Don't Miss!
- Finance ಬೆಂಗಳೂರು ಬಳಿ ಇರುವ ಬೇಸಿಗೆ ಪ್ರವಾಸಿ ತಾಣಗಳು ಇವು
- News Bengaluru Weather: ಬೆಂಗಳೂರಿನಲ್ಲಿ ಒಂದು ವಾರ ಪೂರ್ತಿ ತಾಪಮಾನ ಏರಿಕೆ ಮುನ್ಸೂಚನೆ-ಎಷ್ಟು ಡಿಗ್ರಿ ಸೆಲ್ಸಿಯಸ್ ಗೊತ್ತಾ?
- Lifestyle ಮಗನಲ್ಲಿ ಖಾಸಗಿ' ಆ ವಿಷಯ ' ಕೇಳಿದ ಮಲೈಕಾ ಅರೋರಾ: ತಾಯಿಯಾದವರೂ ಕೇಳುವ ಪ್ರಶ್ನೆಯೇ ಎಂದು ಟೀಕೆಗಳ ಸುರಿಮಳೆ
- Sports KKR vs RCB: ಕರ್ಣ್ ಶರ್ಮಗೆ ಸ್ಟ್ರೈಕ್ ಬಿಟ್ಟುಕೊಡದ ದಿನೇಶ್ ಕಾರ್ತಿಕ್; ಆರ್ಸಿಬಿ ಫ್ಯಾನ್ಸ್ ಸಿಡಿಮಿಡಿ!
- Automobiles BYD Seal: ಚೀನಾ ಮಾಲೀಕತ್ವದ 'ಬಿವೈಡಿ ಸೀಲ್' ಎಲೆಕ್ಟ್ರಿಕ್ ಕಾರಿನ ವಿಡಿಯೋ ರಿವ್ಯೂ
- Technology OnePlus: ಭಾರತದಲ್ಲಿ ಒನ್ಪ್ಲಸ್ ನಾರ್ಡ್ CE 3 ಬೆಲೆ ಇಳಿಕೆ; ಖರೀದಿಸಲು ಯೋಗ್ಯವೇ...?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿನಿ ಬಂಧುಗಳಿಗಾಗಿ ಉಪೇಂದ್ರ ಜೊತೆ ಕೈ ಜೋಡಿಸಿದ ತಾರೆಯರು
ಕೊರೊನಾ ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ಚಿತ್ರರಂಗದ ಕಾರ್ಮಿಕರು, ಕಲಾವಿದ, ತಂತ್ರಜ್ಞರಿಗೆ ನಟ-ನಿರ್ದೇಶಕ ಉಪೇಂದ್ರ ಸಹಾಯ ಹಸ್ತ ಚಾಚಿದ್ದಾರೆ. ಒಕ್ಕೂಟದ ಎಲ್ಲಾ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ದಿನಸಿ ಕಿಟ್ ನೀಡಲು ನಿರ್ಧರಿಸಿದ್ದರು.
ಉಪೇಂದ್ರ ಅವರ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ, ಉಪ್ಪಿ ಜೊತೆ ಮತ್ತಷ್ಟು ಸೆಲೆಬ್ರಿಟಿಗಳು ಕೈ ಜೋಡಿಸಿದ್ದಾರೆ. ಕನ್ನಡ ಚಿತ್ರರಂಗದ ಕಲಾವಿದ, ಕಾರ್ಮಿಕ, ತಂತ್ರಜ್ಞರಿಗೆ ಸಹಾಯ ಮಾಡುವ ಉದ್ದೇಶದಿಂದ ರಿಯಲ್ ಸ್ಟಾರ್ ಜೊತೆ ನಿಂತಿದ್ದಾರೆ. ಇದರ ಜೊತೆಗೆ ಉಪ್ಪಿ ಫೌಂಡೇಶನ್ಗೆ ಎನ್ಜಿಓ, ಸಮಾಜಸೇವೆ ಮನೋಭಾವ ಹೊಂದಿರುವವರು ಸ್ವಇಚ್ಛೆಯಿಂದ ಸಹಾಯ ಮಾಡುತ್ತಿರುವುದಾಗಿ ಖುದ್ದು ಉಪ್ಪಿ ತಿಳಿಸಿದ್ದಾರೆ. ಮುಂದೆ ಓದಿ...
ಸಂಗೀತ ಕಲಾವಿದರಿಗೆ ಬಿ ಸರೋಜಾದೇವಿ ನೆರವು
ಸುಪ್ರಸಿದ್ಧ ಅಭಿನೇತ್ರಿ ಬಿ. ಸರೋಜಾದೇವಿ ಅವರು ನಾಲ್ಕು ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದಾರೆ. ಈ ಹಣವನ್ನು ಸಾಧು ಕೋಕಿಲರವರ ನೇತೃತ್ವದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಂಕಷ್ಟದಲ್ಲಿರುವವರಿಗೆ ನೀಡಲು ತಿಳಿಸಿದ್ದಾರೆ ಎಂದು ಉಪೇಂದ್ರ ತಿಳಿಸಿದ್ದಾರೆ.
