀರ್ ನಿರ್ದೇಶನದ ಸಿನಿಮಾದಲ್ಲಿ ದರ್ಶನ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಉಮಾಪತಿ ನಿರ್ಮಾಣ ಮಾಡುತ್ತಿದ್ದಾರೆ.