Don't Miss!
- News Big Offer for Bengaluru Voters: ಮತದಾರರಿಗೆ ಗುಡ್ ನ್ಯೂಸ್.. ರಿಯಾಯಿತಿ ದರದಲ್ಲಿ ತಿಂಡಿ ವ್ಯವಸ್ಥೆ
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಂಚಾರಿ ವಿಜಯ್ ಹುಟ್ಟುಹಬ್ಬ: ಅಗಲಿದ ಜೀವದ ಮಧುರ ನೆನಪು
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಹುಟ್ಟುಹಬ್ಬ ಇಂದು (ಜುಲೈ 17). ಕ್ರೂರ ವಿಧಿ ಅವರನ್ನು ಕರೆದುಕೊಳ್ಳದೇ ಇದ್ದಿದ್ದರೆ ಇಂದು ಯಾವುದಾದರೂ ಹಾಡಿಯ ಮಕ್ಕಳೊಟ್ಟಿಗೊ, ನಿರ್ಲಕ್ಷಿತ ಸಮುದಾಯದ ಜನರೊಟ್ಟಿಗೊ ತಮ್ಮ 39ನೇ ವರ್ಷದ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿರುತ್ತಿದ್ದರು ಸಂಚಾರಿ ವಿಜಯ್.
ಜುಲೈ 17, 1983 ರಂದು ಚಿಕ್ಕಮಗಳೂರಿನ ಪಂಚನಹಳ್ಳಿಯಲ್ಲಿ ಜನಿಸಿದ ಸಂಚಾರಿ ವಿಜಯ್, ಬಾಲ್ಯದಲ್ಲಿಯೇ ಬಹಳ ಕಷ್ಟಪಟ್ಟು ಮೇಲೆ ಬಂದ ವ್ಯಕ್ತಿ. ಜೀವನ ಸಾಗಿಸಲು ಹೋಟೆಲ್ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡಿದ್ದ ವಿಜಯ್, ತಮ್ಮ ಅಪ್ರತಿಮ ಶ್ರದ್ಧೆ, ಶ್ರಮದಿಂದ ರಾಷ್ಟ್ರಪ್ರಶಸ್ತಿ ಪಡೆದ ನಟನಾಗಿ ಬೆಳೆದಿದ್ದು, ಇಂದಿನ ಹಲವು ನಟರಿಗೆ ಮಾದರಿಯಾಗಬಹುದಾದ, ಮಾದರಿಯಾಗಲೇ ಬೇಕಾಗಿರುವ ಸಂಗತಿ.
ಸಂಚಾರಿ ನಾಟಕ ತಂಡದಲ್ಲಿ ಹಲವು ನಾಟಗಳಲ್ಲಿ ನಟಿಸಿದ ಸಂಚಾರಿ ವಿಜಯ್, 2011 ರಲ್ಲಿ ಬಿಡುಗಡೆ ಆದ 'ರಂಗಪ್ಪ ಹೋಗ್ಬಿಟ್ನಾ' ಸಿನಿಮಾದಿಂದ ಚಿತ್ರರಂಗದಲ್ಲಿ ಸಕ್ರಿಯರಾದರು. ಆದರೆ ಪ್ರತಿಭಾವಂತ ನಟನ ಪ್ರತಿಭೆ ಗುರುತಿಸಲು, ಅದನ್ನು ಸೂಕ್ತವಾಗಿ ಬಳಸಿಕೊಳ್ಳಲು ಕನ್ನಡ ಚಿತ್ರರಂಗ ಬಹಳ ತಡ ಮಾಡಿತು.
2015 ರಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಸಂಚಾರಿ ವಿಜಯ್
2015 ರಲ್ಲಿ 'ನಾನು ಅವನಲ್ಲ, ಅವಳು' ಸಿನಿಮಾಕ್ಕೆ ವಿಜಯ್ಗೆ ರಾಷ್ಟ್ರಪ್ರಶಸ್ತಿ ಧಕ್ಕಿದಾಗಲೇ ವಿಜಯ್ರ ಪ್ರತಿಭೆ ಚಿತ್ರರಂಗಕ್ಕೆ ಅರ್ಥವಾಗಿದ್ದು. ವಿಜಯ್ಗೆ ರಾಷ್ಟ್ರಪ್ರಶಸ್ತಿ ಬಂತಾದರೂ ಸಿನಿಮಾ ಅವಕಾಶಗಳೇನೂ ಬರಲಿಲ್ಲ. ರಾಷ್ಟ್ರಪ್ರಶಸ್ತಿ ಬಳಿಕವೂ ಅವರ ನಟನಾ ಪ್ರತಿಭೆಗೆ ಸವಾಲಾಗಬಲ್ಲ ಪಾತ್ರಗಳು ಸಿಗಲಿಲ್ಲವೆನ್ನುವುದು ಸತ್ಯ. ಆದರೆ ಭರವಸೆ ಕಳೆದುಕೊಳ್ಳಲಿಲ್ಲ ಸಂಚಾರಿ ವಿಜಯ್.
