Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಂಗನಾ ರಣೌತ್ ಭೇಟಿ: ಸಂಚಾರಿ ವಿಜಯ್ ಹಂಚಿಕೊಂಡ ಅನುಭವ
ಪ್ರಸ್ತುತ ಡ್ರಗ್ಸ್ ಬಿಟ್ಟರೆ ಅತಿಯಾಗಿ ಚರ್ಚೆಯಾಗುತ್ತಿರುವುದು ಕಂಗನಾ ರಣೌತ್ ಬಗ್ಗೆ. ಕಂಗನಾ ಆಡುತ್ತಿರುವ ಮಾತುಗಳು ಹಾಗೆಯೇ ಇವೆ.
ಕಂಗನಾ ವಿಷಯದಲ್ಲಿ ಸ್ಪಷ್ಟವಾಗಿ ಎರಡು ಗುಂಪಾಗಿದೆ. ಒಂದು ಗುಂಪು ಕಂಗನಾ ಏನೇ ಹೇಳಿದರು, ಏನೇ ಮಾಡಿದರೂ ಎಲ್ಲದಕ್ಕೂ ಬೆಂಬಲಿಸುತ್ತಿದ್ದಾರೆ, ಮತ್ತೊಂದು ಗುಂಪು ಕಂಗನಾರ ಪ್ರತಿಯೊಂದು ವಿಷಯವನ್ನೂ ವಿರೋಧಿಸುತ್ತಿದ್ದಾರೆ.
ಕನ್ನಡದ ಪ್ರತಿಭಾವಂತ ಯುವ ನಟ ಸಂಚಾರಿ ವಿಜಯ್ ಕಂಗನಾ ರಣೌತ್ ಬಗ್ಗೆ ಮಾತನಾಡಿದ್ದಾರೆ. ಅವರೊಂದಿಗೆ ಕಳೆದ ಕೆಲವು ಕ್ಷಣಗಳು, ಕಂಗನಾ ರು ಅಂದು ತೋರಿದ ವರ್ತನೆಯ ಬಗ್ಗೆ ವಿಜಯ್ ಫಿಲ್ಮಿಬೀಟ್ ಲೈವ್ ನಲ್ಲಿ ಮಾತನಾಡಿದರು.
ಅದೇ ವರ್ಷ ಕಂಗನಾಗೂ ರಾಷ್ಟ್ರಪ್ರಶಸ್ತಿ
ಸಂಚಾರಿ ವಿಜಯ್ ಅವರಿಗೆ 'ನಾನು ಅವನಲ್ಲ, ಅವಳು' ಸಿನಿಮಾಕ್ಕೆ 2015 ರಲ್ಲಿ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಬಂತು. ಅದೇ ವರ್ಷ ಕಂಗನಾ ಅವರಿಗೂ ತಮ್ಮ 'ಕ್ವೀನ್' ಸಿನಿಮಾಕ್ಕಾಗಿ ಅತ್ಯುತ್ತಮ ನಟಿ ವಿಭಾಗದ ರಾಷ್ಟ್ರಪ್ರಶಸ್ತಿ ಬಂದಿತ್ತು.
ಮೊದಲ ಸಾಲಿನಲ್ಲಿ ಕುಳಿತುಕೊಂಡ ಕಂಗನಾ
ಅಂದು ಕಾರ್ಯಕ್ರಮಕ್ಕೆ ಬಂದ ಕಂಗನಾ ಮೊದಲ ಸಾಲಿನಲ್ಲಿ ಕುಳಿತುಕೊಂಡರಂತೆ. ಕುಳಿತುಕೊಂಡವರೇ ಅತ್ತ-ಇತ್ತ ಏನನ್ನೋ ಹುಡುಕಲು ಪ್ರಾರಂಭಿಸಿದರಂತೆ. ಕೊನೆಗೆ ಅಲ್ಲಿದ್ದ ಅವರ ಪರಿಚಯದ ಪತ್ರಕರ್ತರೊಬ್ಬರನ್ನು ಕರೆದು, 'ಈ ಬಾರಿ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಯಾರಿಗೆ ಬಂದಿದೆ?' ಎಂದು ಕೇಳಿದರಂತೆ. ಆ ಪತ್ರಕರ್ತ ಹಿಂದಿನ ಸಾಲಿನಲ್ಲಿ ಕೂತಿದ್ದ ಸಂಚಾರಿ ವಿಜಯ್ ಅವರನ್ನು ತೋರಿಸಿದರಂತೆ.
ವಿಜಯ್ ರನ್ನು ಬಳಿಗೆ ಕರೆದ ಕಂಗನಾ
ಕೂಡಲೇ ಕಂಗನಾ ವಿಜಯ್ ಅವರನ್ನು ಬಳಿಗೆ ಕರೆದು ತಾವು ಕೂತಿದ್ದ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಲು ಹೇಳಿದರಂತೆ. ಸಂಚಾರಿ ವಿಜಯ್ ಸಹ ಅಂತೆಯೇ ಮಾಡಿದಂತೆ. ವಿಜಯ್ ಅವರ ಸಿನಿಮಾದ ಬಗ್ಗೆ ಕೆಲ ಮಾತನಾಡಿ ಮಾಹಿತಿ ಪಡೆದರಂತೆ ಕಂಗನಾ.
ಎಷ್ಟು ಬೇಕಾದರೂ ಚಿತ್ರ ತೆಗೆದುಕೊಳ್ಳಿ ಎಂದರಂತೆ ಕಂಗನಾ
ಹಿಂದಿನ ಸಾಲಿನಲ್ಲಿ ಕೂತಿದ್ದ ವಿಜಯ್ ಹಾಗೂ ಕಂಗನಾ ಒಂದೇ ಫ್ರೇಮಿನಲ್ಲಿ ಚಿತ್ರ ತೆಗೆಯಲು ವಿಜಯ್ ಅಣ್ಣ ಪರದಾಡುತ್ತಿದ್ದರಂತೆ. ಆದರೆ ಕೊನೆಗೆ ಕಂಗನಾ ರೆ ಜೊತೆಯಾಗಿ ಕೂತು ಈಗ ಎಷ್ಟು ಬೇಕಾದರೂ ಚಿತ್ರ ತೆಗೆದುಕೊಳ್ಳಿ ಎಂದರಂತೆ.
Recommended Video
ಕಂಗನಾಳ ಗುಣದ ಪರಿಚಯ ಅಂದು ಆಯಿತು: ವಿಜಯ್
ಕಂಗನಾ ರಣೌತ್ ಅನ್ನು ನಾನು ಬಹುವಾಗಿ ಮೆಚ್ಚುತ್ತಿದ್ದೆ. ಆಕೆ ಕಲಾವಿದೆಯಾಗಿ ನನ್ನನ್ನು ಗುರುತಿಸಿದರು. ಕಲಾವಿದರು ಮತ್ತೊಬ್ಬ ಕಲಾವಿದನ ಪ್ರತಿಭೆಯನ್ನು ಗುರುತಿಸುವುದು ಬಹಳ ಪ್ರಮುಖವಾದುದು. ಅಂದು ಕಂಗನಾರ ಗುಣದ ಪರಿಚಯ ನನಗೆ ಆಯಿತು ಎಂದರು ಸಂಚಾರಿ ವಿಜಯ್.