Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಯಾಂಡಲ್ವುಡ್ ನಿಂತಿರುವುದೇ ಡ್ರಗ್ಸ್ ಮತ್ತು ಜೂಜಿನ ಹಣದ ಮೇಲೆ: ಪ್ರಶಾಂತ್ ಸಂಬರ್ಗಿ
ನಟಿ ರಾಗಿಣಿ, ಸಂಜನಾ ಗಲ್ರಾನಿ, ಶಾಸಕ ಜಮೀರ್ ವಿರುದ್ಧ ಮಾದಕ ವಸ್ತು ಪ್ರಕರಣದಲ್ಲಿ ಆರೋಪಗಳನ್ನು ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಇದೀಗ ಇಡೀಯ ಸಿನಿಮಾ ರಂಗದ ವಿರುದ್ಧವೇ ಆರೋಪ ಮಾಡಿದ್ದಾರೆ.
ಕನ್ನಡ ಸಿನಿಮಾ ರಂಗ ಪಾಪದ ಹಣದ ಮೇಲೆ ತೇಲುತ್ತಿದೆ ಎಂದು ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಒಬ್ಬ ನಿರ್ಮಾಪಕನ ಮೇಲೆ ತೀವ್ರ ಆರೋಪಗಳನ್ನು ಪ್ರಶಾಂತ್ ಮಾಡಿದ್ದಾರೆ.
ಕನ್ನಡದ ಸಿನಿಮಾದ ರಂಗದ ಮೇಲೆ ಡ್ರಗ್ಸ್, ಜೂಜಿನ ಹಣ ಹೂಡಿಕೆಯಾಗಿದೆ. ಇದಕ್ಕೆಲ್ಲಾ ಒಬ್ಬ ನಿರ್ಮಾಪಕ, ಒಬ್ಬ ಶಾಸಕ ಕಾರಣ ಎಂದು ಆರೋಪ ಮಾಡಿದ್ದಾರೆ ಪ್ರಶಾಂತ್ ಸಂಬರ್ಗಿ. ಆದರೆ ಆ ನಿರ್ಮಾಪಕನ ಹೆಸರು ಹೇಳಿಲ್ಲ ಸಂಬರ್ಗಿ.
ನಿರ್ಮಾಪಕನೋರ್ವನ ಮೇಲೆ ಆರೋಪ
ಕನ್ನಡ ಸಿನಿಮಾರಂಗದ ಪ್ರತಿಷ್ಠಿತ ನಿರ್ಮಾಪಕನೋರ್ವ ಪ್ರತಿ ವಾರಾಂತ್ಯಕ್ಕೆ ಶ್ರೀಲಂಕಾದ ಕ್ಯಾಸಿನೋಕ್ಕೆ ಹೋಗುತ್ತಾನೆ. ಚಿತ್ರನಟರನ್ನೂ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಅನೇಕ ಚಿತ್ರನಟ-ನಟಿಯರು ಹಣ ಕಳೆದುಕೊಂಡಿದ್ದಾರೆ ಎಂದಿದ್ದಾರೆ ಪ್ರಶಾಂತ್.
'ನಿರ್ಮಾಪಕನಿಂದಲೇ ಡ್ರಗ್ಸ್, ಜೂಜಿನ ಹಣ ಹರಿದು ಬರುತ್ತಿದೆ'
ಆತನಿಂದಲೇ ಡ್ರಗ್ಸ್, ಜೂಜಿನ ಹಣ ಕನ್ನಡ ಸಿನಿಮಾರಂಗದಲ್ಲಿ ಹೂಡಿಕೆ ಆಗುತ್ತಿದೆ. ಶಾಸಕ ಜಮೀರ್ ಅಹ್ಮದ್ಗೆ ಸಹ ಆತನೊಂದಿಗೆ ನಂಟಿದೆ. ಜಮೀರ್ ಅಹ್ಮದ್ ಹಾಗೂ ನಟಿ ಸಂಜನಾ ಜುಲೈ ನಲ್ಲಿ ಶ್ರೀಲಂಕಾದ ಆ ಕಸಿನೋಗೆ ಹೋಗಿದ್ದರು ಎಂದು ಆರೋಪಿಸಿದ್ದಾರೆ ಪ್ರಶಾಂತ್ ಸಂಬರ್ಗಿ.
