Don't Miss!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- News ಅರವಿಂದ್ ಕೇಜ್ರಿವಾಲ್ ಹತ್ಯೆ ಮಾಡಲು ಸಂಚು ನಡೆಯುತ್ತಿದೆ: ಎಎಪಿ ಗಂಭೀರ ಆರೋಪ
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿವಾದಕ್ಕೆ ಕಾರಣವಾಯ್ತು ನೂತನ ಫಿಲ್ಮ್ ಚೇಂಬರ್ ಅಧ್ಯಕ್ಷರ ನಿಲುವು.!
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎರಡೇ ದಿನದಲ್ಲಿ ಎಸ್.ಎ ಚಿನ್ನೇಗೌಡ ವಿವಾದಕ್ಕೆ ಸಿಲುಕಿದ್ದಾರೆ.
''ನಾನು ಡಬ್ಬಿಂಗ್ ವಿರೋಧಿ, ಹೀಗಾಗಿ ಪ್ರೇಕ್ಷಕರು ಸಿನಿಮಾಗಳನ್ನು ಅವರವರ ಮೂಲ ಭಾಷೆಗಳಲ್ಲಿಯೇ ನೋಡಬೇಕು'' ಎಂಬ ಹೇಳಿಕೆ ನೀಡಿದ್ದ ಚಿನ್ನೇಗೌಡರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಾಗ್ದಾಳಿ ನಡೆಯುತ್ತಿದೆ. ಡಬ್ಬಿಂಗ್ ಪರ ಇರುವ ಜನ ಚಿನ್ನೇಗೌಡರ ಈ ಹೇಳಿಕೆಯನ್ನ ಖಂಡಿಸಿದ್ದಾರೆ.
ಫಿಲ್ಮ್ ಚೇಂಬರ್ ನೂತನ ಅಧ್ಯಕ್ಷರಾದ ಪಾರ್ವತಮ್ಮ ಸಹೋದರ ಚಿನ್ನೇಗೌಡ
ಅದರಲ್ಲೂ, ಡಬ್ಬಿಂಗ್ ಬೇಕು ಎಂದು ಹೋರಾಟ ಮಾಡುತ್ತಿರುವ ಕನ್ನಡ ಗ್ರಾಹಕರ ಕೂಟದ ಕಾರ್ಯಕರ್ತರು ಟ್ವೀಟ್ ವಾರ್ ಮಾಡುತ್ತಿದ್ದಾರೆ. #ಕೆಎಫ್ಐಕನ್ನಡ ದ್ರೋಹ #ಡಬ್ಬಿಂಗ್ ಬೇಕು ಮುಂತಾದ ಹ್ಯಾಷ್ ಟ್ಯಾಹ್ ಬಳಸಿ ಟ್ವಿಟ್ಟರ್ ನಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಈಗಾಗಲೇ ಡಬ್ಬಿಂಗ್ ಗೆ ಅವಕಾಶ ಕೋರಿ ಕನ್ನಡ ಗ್ರಾಹಕರ ಕೂಟ ಸುಪ್ರಿಂಕೋರ್ಟ್ ನಲ್ಲಿ ಮನವಿ ಸಲ್ಲಿಸಿದೆ ಎಂದು ಕನ್ನಡ ಗ್ರಾಹಕರ ಕೂಟದ ಅಧ್ಯಕ್ಷ ಗಣೇಶ್ ಚೇತನ್ ಹೇಳಿದ್ದಾರೆ.
ಕಳೆದ ಹಲವು ವರ್ಷಗಳಿಂದ ಡಬ್ಬಿಂಗ್ ವಿಷಯ ಚರ್ಚೆಯಾಗುತ್ತಿದೆ. ಮತ್ತೊಂದೆಡೆ ಕಲಾವಿದರ ಸಂಘ ಮತ್ತು ನಿರ್ಮಾಪಕರ ಸಂಘ ಇದನ್ನು ವಿರೋಧಿಸುತ್ತಿದೆ. ಸಿಟಿಜನ್ ರೈಟ್ ಗ್ರೂಪ್ ಇದರ ವಿರುದ್ಧ ಹೋರಾಡುತ್ತಿದೆ. ಸೋಷಿಯಲ್ ಮೀಡಿಯಾ ಮೂಲಕ ಸಾಮಾನ್ಯ ವ್ಯಕ್ತಿಯೂ ಕೂಡ ಪ್ರಕರಣದ ಪರವಾಗಿ ನಿಲ್ಲಬೇಕಿದೆ. ಭಾಷಾ ಹಕ್ಕು ಜನ ತಮಗೆ ಯಾವ ಭಾಷೆ ಬೇಕೋ ಅದರಲ್ಲಿ ತಮಗಿಷ್ಟವಾದ ಮನರಂಜನೆ ಪಡೆಯಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಗಣೇಶ್ ಚೇತನ್ ಹೇಳಿದ್ದಾರೆ.