Don't Miss!
- Automobiles 'ಬಾಹುಬಲಿ' ಎಸ್ಯುವಿ ಪರಾಕ್ರಮ: ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ವಿಶೇಷತೆಗಳೇನು?
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರೂಪಾಯಿ' ಇದು ಚಿಲ್ರೆ ವಿಷ್ಯ ಅಲ್ಲಾ ಗುರು ಎಂದ ಕೃಷಿ
Recommended Video
ಕನ್ನಡದಲ್ಲಿ ಈಗ ಅನೇಕ ಸಿನಿಮಾಗಳು ಅದರ ಟೈಟಲ್ ಮೂಲಕವೇ ಗಮನ ಸೆಳೆಯುತ್ತಿವೆ. ಅದೇ ರೀತಿ ಈಗ 'ರೂಪಾಯಿ' ಇದು ಚಿಲ್ರೆ ವಿಷ್ಯ ಅಲ್ಲಾ ಗುರು ಎಂಬ ಸಿನಿಮಾ ಕೂಡ ತನ್ನ ಹೆಸರಿನ ಮೂಲಕ ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಇದೀಗ ಬಿಡುಗಡೆಯಾಗಿದೆ.
ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ನಟಿ ಕೃಷಿ ತಾಪಂಡ ಕೈ ನಲ್ಲಿ ಸಾಕಷ್ಟು ಸಿನಿಮಾಗಳಿವೆ ಆ ಪೈಕಿ 'ರೂಪಾಯಿ' ಸಿನಿಮಾ ಕೂಡ ಒಂದು. ಇಷ್ಟು ದಿನ ಈ ಸಿನಿಮಾದ ನಾಯಕಿ ಬಗ್ಗೆ ಗೌಪ್ಯತೆ ಕಾಪಾಡಿಕೊಂಡಿದ್ದ ಚಿತ್ರತಂಡ ಈಗ ಕೃಷಿ ಅವರನ್ನು ಆಯ್ಕೆ ಮಾಡಿದೆ. ಸಿನಿಮಾದ ಒಂದು ಪೋಸ್ಟರ್ ಮೂಲಕ ಅವರನ್ನು ಪರಿಚಯ ಮಾಡಿದೆ. ಇದೊಂದು ದುಡ್ಡಿನ ಬಗ್ಗೆ ಇರುವ ಸಿನಿಮಾವಾಗಿದ್ದು, ಕೃಷಿ ಮಧ್ಯಮ ವರ್ಗದ ಒಬ್ಬ ಹುಡುಗಿಯ ಪಾತ್ರ ಮಾಡಿದ್ದಾರೆ.
ಅಂದಹಾಗೆ, ಈ ಹಿಂದೆ 'ಅಂಬಾನಿ ದಿ ಇನ್ ವೆಸ್ಟರ್' ಎಂಬ ಕಿರುಚಿತ್ರದ ಮೂಲಕ ದೊಡ್ಡ ಹೆಸರು ಮಾಡಿದ್ದ ನಿರ್ದೇಶಕ ವಿನೋದ್ ನಾಗ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ ವಿಶೇಷ ಅಂದರೆ ಈ ಸಿನಿಮಾದ ಹೀರೋ ಕೂಡ ಅವರೇ ಆಗಿದ್ದಾರೆ. ಮಂಜುನಾಥ್ ಎಂ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.
ಇನ್ನು ಈಗಾಗಲೇ ಸಿನಿಮಾದ ಒಂದು ಪ್ರಮೋಷನ್ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. 23 ನಿಮಿಷ ವಿಡಿಯೋ ಮೂಲಕ ತಮ್ಮ ಪ್ರತಿಭೆಯನ್ನು ನಿರ್ದೇಶಕರು ಪ್ರದರ್ಶಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಬಹುಪಾಲು ಬೆಂಗಳೂರಿನಲ್ಲಿಯೇ ನಡೆಯಲಿದೆಯಂತೆ.