Don't Miss!
- News Heavy Rain: ಸಕ್ಕರೆ ನಾಡಿನಲ್ಲಿ ವರ್ಷದ ಮೊದಲ ಮಳೆ: ಧರೆಗುರುಳಿದ ಮರ, ಕಮಾನುಗಳು
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Sports PBKS vs MI IPL 2024: ಸೂರ್ಯಕುಮಾರ್ ಶೈನಿಂಗ್; ಪಂಜಾಬ್ಗೆ ಸವಾಲಿನ ಗುರಿ ನೀಡಿದ ಮುಂಬೈ
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಂದು ದಿನಕ್ಕೆ, ಒಂದೇ ಬಕೆಟ್ ನೀರು ಬಳಸುತ್ತಾರಂತೆ ಸಮಂತಾ
ಒಂದು ದಿನಕ್ಕೆ, ಒಬ್ಬ ವ್ಯಕ್ತಿ, ಒಂದೇ ಒಂದು ಬಕೆಟ್ ನೀರು ಮಾತ್ರ ಬಳಸಲು ಸಾಧ್ಯವೇ.. ಹೌದು ಎನ್ನುತ್ತಿದ್ದಾರೆ ನಟಿ ಸಮಂತಾ. ಏಕೆಂದರೆ, ನೀರಿನ ಪ್ರತಿ ಹನಿ ಕೂಡ ಬಹಳ ಮುಖ್ಯ.
ತೆಲುಗು ನಟಿ ಸಮಂತಾ ಈಗ ಹೊಸ ಚಾಲೆಂಜ್ ಶುರು ಮಾಡಿದ್ದಾರೆ. ಈ ಚಾಲೆಂಜ್ ಮೂಲಕ ನೀರಿನ ಮಹತ್ವ ಸಾರುತ್ತಿದ್ದಾರೆ. ಸರ್ಕಾರ ಬೋರ್ ಕೊರೆಯುವ ಬಗ್ಗೆ ಹೊಸ ನಿಯಮ ತರಬೇಕು ಎಂದು ಮನವಿ ಮಾಡುತ್ತಿದ್ದಾರೆ.
ಗರ್ಭಿಣಿ ವದಂತಿ ಬಗ್ಗೆ ಸಮಂತಾ ಕೊಟ್ಟ ಪ್ರತಿಕ್ರಿಯೆ
''ನಾವು ನೀರು ನಲ್ಲಿಯಲ್ಲಿ ಬರುತ್ತದೆ ಎನ್ನುವ ಭ್ರಮೆಯಲ್ಲಿ ಇದ್ದೇವೆ. ಭೂಮಿಗೆ ಬಿಳುವ ಮಳೆ ಅಂತರ್ಜಾಲವಾಗಿ ಎಷ್ಟೊ ವರ್ಷದಿಂದ ಇರುತ್ತದೆ. ನಾವು ಒಂದೇ ಸೆಕೆಂಡ್ ನಲ್ಲಿ 1500 ಅಡಿ ಬೋರ್ ಕೊರೆಯುತ್ತೇವೆ. ಇದಕ್ಕಾಗಿ ಸರ್ಕಾರ ಒಂದು ಕಾನೂನು ಜಾರಿಗೆ ತರಬೇಕು.'' ಎಂದು ಬೇಡಿಕೆ ಇಟ್ಟಿದ್ದಾರೆ.
ಅನಗತ್ಯ ನೀರಿನ ಬಳಕೆ ಮಾಡಬೇಡಿ, ಪ್ರತಿ ಹನಿ ಕೂಡ ಮುಖ್ಯ ಎಂದು ಒಂದು ಚಾಲೆಂಜ್ ನೀಡಿದ್ದಾರೆ. ಇದೇ ಭಾನುವಾರ (ಜುಲೈ 21) ದಂದು ಈ ಚಾಲೆಂಜ್ ನಡೆಯುತ್ತದೆ. ಇದರಲ್ಲಿ ಭಾಗಿಯಾಗುವವರು, ಆ ಇಡೀ ದಿನ ಒಂದೇ ಒಂದು ಬಕೆಟ್ ನೀರನ್ನು ಮಾತ್ರ ಬಳಕೆ ಮಾಡಬೇಕು.
ಹಲ್ಲು ಉಚ್ಚಲು, ಕೈ ತೊಳೆಯಲು, ಸ್ನಾನ ಮಾಡಲು.. ಹೀಗೆ ಆ ದಿನ ಒಂದೇ ಬಕೆಟ್ ನೀರಿನಲ್ಲಿ ನಮ್ಮ ಕೆಲಸಗಳನ್ನು ಮಾಡಬೇಕು. ನಲ್ಲಿಯನ್ನು ಬಳಸುವಂತೆ ಇಲ್ಲ. ಜೊತೆಗೆ ಆ ದಿನ ವಾಹನ ತೊಳೆಯುವಂತೆ ಇಲ್ಲ.
ಈ ರೀತಿ ಸಮಂತಾ ಒಂದು ಬಕೆಟ್ ಚಾಲೆಂಜ್ ಮೂಲಕ ನೀರಿನ ಮಹತ್ವವನ್ನು ಅರ್ಥ ಮಾಡಿಸಲು ಪ್ರಯತ್ನ ಮಾಡಿದ್ದಾರೆ.