ಸಂಕಷ್ಟದಲ್ಲಿರುವ ಕಾರ್ಮಿಕ, ಕಲಾವಿದ, ತಂತ್ರಜ್ಞರ ನೆರವಿಗೆ ಧಾವಿಸಿದ ಉಪೇಂದ್ರ
ಆರ್ಕೆಸ್ಟ್ರಾ ಕಲಾವಿದರ ಸಂಕಷ್ಟಕ್ಕೆ ಸಾಧು ಸಹಾಯ
ಖ್ಯಾತ ನಟ ಸಾಧುಕೋಕಿಲ ಅವರು ಎರಡೂವರೆ ಲಕ್ಷ ರೂಪಾಯಿ ಮೊತ್ತದಲ್ಲಿ ದಿನಸಿ ಕಿಟ್ಗಳನ್ನು ಆರ್ಕೆಸ್ಟ್ರಾ ಕಲಾವಿದರುಗಳಿಗೆ ಹಂಚಲು ಮುಂದೆ ಬಂದಿದ್ದಾರೆ ಎಂದು ಉಪೇಂದ್ರ ಮಾಹಿತಿ ನೀಡಿದ್ದಾರೆ.
ಸಹ ಕಲಾವಿದರಿಗೆ ಶೋಭರಾಜ್ ನೆರವು
ಖ್ಯಾತ ನಟ ಶೋಭರಾಜ್ ರವರು ಸಹ ಕಲಾವಿದರಿಗೆ ಕಿಟ್ ನೀಡಲು ಹತ್ತು ಸಾವಿರ ರೂಪಾಯಿ ನೀಡಿದ್ದಾರೆ ಎಂದು ಉಪೇಂದ್ರ ಟ್ವೀಟ್ ಮಾಡಿ ತಿಳಿಸಿದ್ದಾರೆ.
'ರಾಜಕೀಯದಿಂದ ಹಣ ಕಿತ್ತಾಕಿ, ಎಲ್ಲವೂ ಉತ್ತಮವಾಗುತ್ತದೆ - ಉಪೇಂದ್ರ
ಪವನ್ ಪಡೆಯರ್ ನೆರವು
ಖ್ಯಾತ ನಿರ್ದೇಶಕ ಪವನ್ ಒಡೆಯರ್ 20 ಸಾವಿರ ರೂಪಾಯಿ ಕೊಟ್ಟಿದ್ದಾರೆ. ಕೆ ಎಫ್ ಎಮ್ಎ ಚಲನಚಿತ್ರ ಸಂಗೀತ ಕಲಾವಿದರಿಗೆ ನೀಡಲು ತಿಳಿಸಿದ್ದಾರೆ ಎಂದು ಉಪ್ಪಿ ಮಾಹಿತಿ ಹಂಚಿಕೊಂಡಿದ್ದಾರೆ.
Recommended Video
ಮಾಜಿ ಶಾಸಕರ ಪುತ್ರನಿಂದ ನೆರವು
- ದಾವಣಗೆರೆ ಮಾಜಿ ಶಾಸಕರು ಯಜಮಾನ್ ಮೋತಿ ವೀರಣ್ಣ ಅವರ ಪುತ್ರ ಯಜಮಾನ್ ಮೋತಿ ರಾಜೇಂದ್ರ ಅವರು ಒಂದು ಲಕ್ಷ ರೂಪಾಯಿ ದೇಣಿಗೆ ನೀಡಲು ಮುಂದಾಗಿದ್ದಾರೆ. ಆ ಹಣವನ್ನು ನಮ್ಮ ಚಲನಚಿತ್ರ ನಿರ್ದೇಶಕರ ಸಂಘಕ್ಕೆ ನೀಡಲು ಸೂಚಿಸಿದ್ದಾರೆ.
- "ಉನ್ನತಿ" ತಂಡದವರು ಕರೋನಾ ಸಂತ್ರಸ್ಥರಿಗೆ ದಿನಸಿ ಕಿಟ್ ಗಳನ್ನು ವಿತರಿಸಲು 20000/- ರೂಪಾಯಿಗಳನ್ನು ಉಪ್ಪಿ ಫೌಂಡೇಷನ್ ಖಾತೆಗೆ ಸ್ವಯಂಪ್ರೇರಿತರಾಗಿ ವರ್ಗಾವಣೆ ಮಾಡಿರುತ್ತಾರೆ ಎಂದು ಉಪೇಂದ್ರ ತಿಳಿಸಿದ್ದಾರೆ.