Don't Miss!
- News Lok Sabha Election 2024: ಈ 6 ಜಿಲ್ಲೆಗಳಲ್ಲಿ 0% ಮತದಾನ-ಎಲ್ಲಿ ಹಾಗೂ ಕಾರಣ ಏನು?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸದಾಗಿ ಕೊಡಗು ಕಟ್ಟಲು ಒಂದಾಯ್ತು ಸ್ಯಾಂಡಲ್ ವುಡ್
Recommended Video
ಕರ್ನಾಟಕ ಚಲನಚಿತ್ರ ಕಪ್ ಎರಡನೇ ಅವತರಣಿಕೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಳೆದ ಹದಿನೈದು ದಿನಗಳಿಂದ ಕನ್ನಡ ಸಿನಿಮಾ ಕಲಾವಿದರು ಮೈದಾನಕ್ಕಿಳಿದು ತರಬೇತಿ ಆರಂಭ ಮಾಡಿದ್ದಾರೆ. ಚಿತ್ರೀಕರಣದಲ್ಲಿ ಸದಾ ಬ್ಯುಸಿ ಆಗಿರುವ ಸ್ಟಾರ್ ಗಳು ಕರ್ನಾಟಕ ಚಲನಚಿತ್ರ ಕಪ್ ಗಾಗಿಯೇ ಬಿಡುವು ಮಾಡಿಕೊಂಡು ಕ್ರಿಕೆಟ್ ಆಡಲು ಸಿದ್ದರಾಗಿದ್ದಾರೆ.
ವಿಶೇಷ ಎಂದರೆ ಈ ಬಾರಿ ಕಲಾವಿದರೆಲ್ಲರೂ ಬಿಡುವು ಮಾಡಿಕೊಂಡಿರುವುದು ಒಂದು ಒಳ್ಳೆ ಕೆಲಸಕ್ಕಾಗಿ. ಹೌದು ಕರ್ನಾಟಕ ಚಲನಚಿತ್ರ ಕಪ್ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಸೆಪ್ಟೆಂಬರ್ 8-9 ರಂದು ನಡೆಯಲಿರುವ ಕ್ರಿಕೆಟ್ ಪಂದ್ಯವನ್ನು ಅಭಿಮಾನಿಗಳು ಸಾಮಾನ್ಯ ಜನರು ಯಾರು ಬೇಕಾದರೂ ವೀಕ್ಷಣೆ ಮಾಡಬಹುದು.
ಸುದೀಪ್ ಜೊತೆ ಕ್ರಿಕೆಟ್ ಅಭ್ಯಾಸ ಮಾಡಿದ ಸ್ಯಾಂಡಲ್ ವುಡ್ ಸ್ಟಾರ್
ಎರಡು ದಿನ ನಡೆಯಲಿರುವ ಕ್ರಿಕೆಟ್ ನೋಡಲು ಟಿಕೆಟ್ ಮಾಡಲಾಗಿದ್ದು 50 ರೂಪಾಯಿ ಶುಲ್ಕ ನಿಗದಿ ಆಗಿದೆ. 50 ರೂಪಾಯಿ ಕೊಟ್ಟು ಟಿಕೆಟ್ ಕೊಂಡರೆ ಎರಡು ದಿನಗಳು ಸ್ಟಾರ್ ಗಳ ಆಟವನ್ನು ನೋಡಬಹುದಾಗಿದೆ.
ಇನ್ನು ಟಿಕೆಟ್ ನಿಂದ ಬಂದ ಹಣವನ್ನು ಕೊಡಗು ಪ್ರವಾಹ ಪರಿಹಾರಕ್ಕಾಗಿ ನೀಡಲು ಕನ್ನಡ ಕಲಾವಿದರೆಲ್ಲರೂ ಸೇರಿ ನಿರ್ಧರಿಸಿದ್ದಾರೆ. ಹೆಚ್ಚು ಹೆಚ್ಚು ಅಭಿಮಾನಿಗಳು ಕ್ರಿಕೆಟ್ ನೋಡಲು ಹೋದರೆ ಹೆಚ್ಚು ಹಣ ಸಂಗ್ರಹವಾಗಲಿದೆ.