Don't Miss!
- News Hubballi: ರಾಜ್ಯ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ: ನೇಹಾ ನಿವಾಸಕ್ಕೆ ಶ್ರೀಗಳು, ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ: ಪೊಲೀಸ್ ಅಭಯ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಮೀರ್ ಸರ್ ದಯವಿಟ್ಟು ಕ್ರಮ ತಗೊಳ್ಳಿ...,ಕೈಮುಗಿದು, ಕಣ್ಣೀರಿಟ್ಟ ನಟಿ ಸಂಜನಾ
ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಜೊತೆ ನಟಿ ಸಂಜನಾ ಕೊಲೊಂಬೊಗೆ ತೆರಳಿದ್ದು ಏಕೆ? ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಬಹಿರಂಗ ಆರೋಪ ಮಾಡಿದ್ದರು. ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಂಜನಾ, ಸಂಬರ್ಗಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
Recommended Video
ಕೊಲೊಂಬೊ ಹೋಗಿದ್ದ ವಿಚಾರವಾಗಿ ಮಾತನಾಡಿದ ಸಂಜನಾ, ಕಾರ್ಯಕ್ರಮದ ಹಿನ್ನೆಲೆ ಅತಿಥಿಯಾಗಿ ನಾನು ಹೋಗಿದ್ದೆ, ಜಮೀರ್ ಅಹ್ಮದ್ ಅವರ ಜೊತೆಯಲ್ಲಿ ಹೋಗಿದ್ದಲ್ಲಾ, ಜಮೀರ್ ಅಹ್ಮದ್ ಯಾರು ಎಂದು ಗೊತ್ತೇ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಡ್ರಗ್ ಪೆಡ್ಲರ್ ರಾಹುಲ್ ಜೊತೆ 'ದೇಶಭಕ್ತ' ಪ್ರಶಾಂತ್ ಸಂಬರ್ಗಿ ಫೋಟೋ!
ಈ ವೇಳೆ ಕಣ್ಣೀರು ಹಾಕಿದ ಸಂಜನಾ, ಸಂಗರ್ಬಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸಹ ನಿರ್ಧರಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಮುಂದೆ ಓದಿ...
ಜಮೀರ್ ಯಾರು ಎಂದೇ ಗೊತ್ತೆ ಇರಲಿಲ್ಲ
ಜಮೀರ್ ಅಹ್ಮದ್ ಖಾನ್ ಮತ್ತು ಸಂಜನಾ ಒಂದೇ ದಿನ ಕೊಲೊಂಬೊಗೆ ಏಕೆ ಹೋಗಿದ್ದರು ಎಂದು ಪ್ರಶಾಂತ್ ಸಂಬರ್ಗಿ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಜನಾ ''ಆ ಕಾರ್ಯಕ್ರಮಕ್ಕೆ ನಾನು ಅತಿಥಿಯಾಗಿ ಹೋಗಿದ್ದೆ, ಬಹಳ ಜನ ಕಲಾವಿದರು ಅಲ್ಲಿ ಹೋಗಿದ್ದಾರೆ. ನನಗೆ ಜಮೀರ್ ಅಹ್ಮದ್ ಯಾರು ಎಂದು ಗೊತ್ತೇ ಇರಲಿಲ್ಲ. ಅವರು ದೊಡ್ಡ ಶಾಸಕರು. ಬರಿ ಪ್ರಚಾರಕ್ಕೆ ನನ್ನನ್ನು ಟಾರ್ಗೆಟ್ ಮಾಡ್ತಿದ್ದಾನೆ'' ಎಂದು ವಾಗ್ದಾಳಿ ನಡೆಸಿದರು.
ನಾನು ಸತ್ತೋದ್ರು ಸುಮ್ಮನೆ ಬಿಡಲ್ಲ
'ಪ್ರಶಾಂತ್ ಸಂಬರ್ಗಿ ಸುಮ್ಮನೆ ಆರೋಪ ಮಾಡ್ತಿದ್ದಾನೆ. ನಮ್ಮ ತಾಯಿಗೆ ಆರೋಗ್ಯ ಸರಿಯಲ್ಲ, ಮಾನಸಿಕವಾಗಿ ಹಿಂಸೆ ಆಗ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ ನಟಿ ಸಂಜನಾ, ''ಒಂದು ವೇಳೆ ನಮ್ಮ ತಾಯಿಗೆ ಏನಾದರೂ ಹೆಚ್ಚು-ಕಡಿಮೆ ಆದ್ರೆ, ನಾನು ಸತ್ತರೂ ಅವನನ್ನು ಬಿಡಲ್ಲ'' ಎಂದಿದ್ದಾರೆ.
ಸುಶಾಂತ್ ಸಿಂಗ್ ರೀತಿ ನೇಣು ಹಾಕಿಕೊಂಡು ಸಾಯಬೇಕಾ? ಸಂಜನಾ ಗರಂ
ಕೈಮುಗಿದು, ಕಣ್ಣೀರಿಟ್ಟ ನಟಿ ಸಂಜನಾ
ನಿರಂತರ ಆರೋಪಗಳು ಮಾಡುತ್ತಿರುವ 'ಪ್ರಶಾಂತ್ ಸಂಬರ್ಗಿ ವಿಚಾರದಲ್ಲಿ ಕ್ರಮ ತಗೊಳ್ಳಿ ಜಮೀರ್ ಸರ್' ಎಂದು ವಿನಂತಿಸಿದ ಸಂಜನಾ ಕಣ್ಣೀರಿಟ್ಟರು. 'ಬೀದಿ ನಾಯಿ, ಅವನು ಯಾರೂ ಅಂತ ನನಗೆ ಗೊತ್ತಿಲ್ಲ, ನನ್ನ ಹಿಂದೆ ಏಕೆ ಬಿದ್ದಿದ್ದಾನೆ. ನಾನೊಬ್ಬ ಸೆಲೆಬ್ರಿಟಿ ಆಗಿರೋದೆ ದೊಡ್ಡ ತಪ್ಪಾ? ಎಂದು ಸಂಜನಾ ಭಾವುಕರಾದರು.
ನಾನು ಚಿಯರ್ ಗರ್ಲ್ ಅಲ್ಲ
ಸಿನಿಮಾ ಮಾಡುವುದಕ್ಕೆ ಮುಂಚೆ ಸಂಜನಾ ಚಿಯರ್ ಗರ್ಲ್ ಆಗಿದ್ದರು, 300 ರೂಪಾಯಿಗೆ ಕೆಲಸ ಮಾಡಿದ್ದರು ಎಂದು ಪ್ರಶಾಂತ್ ಸಂಬರ್ಗಿ ಟೀಕಿಸಿದ್ದರು. ಈ ಕುರಿತು ಪ್ರತಿಕ್ರಿಯೆ ಮಾಡಿದ ಸಂಜನಾ ''ನಾನು ಚಿಯರ್ ಗರ್ಲ್ ಅಲ್ಲ, ನಾನು 500 ರೂಪಾಯಿಗೆ ಮಾಡಲಿಂಗ್ ಮಾಡಿದ್ದೇನೆ, ಈಗಿನ ಕಾಲಕ್ಕೆ ಅದು 5000 ರೂಪಾಯಿ ಬೆಲೆ'' ಎಂದು ತಿರುಗೇಟು ನೀಡಿದ್ದಾರೆ.