Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾರ್ಗಿಲ್ಗೆ ಮುನ್ನ ಕೊಡಗಿಗೆ ಹೊರಟ ‘ಸೈನಿಕ’
ಮುಂಬಯಿಯಿಂದ ಕನ್ನಡ ಚಿತ್ರರಂಗಕ್ಕೆ ಬಂದ ಆಮದು ನಟಿ ಸಾಕ್ಷಿ ಶಿವಾನಂದ್ ಅವರ ಅವಳಿ -- -ಜವಳಿ ಕಥೆಯಿಂದಲೇ ಭಾರೀ ಪ್ರಚಾರ ಪಡೆದ ಸೈನಿಕ - ಕಾರ್ಗಿಲ್ಗೆ ಹೊರಡುವ ಮುನ್ನ ಹಲವು ವೀರ ಯೋಧರನ್ನು ರಾಷ್ಟ್ರಕ್ಕೆ ನೀಡಿದ ಕರ್ನಾಟಕದ ಹೆಮ್ಮೆಯ ಕೊಡಗಿಗೆ ಹೋಗಿದ್ದಾನೆ.
ಚನ್ನಪಟ್ಟಣದ ಶಾಸಕರೂ ಆದ ಚಿತ್ರ ನಟ ಸಿ.ಪಿ. ಯೋಗೀಶ್ವರ್ ತಮ್ಮ ತಂಡದೊಂದಿಗೆ 'ಸೈನಿಕ" ಚಿತ್ರದ ಎರಡನೇ ಹಂತದ ಚಿತ್ರೀಕರಣಕ್ಕಾಗಿ ಕೊಡಗಿಗೆ ತೆರಳಿದ್ದಾರೆ. ಸುಮಾರು 15 ದಿನಗಳ ಕಾಲ ಚಿತ್ರದ ಚಿತ್ರೀಕರಣ ಕೊಡಗಿನ ಸಮೃದ್ಧ ನಿಸರ್ಗದ ಮಡಿಲಲ್ಲಿ ನಡೆಯಲಿದೆ. ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ಮುಗಿದರೆ, ಚಿತ್ರೀಕರಣ ಶೇಕಡಾ 60ರಷ್ಟು ಮುಗಿದಂತೆಯೇ.
ಮೂರನೇ ಹಾಗೂ ಅಂತಿಮ ಹಂತದ ಚಿತ್ರೀಕರಣ ಕಾರ್ಗಿಲ್ನಲ್ಲಿ ನಡೆಯಲಿದೆ. ಚಿತ್ರದ ಕ್ಲೈಮ್ಯಾಕ್ಸ್ ಕೂಡ ಅಲ್ಲೆ ನಡೆಯತ್ತಂತೆ. ಅದು ಪೂರ್ಣವಾದರೆ, ಕಾರ್ಗಿಲ್ ವಿಜಯ. ಆನಂತರ ಮಾತಿನ ಮರು ಮುದ್ರಣ ಇತ್ಯಾದಿ. ಚಿತ್ರವನ್ನು ಜೂನ್ ಅಂತ್ಯಕ್ಕೆ ಬಿಡುಗಡೆ ಮಾಡುವ ಇರಾದೆ ನಿರ್ಮಾಪಕರದು. ನಾಯಕ ನಟ ಯೋಗಿಶ್ವರ್ ಅವರೊಂದಿಗೆ, ಸಾಕ್ಷಿ ಶಿವಾನಂದ್, ಸೋನಾಲಿ ಹಾಗೂ ವಸುಮಾಲಾ ನಾಯಕಿಯಾಗಿ ನಟಿಸುತ್ತಿದ್ದಾರೆ.