Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಂಗನಾ ರಣೌತ್ ಭೇಟಿ: ಸಂಚಾರಿ ವಿಜಯ್ ಹಂಚಿಕೊಂಡ ಅನುಭವ
ಪ್ರಸ್ತುತ ಡ್ರಗ್ಸ್ ಬಿಟ್ಟರೆ ಅತಿಯಾಗಿ ಚರ್ಚೆಯಾಗುತ್ತಿರುವುದು ಕಂಗನಾ ರಣೌತ್ ಬಗ್ಗೆ. ಕಂಗನಾ ಆಡುತ್ತಿರುವ ಮಾತುಗಳು ಹಾಗೆಯೇ ಇವೆ.
ಕಂಗನಾ ವಿಷಯದಲ್ಲಿ ಸ್ಪಷ್ಟವಾಗಿ ಎರಡು ಗುಂಪಾಗಿದೆ. ಒಂದು ಗುಂಪು ಕಂಗನಾ ಏನೇ ಹೇಳಿದರು, ಏನೇ ಮಾಡಿದರೂ ಎಲ್ಲದಕ್ಕೂ ಬೆಂಬಲಿಸುತ್ತಿದ್ದಾರೆ, ಮತ್ತೊಂದು ಗುಂಪು ಕಂಗನಾರ ಪ್ರತಿಯೊಂದು ವಿಷಯವನ್ನೂ ವಿರೋಧಿಸುತ್ತಿದ್ದಾರೆ.
ಕನ್ನಡದ ಪ್ರತಿಭಾವಂತ ಯುವ ನಟ ಸಂಚಾರಿ ವಿಜಯ್ ಕಂಗನಾ ರಣೌತ್ ಬಗ್ಗೆ ಮಾತನಾಡಿದ್ದಾರೆ. ಅವರೊಂದಿಗೆ ಕಳೆದ ಕೆಲವು ಕ್ಷಣಗಳು, ಕಂಗನಾ ರು ಅಂದು ತೋರಿದ ವರ್ತನೆಯ ಬಗ್ಗೆ ವಿಜಯ್ ಫಿಲ್ಮಿಬೀಟ್ ಲೈವ್ ನಲ್ಲಿ ಮಾತನಾಡಿದರು.
ಅದೇ ವರ್ಷ ಕಂಗನಾಗೂ ರಾಷ್ಟ್ರಪ್ರಶಸ್ತಿ
ಸಂಚಾರಿ ವಿಜಯ್ ಅವರಿಗೆ 'ನಾನು ಅವನಲ್ಲ, ಅವಳು' ಸಿನಿಮಾಕ್ಕೆ 2015 ರಲ್ಲಿ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಬಂತು. ಅದೇ ವರ್ಷ ಕಂಗನಾ ಅವರಿಗೂ ತಮ್ಮ 'ಕ್ವೀನ್' ಸಿನಿಮಾಕ್ಕಾಗಿ ಅತ್ಯುತ್ತಮ ನಟಿ ವಿಭಾಗದ ರಾಷ್ಟ್ರಪ್ರಶಸ್ತಿ ಬಂದಿತ್ತು.
ಮೊದಲ ಸಾಲಿನಲ್ಲಿ ಕುಳಿತುಕೊಂಡ ಕಂಗನಾ
ಅಂದು ಕಾರ್ಯಕ್ರಮಕ್ಕೆ ಬಂದ ಕಂಗನಾ ಮೊದಲ ಸಾಲಿನಲ್ಲಿ ಕುಳಿತುಕೊಂಡರಂತೆ. ಕುಳಿತುಕೊಂಡವರೇ ಅತ್ತ-ಇತ್ತ ಏನನ್ನೋ ಹುಡುಕಲು ಪ್ರಾರಂಭಿಸಿದರಂತೆ. ಕೊನೆಗೆ ಅಲ್ಲಿದ್ದ ಅವರ ಪರಿಚಯದ ಪತ್ರಕರ್ತರೊಬ್ಬರನ್ನು ಕರೆದು, 'ಈ ಬಾರಿ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಯಾರಿಗೆ ಬಂದಿದೆ?' ಎಂದು ಕೇಳಿದರಂತೆ. ಆ ಪತ್ರಕರ್ತ ಹಿಂದಿನ ಸಾಲಿನಲ್ಲಿ ಕೂತಿದ್ದ ಸಂಚಾರಿ ವಿಜಯ್ ಅವರನ್ನು ತೋರಿಸಿದರಂತೆ.
ವಿಜಯ್ ರನ್ನು ಬಳಿಗೆ ಕರೆದ ಕಂಗನಾ
ಕೂಡಲೇ ಕಂಗನಾ ವಿಜಯ್ ಅವರನ್ನು ಬಳಿಗೆ ಕರೆದು ತಾವು ಕೂತಿದ್ದ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಲು ಹೇಳಿದರಂತೆ. ಸಂಚಾರಿ ವಿಜಯ್ ಸಹ ಅಂತೆಯೇ ಮಾಡಿದಂತೆ. ವಿಜಯ್ ಅವರ ಸಿನಿಮಾದ ಬಗ್ಗೆ ಕೆಲ ಮಾತನಾಡಿ ಮಾಹಿತಿ ಪಡೆದರಂತೆ ಕಂಗನಾ.
ಎಷ್ಟು ಬೇಕಾದರೂ ಚಿತ್ರ ತೆಗೆದುಕೊಳ್ಳಿ ಎಂದರಂತೆ ಕಂಗನಾ
ಹಿಂದಿನ ಸಾಲಿನಲ್ಲಿ ಕೂತಿದ್ದ ವಿಜಯ್ ಹಾಗೂ ಕಂಗನಾ ಒಂದೇ ಫ್ರೇಮಿನಲ್ಲಿ ಚಿತ್ರ ತೆಗೆಯಲು ವಿಜಯ್ ಅಣ್ಣ ಪರದಾಡುತ್ತಿದ್ದರಂತೆ. ಆದರೆ ಕೊನೆಗೆ ಕಂಗನಾ ರೆ ಜೊತೆಯಾಗಿ ಕೂತು ಈಗ ಎಷ್ಟು ಬೇಕಾದರೂ ಚಿತ್ರ ತೆಗೆದುಕೊಳ್ಳಿ ಎಂದರಂತೆ.
Recommended Video
ಕಂಗನಾಳ ಗುಣದ ಪರಿಚಯ ಅಂದು ಆಯಿತು: ವಿಜಯ್
ಕಂಗನಾ ರಣೌತ್ ಅನ್ನು ನಾನು ಬಹುವಾಗಿ ಮೆಚ್ಚುತ್ತಿದ್ದೆ. ಆಕೆ ಕಲಾವಿದೆಯಾಗಿ ನನ್ನನ್ನು ಗುರುತಿಸಿದರು. ಕಲಾವಿದರು ಮತ್ತೊಬ್ಬ ಕಲಾವಿದನ ಪ್ರತಿಭೆಯನ್ನು ಗುರುತಿಸುವುದು ಬಹಳ ಪ್ರಮುಖವಾದುದು. ಅಂದು ಕಂಗನಾರ ಗುಣದ ಪರಿಚಯ ನನಗೆ ಆಯಿತು ಎಂದರು ಸಂಚಾರಿ ವಿಜಯ್.