Don't Miss!
- News ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣ: ಸಿದ್ದರಾಮಯ್ಯ ಸರ್ಕಾರವೇ ನೇರ ಹೊಣೆ ಎಂದ ಬಿಜೆಪಿ ಶಾಸಕ
- Lifestyle ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಫಿ ಕಿಂಗ್ ಸಿದ್ಧಾರ್ಥ ನಿಧನಕ್ಕೆ ಕಂಬನಿ ಮಿಡಿದ ಸ್ಯಾಂಡಲ್ ವುಡ್ ಸ್ಟಾರ್ಸ್
Recommended Video
ಖ್ಯಾತ ಉದ್ಯಮಿ, ಮಲೆನಾಡಿನ ಹೆಮ್ಮೆಯ ಪುತ್ರ, ಕಾಫಿ ಕಿಂಗ್ ಹೀಗೆ ನಾನಾಹೆಸರುಗಳಿಂದ ಬಣ್ಣಿಸಲ್ಪಡುವ ಕಾಫಿ ದೊರೆ ಸಿದ್ಧಾರ್ಥ ಹೆಗ್ಡೆ ಇನ್ನು ನೆನಪು ಮಾತ್ರ. ಯಶಸ್ವಿ ಉದ್ಯಮಿಯೊಬ್ಬರ ದುರಂತ ಸಾವಿಗೆ ಇಡೀ ಕರುನಾಡೆ ದುಃಖತಪ್ತವಾಗಿದೆ. ಸಾವಿರಾರು ಮಂದಿಗೆ ಉದ್ಯೋಗ ನೀಡಿ ಅನೇಕ ಯುವಕರ ಪಾಲಿಗೆ ದಾರಿದೀಪವಾಗಿದ್ದ ಸಿದ್ಧಾರ್ಥ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
ಸಿದ್ಧಾರ್ಥ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ರಾಜಕೀಯ ಗಣ್ಯರು, ಉದ್ಯಮಿಗಳ ಜೊತೆಗೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿದ್ದಾರೆ. ಚಿತ್ರರಂಗದ ಅನೇಕರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದ ಸಿದ್ಧಾರ್ಥ ಎಲ್ಲಿಯು ಪ್ರಚಾರ ಬಯಸಿದವರಲ್ಲ.
ಅದೆಷ್ಟೋ ಸಿನಿಮಾ ಕಥೆಗಳಿಗೆ ಜೀವ ಸಿಕ್ಕಿದ್ದು ಇದೇ 'ಕೆಫೆ ಕಾಫಿ ಡೇ'ನಲ್ಲಿ.!
ಸಿದ್ಧಾರ್ಥ ಅವರ ಕೆಫೆ ಕಾಫಿ ಡೇಗೂ ಚಿತ್ರರಂಗಕ್ಕೂ ಒಂದು ಸಂಬಂಧವಿದೆ. ಚಿತ್ರರಂಗದ ಅನೇಕ ಗಣ್ಯರು ಇಲ್ಲಿ ಕೇವಲ ಕಾಫಿ ಮಾತ್ರ ಸವಿಯುತ್ತಿರಲಿಲ್ಲ. ಅದೆಷ್ಟೊ ಸಿನಿಮಾಗಳು ಹುಟ್ಟಿಗೆ ಕಾರಣವಾಗಿ ಕಾಫಿ ಡೇ. ಅದೆಷ್ಟೊ ಸಿನಿಮಾ ಕಥೆಗಳ ಮಾತುಕಥೆಗೆ ಕೆಫೆ ಕಾಫಿ ಡೇ ಅಡ್ಡವಾಗಿತ್ತು ಎನ್ನುವುದು ನಿಜ. ಆದ್ರಿವತ್ತು ಕೆಫೆ ಕಾಫಿ ಡೇ ಮಾಲಿಕ ದುರಂತವಾಗಿ ಅಂತ್ಯ ಕಂಡಿದ್ದಾರೆ. ನಾಡಿನ ಹೆಮ್ಮೆಯ ಪುತ್ರನ ನಿಧನಕ್ಕೆ ಸ್ಯಾಂಡಲ್ ವುಡ್ ಕೂಡ ಕಂಬನಿ ಮಿಡಿದಿದೆ.