'ಬಾಲಿವುಡ್-ಸ್ಯಾಂಡಲ್ವುಡ್ ಎರಡರಲ್ಲೂ ಡ್ರಗ್ಸ್ ಜಾಲವಿದೆ'
ಬಾಲಿವುಡ್ ಹಾಗೂ ಸ್ಯಾಂಡಲ್ವುಡ್ ಎರಡರಲ್ಲೂ ಡ್ರಗ್ಸ್ ಜಾಲ ಇದೆ. ಎರಡೂ ಸಹ 'ಪರಸ್ಪರ ಸಹಕಾರ'ದೊಂದಿಗೆ ಮಾದಕ ಮಾಫಿಯಾದಲ್ಲಿ ತೊಡಗಿವೆ. ಬಾಲಿವುಡ್ ಸ್ಟಾರ್ ನಟನ ಹೆಂಡತಿಯ ತಮ್ಮ ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಮಾಫಿಯಾ ನಡೆಸುತ್ತಾನೆ ಎಂದು ಆರೋಪಿಸಿದ್ದಾರೆ ಪ್ರಶಾಂತ್.
ಇಮ್ತಿಯಾಜ್ ಖತ್ರಿ ನಿರ್ಮಾಪಕನೊಂದಿಗೆ ಜಮೀರ್ ನಂಟು
ಇಮ್ತಿಯಾಜ್ ಖತ್ರಿ ಎಂಬ ಬಾಲಿವುಡ್ನ ನಿರ್ಮಾಪಕ ಡ್ರಗ್ಸ್ ಪ್ರಕರಣದಲ್ಲಿ ಈ ಹಿಂದೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಆತನನ್ನು ಸ್ಯಾಂಡಲ್ವುಡ್ನ ಹಲವಾರು ಕಾರ್ಯಕ್ರಮಗಳಿಗೆ ಕರೆಯಲಾಗುತ್ತದೆ. ಆತನೇ ಜಮೀರ್ ಹುಟ್ಟುಹಬ್ಬಕ್ಕೆ ಬಾಲಿವುಡ್ ಸ್ಟಾರ್ಗಳನ್ನು ಮುಂಬೈನಿಂದ ಕರೆಸುತ್ತಾನೆ ಎಂದಿದ್ದಾರೆ ಪ್ರಶಾಂತ್.
Recommended Video
ಜಮೀರ್ಗೂ ಶ್ರೀಲಂಕಾ ಕ್ಯಸಿನೋ ಮಾಲೀಕನಿಗೆ ನಂಟೇನು?
ಕನಿಷ್ಟ 50 ಸಿನಿಮಾಗಳಲ್ಲಿ 'ಜಮೀರ್ ಅಹ್ಮದ್ ಅರ್ಪಿಸುವ' ಎಂದು ಟೈಟಲ್ ಕಾರ್ಡ್ನಲ್ಲಿರುತ್ತದೆ. ಹಾಗಿದ್ದ ಮೇಲೆ ಜಮೀರ್ ಎಷ್ಟು ಸಿನಿಮಾಗಳಿಗೆ ಹಣ ಹೂಡಿದ್ದಾರೆ ಹೇಳಲಿ. ಹೂಡಿರುವ ಹಣ ಎಲ್ಲಿಂದ ಬಂದಿದ್ದು, ಶ್ರೀಲಂಕಾದ ಕ್ಯಸಿನೋ ಮಾಲೀಕನೊಂದಿಗೆ ಜಮೀರ್ಗೆ ಇರುವ ನಂಟೇನು ಎಂದು ಪ್ರಶ್ನಿಸಿದ್ದಾರೆ ಪ್ರಶಾಂತ್.