Don't Miss!
- News Hubballi: ರಾಜ್ಯ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ: ನೇಹಾ ನಿವಾಸಕ್ಕೆ ಶ್ರೀಗಳು, ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ: ಪೊಲೀಸ್ ಅಭಯ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Automobiles ಬೈಕಿನಂತೆ ಮೈಲೇಜ್ ಕೊಡೋದ್ರಿಂದ ಈ ಹ್ಯುಂಡೈ ಕಾರಿನ ಮಾಲೀಕರು ಫುಲ್ ಖುಷ್
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೆಗಾಸ್ಟಾರ್ ಚಿರು ಕುಟುಂಬಕ್ಕೆ ಅಳಿಯನಾಗ್ತಾರಂತೆ 'ಬಾಹುಬಲಿ' ಪ್ರಭಾಸ್.!
ಸಾಮಾಜಿಕ ಜಾಲತಾಣದಲ್ಲಿ ಈ ವರ್ಷ ಹೆಚ್ಚು ಸುದ್ದಿ ಮಾಡಿದ ವಿಷ್ಯಗಳಲ್ಲಿ ನಟ ಪ್ರಭಾಸ್ ಮದುವೆ ಸುದ್ದಿ ಬಹುತೇಕ ಮೊದಲ ಸ್ಥಾನದಲ್ಲಿರುತ್ತೆ. ಇಷ್ಟು ದಿನ ಅನುಷ್ಕಾ ಶೆಟ್ಟಿ ಜೊತೆ ಪ್ರಭಾಸ್ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿ ಚರ್ಚೆಯಾಗುತ್ತಿತ್ತು. ಆದ್ರೀಗ, ಪ್ರಭಾಸ್ ಮದುವೆ ಆಗಲಿರುವ ಹುಡುಗಿ ಬಗ್ಗೆ ನಿರೀಕ್ಷೆನೇ ಮಾಡಿರದ ಬ್ರೇಕಿಂಗ್ ನ್ಯೂಸ್ ಬಹಿರಂಗವಾಗಿದೆ.
ಹೌದು, ಪ್ರಭಾಸ್ ಮದುವೆ ಆಗಲಿರುವ ಹುಡುಗಿ ಮೆಗಾಸ್ಟಾರ್ ಚಿರಂಜೀವಿ ಅವರ ಕುಟುಂಬದಲ್ಲಿದ್ದಾಳಂತೆ. ಚಿರು ಕುಟುಂಬಕ್ಕೆ 'ಬಾಹುಬಲಿ' ಪ್ರಭಾಸ್ ಅಳಿಯನಾಗ್ತಾರಂತೆ. ಈ ಸುದ್ದಿ ಕೇಳಿ ನಿಮಗೆ ಎಷ್ಟು ಆಶ್ಚರ್ಯವಾಗುತ್ತಿದೆಯೋ ಅಷ್ಟೇ ಶಾಕ್ ನಮಗೂ ಆಗಿತ್ತು.
ಅಷ್ಟಕ್ಕೂ, ಈ ಸುದ್ದಿ ನಿಜನಾ? ಚಿರಂಜೀವಿ ಫ್ಯಾಮಿಲಿಯಲ್ಲಿ ಪ್ರಭಾಸ್ ಅವರನ್ನ ಮದುವೆ ಆಗುವಂತಹ ಹುಡುಗಿ ಯಾರಿದ್ದಾರೆ? ಈ ಎಲ್ಲ ಕುತೂಹಲಗಳಿಗೂ ಉತ್ತರ ಇಲ್ಲಿದೆ ನೋಡಿ.....
ಪ್ರಭಾಸ್ ಜೊತೆ ನಿಹಾರಿಕ ಮದುವೆ.!
'ಬಾಹುಬಲಿ' ಪ್ರಭಾಸ್ ಜೊತೆ ಚಿರು ಫ್ಯಾಮಿಲಿಯ ನಿಹಾರಿಕ ಅವರ ಮದುವೆ ನಡೆಯಲಿದೆ ಎಂಬ ಸುದ್ದಿಗಳು ಕಳೆದ ಎರಡ್ಮೂರು ದಿನದಿಂದ ಫೇಸ್ ಬುಕ್, ಟ್ವಿಟ್ಟರ್, ವೆಬ್ ಸೈಟ್ ಗಳಲ್ಲಿ ಗಿರಿಗಿಟ್ಲೆ ಹೊಡಿತಿದೆ.
