Don't Miss!
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Lifestyle ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- Automobiles ಮಾರುತಿ ಸ್ವಿಫ್ಟ್ ಖರೀದಿಸುತ್ತಿದ್ದೀರಾ? ಸ್ವಲ್ಪ ಕಾಯಿರಿ... ಹೊಸ ಸ್ವಿಫ್ಟ್ ಬರುತ್ತಿದೆ! 35 ಕಿ.ಮೀ ಮೈಲೇಜ್
- Finance ಝಿಲಿಂಗೋನ ಸಹ-ಸಂಸ್ಥಾಪಕ ಹಾಗೂ ಮಾಜಿ ಸಿಒಒ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ ಅಂಕಿತಿ ಬೋಸ್
- News ಈ ಎರಡು ಕ್ಷೇತ್ರಗಳಲ್ಲಿ ಕಾಡುಗೊಲ್ಲರ ಮತ ಪಡೆಯಲು ಕೈ, ಕಮಲ ಪ್ಲಾನ್ ಏನು?-ಇಲ್ಲಿದೆ ಮಾಹಿತಿ
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಾಯಿ ಬಾಬಾ ಪಾತ್ರದಲ್ಲಿ ನಿರ್ದೇಶಕ ಸಾಯಿಪ್ರಕಾಶ್
'ನೀನೇನಾ ಭಗವಂತ' ಚಿತ್ರದಲ್ಲಿ ಸಾಯಿ ಬಾಬಾ ಪಾತ್ರ ಮಾಡುವಂತೆ ಅವರಿಗೆ ಕೇಳಲಾಗಿ, ಸಾಯಿಪ್ರಕಾಶ್ ಮರುಮಾತನಾಡದೆ ಆ ಪಾತ್ರವನ್ನು ಒಪ್ಪಿಕೊಂಡರಂತೆ. ಪ್ರೀತಂ ಸಾಗರ್ ಚಿತ್ರದ ನಿರ್ಮಾಣದ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಶರತ್ ಬಿಳಿನೆಲೆ.
ಗಿರಿಧರ್ ದಿವಾನ್ ಅವರ ಸಂಗೀತವಿರುವ ಚಿತ್ರದ ನಾಯಕ ನಟ ಸಾಯಿ ಕುಮಾರ್. ಸುದೀರ್ಘ ಗ್ಯಾಪ್ ನ ಬಳಿಕ ಕನ್ನಡಕ್ಕೆ ಮರಳಿರುವ ಸಾಕ್ಷಿ ಶಿವಾನಂದ್ ಈ ಚಿತ್ರದ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಇದೊಂದು ಭಕ್ತಿ ಪ್ರಧಾನ ಚಿತ್ರವಾಗಿದ್ದು ಕೌಟುಂಬಿಕ ಕಥಾಹಂದರನ್ನೂ ಒಳಗೊಂಡಿದೆ. ನಾಸ್ತಿಕನಾದವನು ಆಸ್ತಿಕನಾಗಿ ಬದಲಾಗುವ ಕಥೆಯೇ ನೀನೇನಾ ಭಾಗವಂತ. ಮಂಗಳೂರು, ಉಡುಪಿ, ಬೆಂಗಳೂರಿನಲ್ಲಿ ನಲವತ್ತು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.
ಚಿತ್ರದಲ್ಲಿ ಆರು ಹಾಡುಗಳಿದ್ದು ಅವುಗಳಲ್ಲಿ ಮೂರು ಭಕ್ತಿ ಪ್ರಧಾನ ಹಾಡುಗಳು. ಒಂದು ಹಾಡನ್ನು ಶಿರಡಿಯಲ್ಲಿ ಚಿತ್ರೀಕರಿಸಲಾಗುತ್ತದೆ. ರಾಷ್ಟ್ರ ಪ್ರಶಸ್ತಿ ವಿಜೇತ ಸುಂದರನಾಥ ಸುವರ್ಣ ಅವರ ಛಾಯಾಗ್ರಹಣವಿದೆ ಚಿತ್ರಕ್ಕಿದೆ.
ಈಗಾಗಲೆ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಸಾಯಿ ಸಾಗರ್ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ ಈ ಚಿತ್ರದ ಬಜೆಟ್ ಒಟ್ಟು ರು.3 ಕೋಟಿ. ಅಜಯ್, ಮಂಡ್ಯ ರಮೇಶ್, ಮಿತ್ರ ಮಮತಾ ರಾವುತ್, ಬೇಬಿ ನಿಹಿತಾ ಪೈ, ಶೃಂಗೇರಿ ರಾಮಣ್ಣ, ದಿನೇಶ್ ಅತ್ತಾವರ ಅವರು ತಾರಾಗಣದಲ್ಲಿದ್ದಾರೆ. ನವರಾತ್ರಿ, ದೀಪಾವಳಿ ನಡುವೆ ಚಿತ್ರ ತೆರೆಕಾಣಲಿದೆ. (ಏಜೆನ್ಸೀಸ್)