Don't Miss!
- Lifestyle ಫಳ ಫಳ ಹೊಳೆಯುವ ಕೆಂಪು ನಾಗರ ನೋಡಿದ್ದೀರಾ..? ವೈರಲ್ ಆಗ್ತಿದೆ ವಿಡಿಯೋ..!
- Technology ಬಹುನಿರೀಕ್ಷಿತ ರಿಯಲ್ಮಿ ನಾರ್ಜೋ 70 ಪ್ರೊ 5G ಲಾಂಚ್!..ಇಯರ್ಬಡ್ಸ್ ಉಚಿತ!
- News ಜಗದೀಶ್ ಶೆಟ್ಟರ್ಗೆ ಬೆಳಗಾವಿ ಸ್ಪರ್ಧೆ ಮತ್ತಷ್ಟು ಜಟೀಲ: ಗೋಬ್ಯಾಕ್ ಅಭಿಯಾನ ಯಶಸ್ವಿ ಆಯ್ತಾ?
- Automobiles ನಟ ವಿಜಯ್ ನೋಡಲು ಬಂದ ಜನಸಾಗರ: ಅಭಿಮಾನಿಗಳಿಂದ ನಟನ ಕಾರಿಗೆ ಹಾನಿ!
- Sports IPL ಬಿಡಿ, WPLನಲ್ಲಿ ಆರ್ಸಿಬಿಗೆ ಗೆದ್ದ ಮೊತ್ತಕ್ಕೂ ಸಮವಿಲ್ಲ PSL ವಿಜೇತರಿಗೆ ಸಿಕ್ಕ ಬಹುಮಾನ
- Finance ಬೆಂಗಳೂರಿನ ಮೇಘನಾ ಫುಡ್ಸ್ ಹೋಟೆಲ್ ಮಳಿಗೆಗಳ ಮೇಲೆ ಐಟಿ ದಾಳಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೀವನದಲ್ಲಿ ಯಾವಾಗಲೂ 'ಪಾಸಿಟಿವ್' ಆಗಿರಲು ಸಾಧ್ಯವೇ?: ನೋಡಿ 'ಪಾಸಿಟಿವ್' ಕಿರುಚಿತ್ರ
ಎಲ್ಲರೂ ಯಾವಾಗಲೂ ಪಾಸಿಟಿವ್ ಆಗಿರಬೇಕು ಎನ್ನುವಾಗಲೇ ನೆಗೆಟಿವ್ ಸಂಗತಿಯೊಂದು ನಮ್ಮ ಬದುಕಿನೊಳಗೆ ಬಂದಿದೆ. ಆ ನೆಗೆಟಿವ್ ವಿಚಾರವು ನಮ್ಮಲ್ಲಿಯೂ ನೆಗೆಟಿವ್ ಆಗಿರಬೇಕು ಎನ್ನುವುದು ಎಲ್ಲರ ಬಯಕೆ. ಹಾಗೆಯೇ ಪಾಸಿಟಿವ್ ಎಂಬುದು ಕಿವಿಯೊಳಗೆ ಬಿದ್ದರೆ ಮೈ ಒಂದು ಕ್ಷಣ ನಡುಗುತ್ತದೆ. ಜೀವನದಲ್ಲಿ ಪಾಸಿಟಿವ್ ಬೇಕೋ ಅಥವಾ ನೆಗೆಟಿವ್ ಬೇಕೋ ಎಂಬ ಆಯ್ಕೆ ಶುರುವಾಗಿದೆ.
ಇಂತಹದೇ ವಸ್ತುವನ್ನಿಟ್ಟುಕೊಂಡ ಕಿರುಚಿತ್ರವೊಂದು ಗಮನ ಸೆಳೆಯುತ್ತಿದೆ. 'ಪಾಸಿಟಿವ್' ಎಂಬ ಶೀರ್ಷಿಕೆಯ ಈ ಕಿರುಚಿತ್ರ, 'ಡೇಲಿ ಹಂಟ್' ಲಾಕ್ ಡೌನ್ ಅವಧಿಯಲ್ಲಿ ಆಯೋಜಿಸಿದ್ದ 'ಲಾಕ್ ಡೌನ್ ಶಾರ್ಟ್ ಫಿಲಂ ಸ್ಪರ್ಧೆ'ಯಲ್ಲಿ ರನ್ನರ್ ಅಪ್ ಆಗಿದೆ.
ಕೇವಲ 1.51 ನಿಮಿಷದ ಅವಧಿಯ ಈ ಕಿರುಚಿತ್ರವನ್ನು ಚಂದನ್ ಕೇಶವ್ ನಿರ್ದೇಶಿಸಿ, ನಟಿಸಿ ಸಿದ್ಧಪಡಿಸಿದ್ದಾರೆ. ಅವರೊಂದಿಗೆ ಪ್ರಭು ಎಂ.ಕೆ. ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.
