Don't Miss!
- Automobiles ಬೈಕಿನಂತೆ ಮೈಲೇಜ್, ಹಿಂದೆಗಿಂತಲೂ ಬಲಿಷ್ಠವಾಗಿ ಸ್ವಿಫ್ಟ್ ಅಖಾಡಕ್ಕೆ: ಖರೀದಿಸಲು ಕ್ಯೂ ನಿಲ್ಲಲು ರೆಡಿಯಾಗಿರಿ!
- News Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರರಂಗಕ್ಕೆ ದುಡಿದ ಸ್ವಾಭಿಮಾನಿಗೆ ಮುಪ್ಪಿನಲ್ಲಿ ಬೇಕಿದೆ ನೆರವು: ಸಂಚಾರಿ ವಿಜಯ್ ಮನವಿಗೆ ಓಗೊಡಿ
ಕನ್ನಡ ಚಿತ್ರರಂಗ ಇಂದು ಕೋಟ್ಯಂತರ ವ್ಯವಹಾರ ನಡೆಸುವ ಶ್ರೀಮಂತ ಉದ್ಯಮ ಆಗಿರುವುದರ ಹಿಂದೆ ಸಾವಿರಾರು ಮಂದಿಯ ಶ್ರಮವಿದೆ. ಎಷ್ಟೂ ಪ್ರತಿಭಾವಂತ ನಟ-ನಟಿಯರು, ನಿರ್ದೇಶಕರು, ತಂತ್ರಜ್ಞರು, ಕತೆಗಾರರು, ಸಂಭಾಷಣೆಕಾರರು ತಮ್ಮ ಪ್ರತಿಭೆ ಧಾರೆ ಎರೆದ ಕಾರಣ, ಕನ್ನಡ ಚಿತ್ರರಂಗ ನೆಲೆಯೂರಿದೆ.
ಹೀಗೆ ಚಿತ್ರರಂಗಕ್ಕೆ ಅವಿರತ ಸೇವೆ ಮಾಡಿದ ಎಷ್ಟೋ ಹಿರಿ ಜೀವಗಳು ಇಂದಿಗೂ ಇವೆ. ಆದರೆ ಹೊಸ ಅಲೆಯ ಮೇಲೆ ತೇಲುತ್ತಿರುವ ಚಿತ್ರರಂಗದ ಹೊಸ ಮಂದಿಗೆ ಅವರ ಪರಿಚಯವಿಲ್ಲ. ಪರಿಚಯವಿದ್ದರೂ ಹಲವರಿಗೆ ಅವರ ಉಸಾಬರಿ ಬೇಕಿಲ್ಲ. ಅಂಥಹಾ ಹಿರಿಜೀವಗಳಲ್ಲಿ ಒಬ್ಬರು ಶ್ರೀರಂಗ.
'ಜನುಮದ ಜೋಡಿ', 'ರಕ್ತ ಕಣ್ಣೀರು', 'ಆಕಾಶ್', 'ವೀರ ಕನ್ನಡಿಗ', 'ಅಪ್ಪಾಜಿ', 'ಇನ್ಸ್ಪೆಕ್ಟರ್ ವಿಕ್ರಮ್', 'ಗಂಡುಗಲಿ ಕುಮಾರ ರಾಮ', 'ಆಸೆಗೊಬ್ಬ ಮೀಸೆಗೊಬ್ಬ' 'ಅಪ್ಪು' 'ಅಭಿ' ಸಿನಿಮಾಗಳಿಗೆ ಹಿಟ್ ಹಾಡುಗಳನ್ನು ಬರೆದ, 'ಅಂಜದ ಗಂಡು', 'ಕಿಂದರಿ ಜೋಗಿ', 'ಮುತ್ತೈದೆ ಭಾಗ್ಯ', 'ಅದೃಷ್ಟ ರೇಖೆ', 'ಪುಕ್ಸಟ್ಟೆ ಗಂಡ ಹೊಟ್ಟೆ ತುಂಬಾ ಉಂಡ', 'ಶುಕ್ರ ದೆಶೆ', 'ಭೂಲೋಕದಲ್ಲಿ ಯಮರಾಜ' ಇನ್ನೂ ಹಲವು ಸಿನಿಮಾಗಳಿಗೆ ಸಂಭಾಷಣೆ ಬರೆದಿರುವ ಚಿತ್ರಸಾಹಿತಿ 'ಶ್ರೀರಂಗ'.
