ಮಣ್ಣಿನಿಂದ ತಮ್ಮ ಕೈಯಾರೆ ಗಣೇಶನ ಮೂರ್ತಿ ತಯಾರಿಸಿದ ನಟಿ ಸಂಯುಕ್ತ
Recommended Video

ಗೌರಿ-ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಎಲ್ಲೆಡೆ ಗೌರಿ-ಗಣೇಶ ಹಬ್ಬಕ್ಕೆ ತಯಾರಿ ನಡೆಯುತ್ತಿದೆ. ಬಣ್ಣ ಬಣ್ಣದ ಗಣೇಶನ ಮೂರ್ತಿಗಳು ಬೆಂಗಳೂರಿನ ರಸ್ತೆಗಳಲ್ಲಿ ರಾರಾಜಿಸುತ್ತಿವೆ. ಈ ನಡುವೆ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಲು ನಟಿ ಸಂಯುಕ್ತ ಹೊರನಾಡು ಕರೆ ನೀಡಿದ್ದಾರೆ.
ಪ್ರಾಣಿ ಪ್ರಿಯೆ ಆಗಿರುವ ನಟಿ ಸಂಯುಕ್ತ ಹೊರನಾಡು, ಮಣ್ಣಿನಲ್ಲಿ ಗಣಪತಿ ತಯಾರು ಮಾಡುವ ತರಬೇತಿ ಪಡೆದು, ಬೆಂಗಳೂರಿನಲ್ಲಿ ಪರಿಸರ ಸ್ನೇಹಿ ಗಣಪತಿ ತಯಾರು ಮಾಡುವ ಕಾರ್ಯಾಗಾರ ಆರಂಭ ಮಾಡಿದ್ದಾರೆ.
ಕಾರ್ಯಾಗಾರದಲ್ಲಿ ಶ್ಲೋಕವನ್ನು ಹೇಳುವ ಮೂಲಕ ಗಣಪತಿ ಮೂರ್ತಿ ತಯಾರು ಮಾಡಲಾಗುತ್ತದೆ. ಮಣ್ಣಿನಿಂದ ತಯಾರಿಸುವ ಈ ಮೂರ್ತಿಯಲ್ಲಿ ಬೀಜಗಳನ್ನು ಹಾಕುವುದರಿಂದ, ಮನೆಯ ಹೂಕುಂಡದಲ್ಲೇ ವಿಸರ್ಜನೆ ಮಾಡಿದರೆ, ಅದು ಗಿಡವಾಗಿ ಬೆಳೆಯುತ್ತದೆ.

ಈಗಾಗಲೇ ಇದೇ ರೀತಿ ಮಣ್ಣಿನ ಗಣಪತಿಯನ್ನು ತಯಾರಿಸಿ, ತಮ್ಮ ಮನೆಗೆ ಗಣೇಶನ ಮೂರ್ತಿಯನ್ನ ಸಂಯುಕ್ತ ಹೊರನಾಡು ತೆಗೆದುಕೊಂಡು ಹೋಗಿದ್ದಾರೆ. ಸಂಯುಕ್ತ ರಂತೆ ನೀವೂ ನಿಮ್ಮ ಕೈಯಾರೆ ಗಣೇಶ ಮೂರ್ತಿಯನ್ನ ತಯಾರಿಸಿ, ಪರಿಸರ ಸ್ನೇಹಿ ಗಣೇಶ ಹಬ್ಬವನ್ನ ಸಂಭ್ರಮದಿಂದ ಆಚರಿಸಬಹುದು.


Click it and Unblock the Notifications