ತೀವ್ರ ದುಃಖಿತನಾಗಿದ್ದೀನಿ: ಪುನೀತ್ ರಾಜ್ ಕುಮಾರ್
ಸಿದ್ಧಾರ್ಥ ನಿಧನಕ್ಕೆ ಪುನೀತ್ ರಾಜ್ ಕುಮಾರ್ ಸಂತಾಪ ಸೂಚಿಸಿದ್ದಾರೆ. "ವಿ ಜಿ ಸಿದ್ಧಾರ್ಥ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖಿತನಾಗಿದ್ದೀನಿ. ನಮ್ಮ ಕಾಲದ ಮಹಾನ್ ಕ್ರಿಯಾತ್ಮಕ ಉದ್ಯಮಿ. ಕಾಫಿಯಿಂದ ಅನೇಕರಿಗೆ ಹೇಗೆ ಉದ್ಯೋಗಾವಕಾಶ ನೀಡಬಹುದು ಎನ್ನುವುದನ್ನು ತೋರಿಸಿಕೊಟ್ಟವರು. ಉದ್ಯಮಿಯಾಗಿ ಅವರ ಪಯಣ ಮತ್ತು ಚಾರಿಟಿಗಳಿಗಾಗಿ ಅವರು ಮಾಡಿದ ಕೆಲಸ ಯಾವಾಗಲು ನೆನಪಿನಲ್ಲಿ ಉಳಿಯುತ್ತೆ. ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಪುನೀತ್ ಟ್ವೀಟ್ ಮಾಡಿದ್ದಾರೆ.
ಸಿದ್ದಾರ್ಥ್ ನಿಧನಕ್ಕೆ ನಟಿ, ಸಂಸದೆ ಸುಮಲತಾ ಸಂತಾಪ
ಚುನಾವಣೆಗೆ ನಿಂತಾಗ ಸಹಾಯ ಮಾಡಿದವರು: ಜಗ್ಗೇಶ್
"ನನ್ನ ಗುರುಗಳು ಎಸ್ ಎಂ ಕೃಷ್ಣ ರವರಿಂದ ಪರಿಚಯವಾದ ಮಹೋದಯ. ನಾನು 2004 ಚುನಾವಣೆಗೆ ಸ್ಪರ್ಧಿಸಿದಾಗ ನನ್ನ ಹುಡುಕಿ ಬಂದು ಚುನಾವಣೆಗೆ ಸಹಾಯ ಮಾಡಿ ಹೋದರು. ಅನೇಕಬಾರಿ ದೂರವಾಣಿ ಕರೆ ಮಾಡಿ ನನ್ನ ವಿನಂತಿಗೆ, ನನ್ನ ಅನೇಕ ಹಿಂಬಾಲಕರಿಗೆ #coffeeday ಲಿ ಕೆಲಸಕೂಟ್ಟವರು. ನನ್ನ ಗುರುಗಳು ಎಸ್ ಎಂ ಕೃಷ್ಣ ಮತ್ತು ಅವರ ಕುಟುಂಬಕ್ಕೆ ಈ ನೋವು ಅರಗಿಸುವ ಶಕ್ತಿ ರಾಯರು ನೀಡಲಿ.. ಓಂ ಶಾಂತಿ" ಎಂದು ಹಿರಿಯ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಈ ರೀತಿ ಮನಸ್ಸು ಮಾಡಬಾರದಿತ್ತು: ಉಪೇಂದ್ರ
"ನಿಮ್ಮ ಕನಸನ್ನು ನನಸು ಮಾಡಿ ಆ ಸುಂದರ ಸೂರಿನಡಿ ಲಕ್ಷಾಂತರ ಯುವಕ ಯುವತಿಯರು ಕನಸು ಕಾಣುವಂತೆ ಮಾಡಿದ ಶ್ರೇಷ್ಠ ಉದ್ಯಮಿ ಸಿದ್ದಾರ್ಥ. ಬುದ್ದನಾಗುವ ಮುಂಚೆ ಈ ರೀತಿ ಮನಸ್ಸು ಮಾಡಬಾರದಿತ್ತು. ನಮ್ಮ ಕರುನಾಡಿನ ಕಾಫಿಯನ್ನು ಪ್ರಪಂಚದ ಮೂಲೆ ಮೂಲೆಗೂ ತಲುಪಿಸಿದ ಒಡೆಯನ ಆತ್ಮಕ್ಕೆ ಶಾಂತಿ ಸಿಗಲಿ. ಮತ್ತೆ ಹುಟ್ಟಿ ಬನ್ನಿ #CCDFounder" ಎಂದು ಉಪೇಂದ್ರ ಸಿದ್ಧಾರ್ಥ್ ಅವರ ಬಗ್ಗೆ ಹೇಳಿದ್ದಾರೆ.
ಕಾಫಿ ದೊರೆ ಸಿದ್ದಾರ್ಥ್ ಸಾವು : ಸುದ್ದಿ ಕೇಳಿ ಆಘಾತಗೊಂಡ ರಾಗಿಣಿ
ಎಂದೆಂದಿಗೂ ಸಿದ್ಧಾರ್ಥ್ ಜೀವಂತ- ರಘುರಾಮ್
"ಸಾವಿರಾರು ಕುಟುಂಬಕ್ಕೆ ಜೀವನ ಕಟ್ಟಿ ಕೊಟ್ಟ ಧೀಮಂತ. ಅವರು ಅನ್ನ ಕೊಟ್ಟ ಪ್ರತಿ ಸಂಸಾರದಲ್ಲೂ ಎಂದೆಂದಿಗೂ ಸಿದ್ದಾರ್ಥ್ ಸರ್ ಜೀವಂತ. #MissuSidharathSir A Lot Can Happen Over A Coffe"