Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಣ್ಣಿನಿಂದ ತಮ್ಮ ಕೈಯಾರೆ ಗಣೇಶನ ಮೂರ್ತಿ ತಯಾರಿಸಿದ ನಟಿ ಸಂಯುಕ್ತ
Recommended Video
ಗೌರಿ-ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಎಲ್ಲೆಡೆ ಗೌರಿ-ಗಣೇಶ ಹಬ್ಬಕ್ಕೆ ತಯಾರಿ ನಡೆಯುತ್ತಿದೆ. ಬಣ್ಣ ಬಣ್ಣದ ಗಣೇಶನ ಮೂರ್ತಿಗಳು ಬೆಂಗಳೂರಿನ ರಸ್ತೆಗಳಲ್ಲಿ ರಾರಾಜಿಸುತ್ತಿವೆ. ಈ ನಡುವೆ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಲು ನಟಿ ಸಂಯುಕ್ತ ಹೊರನಾಡು ಕರೆ ನೀಡಿದ್ದಾರೆ.
ಪ್ರಾಣಿ ಪ್ರಿಯೆ ಆಗಿರುವ ನಟಿ ಸಂಯುಕ್ತ ಹೊರನಾಡು, ಮಣ್ಣಿನಲ್ಲಿ ಗಣಪತಿ ತಯಾರು ಮಾಡುವ ತರಬೇತಿ ಪಡೆದು, ಬೆಂಗಳೂರಿನಲ್ಲಿ ಪರಿಸರ ಸ್ನೇಹಿ ಗಣಪತಿ ತಯಾರು ಮಾಡುವ ಕಾರ್ಯಾಗಾರ ಆರಂಭ ಮಾಡಿದ್ದಾರೆ.
ಮಣ್ಣಿನ ಗಣೇಶ ಮಾಡುವುದನ್ನು ಹೇಳಿ ಕೊಟ್ಟ ಗಣೇಶ್ ಪತ್ನಿ ಶಿಲ್ಪಾ
ಕಾರ್ಯಾಗಾರದಲ್ಲಿ ಶ್ಲೋಕವನ್ನು ಹೇಳುವ ಮೂಲಕ ಗಣಪತಿ ಮೂರ್ತಿ ತಯಾರು ಮಾಡಲಾಗುತ್ತದೆ. ಮಣ್ಣಿನಿಂದ ತಯಾರಿಸುವ ಈ ಮೂರ್ತಿಯಲ್ಲಿ ಬೀಜಗಳನ್ನು ಹಾಕುವುದರಿಂದ, ಮನೆಯ ಹೂಕುಂಡದಲ್ಲೇ ವಿಸರ್ಜನೆ ಮಾಡಿದರೆ, ಅದು ಗಿಡವಾಗಿ ಬೆಳೆಯುತ್ತದೆ.
ಈಗಾಗಲೇ ಇದೇ ರೀತಿ ಮಣ್ಣಿನ ಗಣಪತಿಯನ್ನು ತಯಾರಿಸಿ, ತಮ್ಮ ಮನೆಗೆ ಗಣೇಶನ ಮೂರ್ತಿಯನ್ನ ಸಂಯುಕ್ತ ಹೊರನಾಡು ತೆಗೆದುಕೊಂಡು ಹೋಗಿದ್ದಾರೆ. ಸಂಯುಕ್ತ ರಂತೆ ನೀವೂ ನಿಮ್ಮ ಕೈಯಾರೆ ಗಣೇಶ ಮೂರ್ತಿಯನ್ನ ತಯಾರಿಸಿ, ಪರಿಸರ ಸ್ನೇಹಿ ಗಣೇಶ ಹಬ್ಬವನ್ನ ಸಂಭ್ರಮದಿಂದ ಆಚರಿಸಬಹುದು.