Don't Miss!
- News Bengaluru Heat: ಏ.25 ರಂದು ನಗರದಲ್ಲಿ ಅತ್ಯಧಿಕ ತಾಪಮಾನ: 12 ವರ್ಷಗಳ ದಾಖಲೆ ಉಡೀಸ್
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಾ.ವಿಷ್ಣು ಸಾವಿನ ದಿನ ಅಂಬಿ ಆಡಿದ ಮಾತನ್ನ ಮರೆಯದ ಸಾಧುಕೋಕಿಲಾ
Recommended Video
ಕನ್ನಡ ಚಿತ್ರರಂಗದಲ್ಲಿ ಹಲವು ಆಪ್ತಮಿತ್ರರಿದ್ದಾರೆ. ಆದ್ರೆ, ಸ್ನೇಹ ಅಂದಾಕ್ಷಣ ಮೊದಲು ನೆನಪಾಗುವುದೇ ಸಾಹಸ ಸಿಂಹ ಡಾ ವಿಷ್ಣುವರ್ಧನ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್.
ಇವರಿಬ್ಬರು ಸ್ಯಾಂಡಲ್ ವುಡ್ ನ ಕುಚಿಕೂಗಳು. ಎಲ್ಲಿ ಅಂಬರೀಶ್ ಇರ್ತಾರೋ ಅಲ್ಲಿ ವಿಷ್ಣುವರ್ಧನ್ ಇರ್ತಿದ್ರು. ಎಲ್ಲಿ ವಿಷ್ಣುವರ್ಧನ್ ಇರ್ತಿದ್ರೋ ಎಲ್ಲಿ ಮಂಡ್ಯದ ಗಂಡು ಇರ್ತಿದ್ರು. ಆದ್ರೆ, ವಿಧಿಯ ಆಟಕ್ಕೆ ಶರಣಾದ 'ಹೃದಯವಂತ' ಬಹುಬೇಗ ಪ್ರಾಣಸ್ನೇಹಿತನನ್ನು ಬಿಟ್ಟು ಹೋಗಬೇಕಾಯಿತು.
ಆ ದಿನ ಅಂಬರೀಶ್ ಅವರ ಕಣ್ಣಲ್ಲಿದ್ದ ನೋವನ್ನ ಎಲ್ಲರೂ ನೋಡಿದ್ದಾರೆ. ದಿಗ್ಗಜರು ಬಿಟ್ಟು ಹೋದಾಗ ಅಂಬಿಗೆ ಆದ ಕಷ್ಟವನ್ನ ಎಲ್ಲರೂ ಕಂಡಿದ್ದಾರೆ. ಇಂತಹ ಕ್ಷಣದಲ್ಲಿ ಅಂಬರೀಶ್ ಅವರನ್ನ ಹತ್ತಿರದಿಂದ ಕಂಡಿದ್ದ ಹಾಸ್ಯ ನಟ ಸಾಧುಕೋಕಿಲಾ ಅವರು ಡಾ ವಿಷ್ಣು ಮತ್ತು ಅಂಬರೀಶ್ ಅವರದ್ದು ಎಂತಹ ಸ್ನೇಹ ಎಂದು 'ಕನ್ನಡದ ಕೋಗಿಲೆ' ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ....
ಬರಿ ಇದು ಸಿನಿಮಾ ಹಾಡಲ್ಲ
'ಕನ್ನಡ ಕೋಗಿಲೆ'ಯಲ್ಲಿ ದಿಗ್ಗಜರು ಚಿತ್ರದ ಹಾಡನ್ನ ಹಾಡಿದ ಲಿಖಿತ್ ಹಾಡು ಕೇಳಿದ ನಂತರ ಮಾತನಾಡಿದ ಸಾಧು ''ಇದು ದಿಗ್ಗಜರು ಚಿತ್ರದ ಬರಿ ಹಾಡಲ್ಲ, ಡಾ ವಿಷ್ಣುವರ್ಧನ್ ಮತ್ತು ಡಾ ಅಂಬರೀಶ್ ಅವರ ಸ್ನೇಹದ ಮೇಲೆ ನಿಂತಿರುವ ಹಾಡು'' ಎಂದು ಬಣ್ಣಿಸಿದರು.
ಬಾಡಿಗಾರ್ಡ್ ಹೌದು, ಪ್ರಾಣ ಸ್ನೇಹಿತನೂ ಹೌದು
''ವಿಷ್ಣುವರ್ಧನ್ ಅವರಿಗೆ ಅಂಬರೀಶ್ ಅವರು ಒಂದು ರೀತಿ ಬಾಡಿಗಾರ್ಡ್ ಹೌದು, ಪ್ರಾಣ ಸ್ನೇಹಿತನೂ ಹೌದು. ವಿಷ್ಣು ಅವರು ಎಲ್ಲೂ ಒಬ್ಬರೇ ಹೋಗ್ತಿರಲಿಲ್ಲ. ಅಂಬರೀಶ್ ಜೊತೆಗಿದ್ರೆ ಕಣ್ಣು ಮುಚ್ಚಿಕೊಂಡು ಹೋಗ್ತಿದ್ರು''.
ವಿಷ್ಣು ಸರ್ ಅಗಲಿದ ದಿನ ಅಂಬಿ ಹೇಗಿದ್ರು
''ವಿಷ್ಣುವರ್ಧನ್ ಅವರು ಅಗಲಿದ ದಿನ. ಶೋಕಸಾಗರದಲ್ಲಿದ್ದವರನ್ನ ಸ್ವತಃ ಅಂಬರೀಶ್ ಅವರೇ ಸಮಾಧಾನ ಪಡಿಸಿದರು. ಅಭಿಮಾನ್ ಸ್ಟುಡಿಯೋಗೆ ಬರೋವರ್ಗು ಸುಮ್ಮನಿದ್ರು. ಆದ್ರೆ, ಅಲ್ಲಿ ಬಂದ ಮೇಲೆ ಅವರಲ್ಲಿದ್ದ ನೋವು ಹೊರಗೆ ಬಂತು'' ಎಂದು ಸಾಧುಕೋಕಿಲಾ ಭಾವುಕರಾದರು.
ಅಂಬಿ ಆಡಿದ ಆ ಮಾತು....
''ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಅಂತ್ಯ ಸಂಸ್ಕಾರ ನಡೆಯುತ್ತಿತ್ತು. ಆ ಸ್ಥಳದಿಂದ ನೂರು ಅಡಿ ಹಿಂದೆ ಅಂಬಿ ಒಂದು ಮಾತು ಹೇಳಿದ್ರು. ''ಏನೋ ನನ್ನ ಬಿಟ್ಟು ಹೋಗ್ತಿದ್ದೀಯಾ ನೀನು, ಹೆಂಗೋ ಬಿಟ್ಟೋಗ್ತೀಯಾ ನೀನು....ನಡಿ ನಾನು ಬರ್ತೀನಿ, ನಿನ್ನ ಬಿಟ್ಟು ಇರಲ್ಲ'' ಅಂತ ಹೇಳಿದ್ರು ಎಂದು ಸಾಧುಕೋಕಿಲಾ ಅವರ ಸ್ನೇಹದ ಬಗ್ಗೆ ನೆನಪು ಬಿಚ್ಚಿಟ್ಟರು.