Don't Miss!
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- News Government Employees; ಸರ್ಕಾರಿ ನೌಕರರ ಜೀವ ವಿಮೆ ಪಾಲಿಸಿ ಅವಧಿ ಏರಿಕೆ
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಮಾಪತಿ ನನ್ನನ್ನು ಉಪಯೋಗಿಸಿಕೊಂಡಿದ್ದು ತಪ್ಪು, ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ; ಅರುಣಾ ಕುಮಾರಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಹೆಸರಿನಲ್ಲಿ 25 ಕೋಟಿ ವಂಚನೆ ಯತ್ನ ಪ್ರಕರಣ ಕ್ಷಣಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಹರ್ಷ ಮಿಲಾಂಟ, ಉಮಾಪತಿ ಮತ್ತು ಆರೋಪಿ ಅರುಣಾ ಕುಮಾರಿ ಹೇಳಿಕೆಗಳು ಈಗ ಗೊಂದಲ ಸೃಷ್ಟಿ ಮಾಡುತ್ತಿವೆ.
Recommended Video
ದರ್ಶನ್, ಉಮಾಪತಿ ಪ್ರೆಸ್ ಮೀಟ್ ಬಳಿಕ ಇದೀಗ ಮೊದಲ ಬಾರಿಗೆ ಅರುಣಾ ಕುಮಾರಿ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಅರುಣಾ ಕುಮಾರಿ, ಉಮಾಪತಿ ವಿರುದ್ಧ ಕಿಡಿ ಕಾರಿದ್ದಾರೆ. "ಉಮಾಪತಿ ನನ್ನನ್ನು ಬಳಸಿಕೊಂಡಿದ್ದು ತಪ್ಪು, ಅವರೆಲ್ಲ ದೊಡ್ಡವರು ಕುಳಿತು ಬಗೆಹರಿಸಿಕೊಳ್ಳಬೇಕಿತ್ತು. ಈಗ ನನ್ನ ಸಂಪೂರ್ಣ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವಂತೆ ಆಗಿದೆ" ಎಂದು ಕಿಡಿ ಕಾರಿದರು.
"ನನ್ನನ್ನು ಯಾಕೆ ತೇಜೋವಧೆ ಮಾಡುತ್ತಿದ್ದೀರಿ? ಚಾಲಕಿ ಅಂತ ಕರೆಯುತ್ತಿದ್ದೀರಿ. ಹಾರ್ಟ್ ಇಮೋಜಿ ಯಾರು ಕಳುಹಿಸುವುದೇ ಇಲ್ವ. ಅಣ್ಣತಂಗಿಗೂ ಕಳುಹಿಸುತ್ತಾರೆ. ದರ್ಶನ್ ಮನೆಗೆ 2 ಸರಿ ಹೋಗಿದ್ದೀನಿ, ನಾನೇನು ಕಳ್ಳತನ ಮಾಡಿದ್ದೀನಾ, ದುಡ್ಡು ಕಿತ್ತಿದ್ದೀನಾ?" ಗುಡುಗಿದ್ದಾರೆ.
"ಇಲ್ಲಿ ಲೋನ್ಗೆ ಅಪ್ರೋಚ್ ಮಾಡಿದ್ದು ಅಷ್ಟೆ. ಲೋನ್ ಅಪ್ಲೈ ಮಾಡಿದಲ್ಲ" ಎಂದು ಅರುಣಾ ಕುಮಾರಿ ಸ್ಪಷ್ಟಪಡಿಸಿದ್ದಾರೆ.
"ನನ್ನ ಸಂಪೂರ್ಣ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವಂತೆ ಆಗಿದೆ. ದೊಡ್ಡ ದೊಡ್ಡವರು ಏನೆನ್ ಮಾಡ್ತಾರೋ ಗೊತ್ತಿಲ್ಲ. ನನ್ನ ಹತ್ರ ಸಾಕ್ಷಿ ಇದೆ ಇಟ್ಟಿದ್ದೀನಿ. ನನಗೆ ಆಗ್ತಿಲ್ಲ ಸರ್. ಫುಲ್ ಖಿನ್ನತೆಗೆ ಹೋಗಿದ್ದೀನಿ. ನಾಳೆ ನನ್ನ ಜೀವನ ಹೇಗೆ ಎನ್ನುವುದು ಗೊತ್ತಾಗುತ್ತಿಲ್ಲ" ಎಂದು ಅಳಲು ತೋಡಿಕೊಂಡಿದ್ದಾರೆ.
"ಉಮಾಪತಿ ಮಾಡಿರುವುದು ತಪ್ಪು. ಇಬ್ಬರು ದೊಡ್ಡವರು, ಅವರೇ ಕೂತು ಮಾತನಾಡಬಹುದಿತ್ತು. ನನ್ನನ್ನು ಯಾಕೆ ಉಪಯೋಗಿಸಿಕೊಳ್ಳುತ್ತಿದ್ದೀರಿ" ಎಂದು ಅರುಣಾ ಕುಮಾರಿ ಕಿಡಿ ಕಿಡಿಕಾರಿದ್ದಾರೆ.
"ಸೀಲ್ ಹಾಕಿ 2 ಲಕ್ಷ ತೆಗೆದುಕೊಂಡ್ರು ಅಂತ ದರ್ಶನ್ ಹೇಳಿದ್ರು. ಅದು ನನ್ನ ಲೈಫ್, ನನಗೆ ಬಿಟ್ಟಿದ್ದು, ನನ್ನ ಜೀವನ ಹಾಳಾದ್ರೆ ಯಾರು ಬರಲ್ಲ, ನನ್ನನ್ನು ಬದುಕಲು ಬಿಡಿ. ಆದರೆ ಕೊನೆಯದಾಗಿ ಹೇಳುತ್ತೇನೆ. ಉಮಾಪತಿ ಮಾಡಿದ್ದು ತಪ್ಪು. ನನ್ನನ್ನು ಉಪಯೋಗಿಸಿಕೊಂಡಿದ್ದು ತಪ್ಪು" ಎಂದು ಉಮಾಪತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೋಪಿ ಅರುಣಾ ಕುಮಾರಿ, ಉಮಾಪತಿ ಕಡೆ ಬೆಟ್ಟು ಮಾಡಿ ತೋರಿಸುತ್ತಿದ್ರೆ, ಉಮಾಪತಿ, ದರ್ಶನ್ ಸ್ನೇಹಿತರ ವಿರುದ್ಧ ನೇರ ಆರೋಪ ಮಾಡುತ್ತಿದ್ದಾರೆ. ದರ್ಶನ್ ಮತ್ತು ಸ್ನೇಹಿತರು ಪ್ರೆಸ್ ಮೀಟ್ ನಲ್ಲಿ ಉಮಾಪತಿ ಉತ್ತರ ನೀಡಬೇಕು ಎಂದಿದ್ದರು. ಒಟ್ನಲ್ಲಿ 25 ಕೋಟಿ ವಂಚನೆ ಪ್ರಕರಣ ಈಗ ಮತ್ತಷ್ಟು ರೋಚಕ ತಿರುವು ಪಡೆದುಕೊಳ್ಳುತ್ತಿದೆ.