ಇಳಿವಯಸ್ಸಿನ ಶ್ರೀರಂಗ ಅವರು ತಮ್ಮ ಪತ್ನಿ ಹಾಗೂ ಮಗಳೊಟ್ಟಿಗೆ ಕೆ.ಆರ್.ಪುರಂ ನಲ್ಲಿ ಸಣ್ಣದೊಂದು ಮನೆಯಲ್ಲಿ ವಾಸವಿದ್ದಾರೆ. ಮಗಳು ಆರ್ಕೆಸ್ಟ್ರಾದಲ್ಲಿ ಹಾಡಿ ಅಪ್ಪ-ಅಮ್ಮನನ್ನು ಸಾಕುತ್ತಿದ್ದಾರೆ. ಮುಪ್ಪಿನಲ್ಲಿ ಕಷ್ಟವೇ ಬದುಕಾಗಿ ದಿನ ಕಳೆಯುತ್ತಿದ್ದಾರೆ ಒಂದು ಕಾಲದ ಖ್ಯಾತ ಚಿತ್ರಸಾಹಿತಿ ಶ್ರೀರಂಗ.
ಶ್ರೀರಂಗರನ್ನು ಅಕಸ್ಮಾತ್ ಆಗಿ ಕಾರ್ಯಕ್ರಮವೊಂದರಲ್ಲಿ ನೋಡಿದ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರು, ಶ್ರೀರಂಗ ಅವರ ಈಗಿನ ಪರಿಸ್ಥಿತಿಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿವರವಾಗಿ ಬರೆದಿದ್ದಾರೆ. ಜೊತೆಗೆ ಶ್ರೀರಂಗರಿಗೆ ಸಹಾಯದ ಅಗತ್ಯವೂ ಇರುವುದಾಗಿ ಹಾಗೂ ಉದಾರಮನಸ್ಸಿನವರು ಆರ್ಥಿಕ ನೆರವು ನೀಡಬೇಕೆಂದು ಮನವಿಯನ್ನೂ ಮಾಡಿದ್ದಾರೆ.
ಯಾರಿಗಾದರೂ ಈ ಹಿರಿಯ ಜೀವಗಳಿಗೆ ನೆರವು ನೀಡ ಬಯಸುವ ಮನಸ್ಸಿದ್ದರೆ ನನ್ನನ್ನು ಸಂಪರ್ಕಿಸಿ. ಅವರ ಬ್ಯಾಂಕ್ ಖಾತೆಗೆ ನೀವೇ ನೇರವಾಗಿ ಹಣ ಹಾಕಬಹುದು ಎಂದು ಬ್ಯಾಂಕ್ ಖಾತೆ ಸಂಖ್ಯೆ ಕೊಟ್ಟಿದ್ದಾರೆ ಸಂಚಾರಿ ವಿಜಯ್. ಜೊತೆಗೆ ಅವರಿಗೆ ಇಷ್ಟು ದಿನ ನೆರವು ನೀಡುತ್ತಿದ್ದ ಗಿರೀಶ್ ಎಂಬುವರ ಮೊಬೈಲ್ ಸಂಖ್ಯೆ (98866-40906) ಸಹ ಹಾಕಿದ್ದಾರೆ.
Recommended Video
ಶ್ರೀರಂಗ
ಅವರ
ಬ್ಯಾಂಕ್
ಖಾತೆ
ವಿವರ
ಇಂತಿದೆ
Name-
sree
ranga
state
bank
of
india
Chandar
layout
branch
Ifsc
SBIN
0004051
A/c
no
64145797446