twitter
    For Quick Alerts
    ALLOW NOTIFICATIONS  
    For Daily Alerts

    ಮಣ್ಣಿನಿಂದ ತಮ್ಮ ಕೈಯಾರೆ ಗಣೇಶನ ಮೂರ್ತಿ ತಯಾರಿಸಿದ ನಟಿ ಸಂಯುಕ್ತ

    By Harshitha
    |

    Recommended Video

    ಸಂಯುಕ್ತ ತರಹ ನೀವು ಗಣೇಶನ ಮೂರ್ತಿ ತಯಾರು ಮಾಡಿ..! | Filmibeat Kannada

    ಗೌರಿ-ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಎಲ್ಲೆಡೆ ಗೌರಿ-ಗಣೇಶ ಹಬ್ಬಕ್ಕೆ ತಯಾರಿ ನಡೆಯುತ್ತಿದೆ. ಬಣ್ಣ ಬಣ್ಣದ ಗಣೇಶನ ಮೂರ್ತಿಗಳು ಬೆಂಗಳೂರಿನ ರಸ್ತೆಗಳಲ್ಲಿ ರಾರಾಜಿಸುತ್ತಿವೆ. ಈ ನಡುವೆ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಲು ನಟಿ ಸಂಯುಕ್ತ ಹೊರನಾಡು ಕರೆ ನೀಡಿದ್ದಾರೆ.

    ಪ್ರಾಣಿ ಪ್ರಿಯೆ ಆಗಿರುವ ನಟಿ ಸಂಯುಕ್ತ ಹೊರನಾಡು, ಮಣ್ಣಿನಲ್ಲಿ ಗಣಪತಿ ತಯಾರು ಮಾಡುವ ತರಬೇತಿ ಪಡೆದು, ಬೆಂಗಳೂರಿನಲ್ಲಿ ಪರಿಸರ ಸ್ನೇಹಿ ಗಣಪತಿ ತಯಾರು ಮಾಡುವ ಕಾರ್ಯಾಗಾರ ಆರಂಭ ಮಾಡಿದ್ದಾರೆ.

    ಮಣ್ಣಿನ ಗಣೇಶ ಮಾಡುವುದನ್ನು ಹೇಳಿ ಕೊಟ್ಟ ಗಣೇಶ್ ಪತ್ನಿ ಶಿಲ್ಪಾ ಮಣ್ಣಿನ ಗಣೇಶ ಮಾಡುವುದನ್ನು ಹೇಳಿ ಕೊಟ್ಟ ಗಣೇಶ್ ಪತ್ನಿ ಶಿಲ್ಪಾ

    ಕಾರ್ಯಾಗಾರದಲ್ಲಿ ಶ್ಲೋಕವನ್ನು ಹೇಳುವ ಮೂಲಕ ಗಣಪತಿ ಮೂರ್ತಿ ತಯಾರು ಮಾಡಲಾಗುತ್ತದೆ. ಮಣ್ಣಿನಿಂದ ತಯಾರಿಸುವ ಈ ಮೂರ್ತಿಯಲ್ಲಿ ಬೀಜಗಳನ್ನು ಹಾಕುವುದರಿಂದ, ಮನೆಯ ಹೂಕುಂಡದಲ್ಲೇ ವಿಸರ್ಜನೆ ಮಾಡಿದರೆ, ಅದು ಗಿಡವಾಗಿ ಬೆಳೆಯುತ್ತದೆ.

    Samyuktha Hornad makes her own eco friendly Ganapathi

    ಈಗಾಗಲೇ ಇದೇ ರೀತಿ ಮಣ್ಣಿನ ಗಣಪತಿಯನ್ನು ತಯಾರಿಸಿ, ತಮ್ಮ ಮನೆಗೆ ಗಣೇಶನ ಮೂರ್ತಿಯನ್ನ ಸಂಯುಕ್ತ ಹೊರನಾಡು ತೆಗೆದುಕೊಂಡು ಹೋಗಿದ್ದಾರೆ. ಸಂಯುಕ್ತ ರಂತೆ ನೀವೂ ನಿಮ್ಮ ಕೈಯಾರೆ ಗಣೇಶ ಮೂರ್ತಿಯನ್ನ ತಯಾರಿಸಿ, ಪರಿಸರ ಸ್ನೇಹಿ ಗಣೇಶ ಹಬ್ಬವನ್ನ ಸಂಭ್ರಮದಿಂದ ಆಚರಿಸಬಹುದು.

    English summary
    Kannada Actress Samyuktha Hornad makes her own eco friendly Ganapathi.
    Tuesday, August 28, 2018, 14:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X