ಮನೆಯಲ್ಲಿ ಇಬ್ಬರು ಇಸ್ಪೀಡ್ ಆಡುತ್ತಿದ್ದಾರೆ. ಜೀವನದಲ್ಲಿ ಯಶಸ್ಸು ಸಿಗಬೇಕೆಂದರೆ ನಾವು ಅನುಸರಿಸಬೇಕಾದ ಒಂದೇ ಒಂದು ಸಂಗತಿಯೆಂದರೆ ಅದು ನಕಾರಾತ್ಮಕ ಆಲೋಚನೆಯ ಜನರನ್ನು ದೂರ ಇರಿಸುವುದು ಮತ್ತು ಪಾಸಿಟಿವ್ ಜನರ ಜತೆ ಸಮಯ ಕಳೆಯುವುದು ಎನ್ನುವುದು ಒಬ್ಬಾತನ ಸಲಹೆ.
ಆದರೆ ಎಲ್ಲ ಬಗೆಯ ಪಾಸಿಟಿವ್ಗಳೂ ಒಳ್ಳೆಯದಲ್ಲ. ಪಾಸಿಟಿವ್ ಎನ್ನುವುದು ತನ್ನಲ್ಲಿಯೂ ಭೀತಿ ಹುಟ್ಟಿಸುತ್ತದೆ ಎನ್ನುವುದು ಎದುರಿಗೆ ಕುಳಿತ ವ್ಯಕ್ತಿ, ಸೀನುವ ಮೂಲಕ ಕೊರೊನಾ ವೈರಸ್ ಪಾಸಿಟಿವ್ ಬಂದಿರುವ ಅನುಮಾನ ಹಂಚಿಕೊಂಡಾಗ ಅರಿವಾಗುತ್ತದೆ.
ಒಂದು ನಿಮಿಷದಷ್ಟು ಅವಧಿಯಲ್ಲಿಯೇ ಸೂಕ್ಷ್ಮ ಸಂಗತಿಯೊಂದನ್ನು ಈ ಕಿರುಚಿತ್ರದಲ್ಲಿ ಹೇಳಿದ್ದಾರೆ ಚಂದನ್ ಕೇಶವ್. ಸೂರ್ಯನಾರಾಯಣ್ ನೀಡಿರುವ ಹಿನ್ನೆಲೆ ಸಂಗೀತ ಕಿರುಚಿತ್ರದ ಆಶಯಕ್ಕೆ ಪೂರಕವಾದ ಭಾವ ಮೂಡಿಸುವಲ್ಲಿ ಯಶಸ್ವಿಯಾಗಿದೆ.
ಟ್ರೋಲ್ ಹೈದ ಪೇಜಿನ ಹೈದ ಸ್ಟುಡಿಯೋಸ್ ಈ ಲಾಕ್ ಡೌನ್ ಶಾರ್ಟ್ ಮೂವಿ ಸ್ಪರ್ಧೆ ಆಯೋಜಿಸಿತ್ತು. ಮೂರು ನಿಮಿಷಕ್ಕಿಂತ ಕಡಿಮೆ ಅವಧಿಯ ಚಿತ್ರಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಮನೆಯ ಒಳಗೇ ಕಿರುಚಿತ್ರ ತಯಾರಿಸುವುದು ಕಡ್ಡಾಯವಾಗಿತ್ತು.
250 ರೂ ಪ್ರವೇಶ ಶುಲ್ಕದೊಂದಿಗೆ 50ಕ್ಕೂ ಹೆಚ್ಚು ಕಿರುಚಿತ್ರಗಳು ಸ್ಪರ್ಧೆಗೆ ಬಂದಿದ್ದವು. ತೀರ್ಪುಗಾರರಾಗಿದ್ದ ನಿರ್ದೇಶಕರಾದ ಎಂ.ಜಿ. ಶ್ರೀನಿವಾಸ್, ಅನೂಪ್ ಆಂಥೋನಿ ಮತ್ತು ಅರ್ಜುನ್ ಕುಮಾರ್ ಅವುಗಳಲ್ಲಿ ಉತ್ತಮವಾದುದ್ದನ್ನು ಆಯ್ಕೆ ಮಾಡಿದ್ದರು.
ಮೊದಲ ಬಹುಮಾನ ಪಡೆದುಕೊಂಡ ತಂಡಕ್ಕೆ 10,000 ರೂ ನಗದು ಪ್ರಕಟಿಸಲಾಗಿತ್ತು. ರೆಡ್ ಲೈನ್ ಎಂಬ ಕಿರುಚಿತ್ರ ಮೊದಲ ಸ್ಥಾನ ಪಡೆದುಕೊಂಡಿತು.