Just In
- 28 min ago
ಡಿ ಬಾಸ್ ಜೊತೆ ಶಿವರಾಜ್ ಕೆ ಆರ್ ಪೇಟೆ ಪುತ್ರನ ಹುಟ್ಟುಹಬ್ಬ ಆಚರಣೆ: ವಿಶೇಷ ಗಿಫ್ಟ್ ನೀಡಿದ ದರ್ಶನ್
- 1 hr ago
'ಇನ್ಸ್ ಪೆಕ್ಟರ್ ವಿಕ್ರಂ' ರಿಲೀಸ್ ಡೇಟ್ ಫಿಕ್ಸ್: ದರ್ಶನ್ ಪಾತ್ರದ ಬಗ್ಗೆ ಪ್ರಜ್ವಲ್ ಹೇಳಿದ್ದೇನು?
- 1 hr ago
ನಿರ್ಮಾಣವಾಗುತ್ತಿದೆ 22 ವರ್ಷ ಹಿಂದಿನ ಸಿನಿಮಾದ ಮುಂದಿನ ಭಾಗ!
- 2 hrs ago
'ರಿಯಲ್ ಹೀರೋ' ಸೋನು ಸೂದ್ ಹೆಸರಿನಲ್ಲಿ ಆಂಬ್ಯುಲೆನ್ಸ್ ಸೇವೆ ಪ್ರಾರಂಭಿಸಿದ ಈಜುಗಾರ
Don't Miss!
- Education
Karnataka Bank PO Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Sports
IPL 2021 players retention Live Updates: ಉಳಿಸಿಕೊಳ್ಳುವವರ ಪಟ್ಟಿ
- Lifestyle
ಮಹಿಳೆಯರ ಪಾಲಿನ ಸಂಜೀವಿನಿ ಈ ಅಶ್ವಗಂಧ...!
- Automobiles
ಲ್ಯಾಂಬೊರ್ಗಿನಿ ಕಾರಿನ ಬಣ್ಣದಲ್ಲಿ ಮಾಡಿಫೈಗೊಂಡ ಹ್ಯುಂಡೈ ಎಲಾಂಟ್ರಾ
- News
2020ರಲ್ಲಿ 98 ಪೇಟೆಂಟ್ ಪಡೆದುಕೊಂಡ ಟಾಟಾ ಮೋಟಾರ್ಸ್
- Finance
ಕೇಂದ್ರ ಬಜೆಟ್ 2021: ಕೊರೊನಾ ಪೀಡಿತ ಆರ್ಥಿಕತೆ ಚೇತರಿಕೆಗೆ ಏನು ನಿರೀಕ್ಷಿಸಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರವಿಚಂದ್ರನ್ 'ಕನ್ನಡಿಗ' ಸಿನಿಮಾದಲ್ಲಿ ರಾಕ್ ಲೈನ್ ವೆಂಕಟೇಶ್
ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಬಹುನಿರೀಕ್ಷೆಯ ಕನ್ನಡಿಗ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ವೇಗವಾಗಿ ಚಿತ್ರೀಕರಣ ನಡೆಯುತ್ತಿದ್ದು, ಈಗಾಗಲೇ 80ರಷ್ಟು ಮುಕ್ತಾಯವಾಗಿದೆ. ವಿಭಿನ್ನ ಪಾತ್ರದಲ್ಲಿ ರವಿಚಂದ್ರನ್ ಕಾಣಿಸಿಕೊಳ್ಳುತ್ತಿದ್ದು, ಕ್ರೇಜಿ ಸ್ಟಾರ್ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ವಿಶೇಷ ಎಂದರೆ ಚಿತ್ರದಲ್ಲಿ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರವಿಚಂದ್ರನ್ ಗೆಳೆಯನ ಪಾತ್ರಕ್ಕೆ ರಾಕ್ ಲೈನ್ ಬಣ್ಣ ಹಚ್ಚಿದ್ದಾರೆ. ರಾಕ್ ಲೈನ್ ಮತ್ತು ರವಿಚಂದ್ರನ್ ಇಬ್ಬರು ಚಿತ್ರೀಕರಣ ಸೆಟ್ ನಲ್ಲಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜರ್ಮನ್ ಕನ್ನಡಿಗನನ್ನು ಭೇಟಿಯಾದ 'ಕನ್ನಡಿಗ' ರವಿಚಂದ್ರನ್
ಈ ಮೊದಲು ರವಿಚಂದ್ರನ್ ಮತ್ತ ರಾಕ್ ಲೈನ್ ವೆಂಕಟೇಶ್ ಇಬ್ಬರು ರಸಿಕ ಮತ್ತು ಪ್ರೀತ್ಸೋದ್ ತಪ್ಪಾ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಇದೀಗ ಮತ್ತೆ ಕನ್ನಡಿಗ ಸಿನಿಮಾ ಮೂಲಕ ಒಟ್ಟಿಗೆ ತೆರೆಮೇಲೆ ಬರ್ತಿದ್ದಾರೆ. ಇನ್ನೂ ಚಿತ್ರದ ಪ್ರಮುಖ ಪಾತ್ರದಲ್ಲಿ ನಿರ್ದೇಶಕ ಗುರುದತ್ ಸಹ ನಟಿಸುತ್ತಿದ್ದಾರೆ.
ಇತ್ತೀಚಿಗಷ್ಟೆ ಜೇಮಿ ಆಲ್ಟರ್ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದ ಮೊದಲು ನಿಘಂಟು ಸಂಪಾದಿಸಿದ ರೆವರೆಂಡ್ ಫರ್ನಾಂಡಿಸ್ ಕಿಟ್ಟೆಲ್ ಪಾತ್ರದಲ್ಲಿ ಕೊಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಜೇಮಿ ಆಲ್ಟರ್ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಚಿತ್ರೀಕರಣ ಸೆಟ್ ನಲ್ಲಿ ಜೇಮಿ ಆಲ್ಟರ್ ಜೊತೆ ರವಿಚಂದ್ರನ್ ಇರುವ ಫೋಟೋ ವೈರಲ್ ಆಗಿತ್ತು.
ಅಂದಹಾಗೆ 'ಕನ್ನಡಿಗ' ನಿರ್ದೇಶಕ ಬಿ ಎಂ ಗಿರಿರಾಜ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾ. 1858ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದ್ದು, ಆ ಕಾಲವನ್ನು ಮರುಸೃಷ್ಟಿ ಮಾಡಲಾಗಿದೆ. ಇಲ್ಲಿ ನಾಯಕಿಯಾಗಿ ಪಾವನಾ ನಟಿಸುತ್ತಿದ್ದಾರೆ. ಸಂಕಮ್ಮಬ್ಬೆಯಾಗಿ ಸ್ವಾನಿ ಚಂದ್ರಶೇಖರ್ ಕಾಣಿಸಿಕೊಂಡಿದ್ದಾರೆ, ಇನ್ನು ದತ್ತಣ್ಣ, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ.