Don't Miss!
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Automobiles ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಜನಿಕಾಂತ್ ಅವರನ್ನ ಭೇಟಿ ಮಾಡಿದ ಸಾರಾ ಗೋವಿಂದು
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾರಾ ಗೋವಿಂದು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನ ಭೇಟಿ ಮಾಡಿದ್ದಾರೆ. ಸಾರಾ ಗೋವಿಂದು ಅವರು ರಜನಿಯನ್ನ ಯಾಕೆ ಭೇಟಿ ಮಾಡಿದರು ಎಂಬುದು ಕಾಡುವ ಪ್ರಶ್ನೆ. ಸಾರಾ ಗೋವಿಂದು ಮಗನ ಮದುವೆಗೆ ರಜನಿಯನ್ನ ಆಹ್ವಾನಿಸಲು ಚೆನ್ನೈನಲ್ಲಿರುವ ರಜನಿ ನಿವಾಸಕ್ಕೆ ಸಾರಾ ಗೋವಿಂದು ಮಂಗಳವಾರ ಹೋಗಿದ್ದರು.
ಸಾರಾ ಗೋವಿಂದು ಅವರ ಮಗ ಅನೂಪ್ ಸಾರಾ ಗೋವಿಂದು ಹಾಗೂ ಮೇಘನಾ ಅವರ ಮದುವೆ ಇದೇ ಫೆಬ್ರವರಿ 19 ರಂದು ಬೆಂಗಳೂರಿನ ಯಲಹಂಕದಲ್ಲಿ ನಡೆಯಲಿದ್ದು, ಕನ್ನಡ ಚಿತ್ರರಂಗ ಸೇರಿದಂತೆ ತಮಿಳು, ತೆಲುಗಿನ ಹಲವು ಸಿನಿಮಾ ಕಲಾವಿದರು ಮದುವೆಗೆ ಭಾಗಿಯಾಗಲಿದ್ದಾರೆ.
'2.0', 'ಕಾಲ' ನಂತರ ರಜನಿಕಾಂತ್ ಕೊನೆಯ ಚಿತ್ರ ಘೋಷಣೆ
ಸಾರಾ ಗೋವಿಂದು ಅವರ ಆಹ್ವಾನವನ್ನ ಸ್ವೀಕರಿಸಿರುವ ರಜನಿಕಾಂತ್, ಮದುವೆಗೆ ಖಂಡಿತಾ ಬರುತ್ತೇನೆ ಎಂದು ಭರವಸೆಯನ್ನೂ ಕೊಟ್ಟಿದ್ದಾರೆ.
ರಜನಿಕಾಂತ್ ಮಾತ್ರವಲ್ಲದೇ, ತಮಿಳು ನಟ ಶರತ್ ಕುಮಾರ್, ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಸೋನಿಯಾ ಅಗರ್ ವಾಲ್ ಸೇರಿದಂತೆ ಹಲವು ಹಿರಿಯ ನಟರನ್ನ ಮದುವೆಗೆ ಆಹ್ವಾನಿಸಲಾಗಿದೆ.