ಹೆಚ್ಚು ಸಿನಿಮಾ ಅವಕಾಶಗಳು ಲಭಿಸಲು ಆರಂಭವಾದವು
2017, 18 ರ ವೇಳೆಗೆ ಸಂಚಾರಿ ವಿಜಯ್ಗೆ ಹೆಚ್ಚು ಹೆಚ್ಚು ಸಿನಿಮಾ ಅವಕಾಶಗಳು ಲಭಿಸಲು ಆರಂಭವಾದವು. ಕಮರ್ಶಿಯಲ್, ಕಲಾತ್ಮಕ ಎಲ್ಲ ಮಾದರಿಯ ಸಿನಿಮಾಗಳು ಸಂಚಾರಿ ವಿಜಯ್ ಅನ್ನು ಅರಸಿ ಬಂದವು. ವಿಜಯ್ ಸಹ ಅದೇ ತನ್ಮಯದಿಂದ ಪಾತ್ರವನ್ನು ನಿಭಾಯಿಸಿದರು. ಆದರೆ ಅದೇ ವೇಳೆಗೆ ಕೋವಿಡ್ ಹಬ್ಬಿ ಸಿನಿಮಾ ರಂಗವೇ ಸ್ಥಬ್ಧವಾಯಿತು.
ಕೋವಿಡ್ ಸಮಯದಲ್ಲಿ ಸಮಾಜ ಸೇವೆ
ಆದರೆ ಸಂಚಾರಿ ವಿಜಯ್ರ ಕ್ರಿಯಾಶೀಲ ಮನಸ್ಸು, ಚಲನಶೀಲ ವ್ಯಕ್ತಿತ್ವ ಕೋವಿಡ್ ಸಮಯದಲ್ಲಿ ಅವರನ್ನು ಸಮಾಜ ಸೇವೆಯತ್ತ ಎಳೆದೊಯ್ಯಿತು. ಕವಿರಾಜ್, ನೀತು ಶೆಟ್ಟಿ ಇನ್ನೂ ಕೆಲವು ಸಮಾನ ಮನಸ್ಕರ ಗೆಳೆಯರ ಬಳಗ ಸೇರಿಕೊಂಡ ಹಲವಾರು ಮಂದಿಗೆ ಸಹಾಯ ಮಾಡಿದರು. ಅವಶ್ಯಕತೆ ಇದ್ದವರಿಗೆ ಆಕ್ಸಿಜನ್ ಕಾನ್ಸ್ಟ್ರೇಟರ್ ಮಷಿನ್ಗಳನ್ನು ಒದಗಿಸಿದರು. ಆಹಾರ ಒದಗಿಸಿದರು. ಅಲ್ಲೆಲ್ಲೊ ಕಾಡಿನಂಚಿನಲ್ಲಿರುವ ಬುಡಕಟ್ಟು ಸಮುದಾಯದ ಜನರ ಮನೆಗಳಿಗೆ ತಾರಸಿ ಹೊದಿಸಬೇಕು ಎಂದು ಕನಸು ಕಂಡರು, ಇನ್ಯಾರಿಗೋ ತಿನ್ನಲು ಊಟ, ಬದುಕಲು ಕೆಲಸ ಕೊಡಬೇಕು ಎಂದುಕೊಂಡರು ವಿಜಯ್.
ಬೈಕ್ನಲ್ಲಿ ಹೋಗಬೇಕಾದರೆ ಆದ ಅಪಘಾತ
ಆದರೆ ಸಂಚಾರಿ ವಿಜಯ್ರ ಕನಸುಗಳನ್ನೆಲ್ಲ ವಿಧಿ ಕಿತ್ತುಕೊಂಡು ಬಿಟ್ಟಿತು. ಜೊತೆಗೆ ಕನ್ನಡ ಸಿನಿ ಪ್ರೇಮಿಗಳಿಂದ ಅತ್ಯುತ್ತಮ ಕಲಾವಿದನೊಬ್ಬನನ್ನು ದೂರ ಮಾಡಿಬಿಟ್ಟಿತು. ಅಂದು 2021, ಜೂನ್ 12ರ ಶನಿವಾರದ ರಾತ್ರಿ, ತಮ್ಮ ಮನೆಯಿಂದ ಸ್ವಲ್ಪವೇ ಮುಂದಕ್ಕೆ ಗೆಳೆಯನ ಬೈಕ್ನಲ್ಲಿ ಹಿಂದೆ ಕೂತು ವಿಜಯ್ ಹೋಗುತ್ತಿದ್ದರು. ಆಗ ಆದ ಸಣ್ಣ ಅಪಘಾತದಲ್ಲಿ ವಿಜಯ್ ತಲೆಗೆ ಬಲವಾದ ಪೆಟ್ಟು ಬಿದ್ದಿತು. ವಿಜಯ್ ಮತ್ತೆ ಮೇಲೇಳಲೇ ಇಲ್ಲ. ಜುಲೈ 14 ರಂದು ವಿಜಯ್ ಅನ್ನು ಮೃತ ಎಂದು ಘೋಷಿಸಲಾಯ್ತು. ಅಲ್ಲಿಗೆ ಕನ್ನಡ ಚಿತ್ರರಂಗ ಒಬ್ಬ ಅತ್ಯಪೂರ್ವ ನಟನನ್ನು ಕಳೆದುಕೊಂಡಿತು. ಇಂದು ಸಂಚಾರಿ ವಿಜಯ್ ಹುಟ್ಟುಹಬ್ಬದಂದು, ಅವರ ಗೆಳೆಯರು, ಅಭಿಮಾನಿಗಳು, ಸಹನಟರು ಸಾಮಾಜಿಕ ಜಾಲತಾಣಗಳ ಮೂಲಕ ನೆನಪಿಸಿಕೊಳ್ಳುತ್ತಿದ್ದಾರೆ.
Recommended Video