Don't Miss!
- News Karnataka Dam Water Level: ಏಪ್ರಿಲ್ 20ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ವಿವರ ಇಲ್ಲಿದೆ
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯುವತಿ ಮೇಲಿನ ಕಿರುಕುಳ ಆರೋಪಕ್ಕೆ ಸಾಧುಕೋಕಿಲಾ ಪ್ರತಿಕ್ರಿಯೆ
ಮೈಸೂರಿನ ಸ್ಪಾ ಸೆಂಟರ್ ನಲ್ಲಿ ನನ್ನ ಮೇಲೆ ಸಾಧು ಕೋಕಿಲಾ ಮತ್ತು ಮಂಡ್ಯ ರಮೇಶ್ ಅವರು ದೌರ್ಜನ್ಯವೆಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದರು. ಈ ಆರೋಪಕ್ಕೆ ಹಾಸ್ಯ ನಟ ಸಾಧು ಕೋಕಿಲಾ ಪ್ರತಿಕ್ರಿಯಿಸಿದ್ದಾರೆ.
''ಈ ಸುದ್ದಿಯನ್ನ ತಮ್ಮ ಮನೆಯವರಿಂದ ಕೇಳಿ ಶಾಕ್ ಆಗಿದೆ. ನನಗೆ ಅದು ಯಾರು ಎಂಬುದೇ ಗೊತ್ತಿಲ್ಲ ಯಾಕೆ ಹೀಗೆ ಮಾಡ್ತಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದಿದ್ದಾರೆ. ಈ ಸೆಲೆಬ್ರಿಟಿ ಎಂಬ ಕಾರಣಕ್ಕೆ ಹೆಚ್ಚು ಮನೆಯಿಂದ ಹೊರಗಡೆ ಹೋಗುವುದಕ್ಕೆ ಆಗಲ್ಲ. ಸಲೂನ್ ಶಾಪ್ ಗೆ ಕೂಡ ಹೋಗಲ್ಲ. ಅವರನ್ನೇ ಮನೆಯ ಬಳಿ ಕರೆಸಿಕೊಳ್ಳುತ್ತೇನೆ'' ಎಂದು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮಂಡ್ಯ ರಮೇಶ್, ಸಾಧುಕೋಕಿಲ ಮೇಲೆ ಲೈಂಗಿಕ ಶೋಷಣೆ ಆರೋಪ!
ಸದ್ಯ, ಸಾಧುಕೋಕಿಲಾ ಅವರು ಚಿತ್ರದ ಸಂಗೀತದ ಕಾರ್ಯ ನಿಮಿತ್ತ ಚೆನ್ನೈನಲ್ಲಿದ್ದಾರೆ. ಬೆಂಗಳೂರಿಗೆ ಆಗಮಿಸಿದ ನಂತರ ಈ ಬಗ್ಗೆ ವಿಚಾರಿಸುತ್ತಾರಂತೆ. ಈ ಬಗ್ಗೆ ಮಂಡ್ಯ ರಮೇಶ್ ಅವರು ಕೂಡ ಈಗಾಗಲೇ ಮಾತನಾಡಿದ್ದು, ''ನನಗೆ ಮತ್ತು ಈ ಘಟನೆಗೆ ಸಂಬಂಧ ಇಲ್ಲ. ನನ್ನ ಹೆಸರು ಈ ಪ್ರಕರಣಕ್ಕೆ ಯಾಕೆ ಕೇಳಿ ಬಂದಿದೆ ಎಂಬುದು ನನಗೆ ತಿಳಿದಿಲ್ಲ. ಒಬ್ಬರು ಯಾರ ಮೇಲೆ ಬೇಕಾದರು ಈ ರೀತಿ ಆರೋಪ ಮಾಡಬಹದು ಅಂದರೆ ಹೇಗೆ. ಆ ಹುಡುಗಿ ಯಾಕೆ ನನ್ನ ಹೆಸರು ತೆಗೆದುಕೊಂಡರು ಗೊತ್ತಿಲ್ಲ. ಇದಕ್ಕೆ ಯಾವುದೇ ಸಾಕ್ಷಿ ಪೂರವೇ ಇಲ್ಲ. ನನಗೆ ಮಸಾಜ್ ಮಾಡಿಸಿಕೊಳ್ಳುವ ಅಭ್ಯಾಸವೇ ನನಗೆ ಇಲ್ಲ'' ಎಂದಿದ್ದರು.
ಮಂಡ್ಯ ರಮೇಶ್ ಮೇಲಿನ ಆರೋಪದ ಬಗ್ಗೆ ನಟ ಜಗ್ಗೇಶ್ ಬೇಸರ
ಮತ್ತೊಂದೆಡೆ ಯುವತಿ ಮೈಸೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಜಡ್ಜ್ ಮುಂದೆ ಹೇಳಿಕೆ ನೀಡಿದ್ದಾರಂತೆ. ಒಟ್ನಲ್ಲಿ, ಪೊಲೀಸರ ಪ್ರಮಾಣಿಕ ತನಿಖೆಯಿಂದ ಸತ್ಯ ಹೊರಬೀಳಬೇಕಿದೆ.