ದರ್ಶನ್ ಗೆ ಮತ್ತೆ ಸಾಧು ಕೋಕಿಲ ಡೈರೆಕ್ಷನ್
ನಟ ದರ್ಶನ್ ಅವರ ಮುಂದಿನ ಸಿನಿಮಾಗಳ ಲಿಸ್ಟ್ ದೊಡ್ಡದಿದೆ. ಈಗ ಅವರ ಹೊಸ ಸಿನಿಮಾಗಳ ಪಟ್ಟಿಗೆ ಮತ್ತೊಂದು ಸಿನಿಮಾ ಸೇರಿಕೊಳ್ಳಲಿದೆ. ವಿಶೇಷ ಅಂದರೆ, ಈ ಸಿನಿಮಾವನ್ನು ಸಾಧು ಕೋಕಿಲ ನಿರ್ದೇಶನ ಮಾಡಲಿದ್ದಾರೆ.
ದರ್ಶನ್ ಅವರಿಗೆ ಸಿನಿಮಾ ನಿರ್ದೇಶನ ಮಾಡುವ ವಿಷಯವನ್ನು ಸಾಧು ಅವರೇ ಹೇಳಿಕೊಂಡಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯ 'ಕನ್ನಡ ಕೋಗಿಲೆ' ಕಾರ್ಯಕ್ರಮದಲ್ಲಿ ನಿರೂಪಕಿ ಅನುಪಮ ಪ್ರಶ್ನೆಗೆ ಉತ್ತರಿಸಿದ ಅವರು ದರ್ಶನ್ ಅವರಿಗೆ ಮುಂದೆ ಒಂದು ಸಿನಿಮಾ ಮಾಡುತ್ತಿದ್ದೇನೆ ಎಂದರು. ಜೊತೆಗೆ ಆ ಚಿತ್ರಕ್ಕೆ ಅವರೇ ಸಂಗೀತ ನೀಡಲಿದ್ದಾರಂತೆ.

ಸಂಗೀತ ನಿರ್ದೇಶಕ ಹಾಗೂ ಹಾಸ್ಯನಟನಾಗಿದ್ದ ಸಾಧು ಕೋಕಿಲ 'ರಕ್ತ ಕಣ್ಣೀರು' ಸಿನಿಮಾದ ಮೂಲಕ ನಿರ್ದೇಶಕರಾದರು. 'ಅನಾಥರು' ಹಾಗೂ 'ಸುಂಟರಗಾಳಿ' ಸಿನಿಮಾಗಳಲ್ಲಿ ದರ್ಶನ್ ಗೆ ಆಕ್ಷನ್ ಕಟ್ ಹೇಳಿದ ಅವರು ಈಗ ಮತ್ತೆ ಡಿ ಬಾಸ್ ಜೊತೆಗೆ ಸಿನಿಮಾ ಮಾಡಲಿದ್ದಾರೆ.
va
ಅಂದಹಾಗೆ, ದರ್ಶನ್ ಸದ್ಯ 'ಯಜಮಾನ', 'ಒಡೆಯ', 'ಡಿ 53' ಹಾಗೂ 'ಗಂಡುಗಲಿ ಮದಕರಿ ನಾಯಕ' ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. 'ಕುರುಕ್ಷೇತ್ರ' ಸಿನಿಮಾ ಜನವರಿಗೆ ಬಿಡುಗಡೆ ಆಗಲಿದೆ.


Click it and Unblock the Notifications