ಈ ನಟಿ ಕಂಡ್ರೆ 'ಬಾಹುಬಲಿ' ಪ್ರಭಾಸ್ ಗೆ ಸಖತ್ ಇಷ್ಟವಂತೆ.!
ಯಾರು ಈ ನಿಹಾರಿಕ?
ಅಂದ್ಹಾಗೆ, ಪ್ರಭಾಸ್ ಮದುವೆ ಆಗಲಿದ್ದಾರೆ ಎನ್ನಲಾಗಿದ್ದ ಈ ನಿಹಾರಿಕ ಮೆಗಾಸ್ಟಾರ್ ಪುತ್ರಿ. ಅರ್ಥಾತ್ ಚಿರಂಜೀವಿ ಅವರ ಸಹೋದರ ನಾಗೇಂದ್ರ ಬಾಬು ಅವರ ಸುಪುತ್ರಿ. ನಟ ವರುಣ್ ತೇಜ ಅವರ ಸಹೋದರಿ.
ನಟಿ ಕಮ್ ನಿರೂಪಕಿ ನಿಹಾರಿಕ
ಟಿವಿ ನಿರೂಪಕಿ ಆಗಿ ಕೆಲಸ ಮಾಡುತ್ತಿದ್ದ ನಿಹಾರಿಕ, ನಂತರ ಸಿನಿಮಾಗಳಲ್ಲು ನಟಿಸಿದರು. 2016ರಲ್ಲಿ ತೆರೆಕಂಡ 'ಒಕ ಮನಸು' ಚಿತ್ರದ ಮೂಲಕ ಬಣ್ಣದ ಹಚ್ಚಿದ ನಿಹಾರಿಕ ಸದ್ಯ 'ಹ್ಯಾಪಿ ವೆಡ್ಡಿಂಗ್' ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಮೋಸ್ಟ್ ಬ್ಯಾಚುಲರ್ ನಟ ಪ್ರಭಾಸ್ ಗೆ ಈ ಬಾರಿ ಮೆಗಾ ಆಫರ್
ಇದೆಲ್ಲಾ ಬರಿ ವದಂತಿ
ಪ್ರಭಾಸ್ ಮತ್ತು ನಿಹಾರಿಕ ಮದುವೆ ಬಗ್ಗೆ ನಟ ಕೃಷ್ಣಂರಾಜು ಅವರು ಚಿರಂಜೀವಿ ಅವರ ಜೊತೆ ಮಾತನಾಡಿದ್ದರು. ಹಾಗಾಗಿ, ಚಿರು ಕೂಡ ಸಹೋದರ ನಾಗೇಂದ್ರ ಬಾಬು ಜೊತೆ ಈ ಬಗ್ಗೆ ಸಮಾಲೋಚನೆ ನಡೆಸಿದ್ದರು ಎಂಬ ಅಂತೆ-ಕಂತೆಗಳು ಹೆಚ್ಚು ಸುದ್ದಿಯಾಗಿದೆ. ಆದ್ರೆ, ಇದೆಲ್ಲಾ ಸುಳ್ಳು ಸುದ್ದಿ ಸ್ವತಃ ಮೆಗಾಸ್ಟಾರ್ ಹೇಳಿದ್ದಾರೆ ಎನ್ನಲಾಗಿದೆ.
ಚಿರಂಜೀವಿ ಪ್ರತಿಕ್ರಿಯೆ
ಪ್ರಭಾಸ್ ಮತ್ತು ನಿಹಾರಿಕ ಮದುವೆ ಸುದ್ದಿಗೆ ಸಂಬಂಧಿಸಿದಂತೆ ಖಾಸಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಚಿರಂಜೀವಿ ''ಇದೆಲ್ಲಾ ಸುಳ್ಳು. ನಾನು ಮತ್ತು ಕೃಷ್ಣಂರಾಜು ಈ ಬಗ್ಗೆ ಮಾತನಾಡಿಲ್ಲ. ನಾಗಬಾಬು ಜೊತೆನೂ ಮಾತನಾಡಿಲ್ಲ. ಇದೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಹುಟ್ಟಿಕೊಂಡಿರುವ ಸುದ್ದಿಯಷ್ಟೇ'' ಎಂದು ತಿಳಿಸಿದ್ದಾರೆ ಎಂದು ಯೂಟ್ಯೂಬ್ ಹಾಗೂ ಕೆಲವು ತೆಲುಗು ವೆಬ್ ಸೈಟ್ ಗಳಲ್ಲಿ ವರದಿಯಾಗಿದೆ.