Don't Miss!
- News Namma Metro: 2023-24ರಲ್ಲಿ ಮೆಟ್ರೋ ವಾರ್ಷಿಕ ಆದಾಯದಲ್ಲಿ ಭಾರೀ ಏರಿಕೆ: ಖರ್ಚು-ಆದಾಯದ ಮಾಹಿತಿ?
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Sports IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಶತಕ; ರೋಹಿತ್, ಕೊಹ್ಲಿಗೆ ಕ್ರೆಡಿಟ್ ನೀಡಿದ ಯಶಸ್ವಿ ಜೈಸ್ವಾಲ್!
- Technology Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- Lifestyle ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಾಂಸ್ಕೃತಿಕ ನಗರಿ ಮೈಸೂರಿಗೆ ಬರ್ತಾವ್ರೆ ಸ್ಯಾಂಡಲ್ ವುಡ್ ದಿಗ್ಗಜರು: ಏನ್ ವಿಶೇಷ.?
ಮೈಸೂರು, ಜನವರಿ 19 : ಸಮಾಜ ಮತ್ತು ನಾಗರೀಕರ ರಕ್ಷಣೆ ಸೇವೆಯಲ್ಲಿ ತೊಡಗಿರುವ ಆರಕ್ಷಕರಿಗೆ ಗೌರವ ಸಮರ್ಪಿಸಲು ಸಾಂಸ್ಕೃತಿಕ ನಗರಿ ಮೈಸೂರಿಗೆ ಸ್ಯಾಂಡಲ್ ವುಡ್ ನ ಖ್ಯಾತ ಚಿತ್ರ ತಾರೆಯರು ಆಗಮಿಸುತ್ತಿದ್ದಾರೆ.
ಸದಾ ಕಾರ್ಯಭಾರದ ಒತ್ತಡದಲ್ಲಿರುವ ಪೊಲೀಸರು ಗೌರವ ಮತ್ತು ಅಭಿನಂದನೆಗಳಿಂದ ವಂಚಿತರಾದವರು. ಬಹುಶಃ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಆರಕ್ಷಕರಿಗೆ ರೋಟರಿ ಹೆರಿಟೇಜ್ ಮೈಸೂರು ವಿಶಿಷ್ಟ ಸಂಗೀತ ಕಾರ್ಯಕ್ರಮದ ಮೂಲಕ ಗೌರವ ಸಮರ್ಪಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಚಿತ್ರತಾರೆಯರು ಸ್ವಯಂಪ್ರೇರಿತರಾಗಿ ಅಭಿನಂದನೆ ಸಮರ್ಪಿಸಲು ಆಗಮಿಸುತ್ತಿರುವುದು ವಿಶೇಷ.
ರೋಟರಿ ಹೆರಿಟೇಜ್ ಮೈಸೂರು ಸ್ವರ ಸಾಗರ, ಮ್ಯೂಸಿಕ್ ಫೌಂಡೇಷನ್ ಸಹಯೋಗದಲ್ಲಿ ಜನವರಿ 20 ರಂದು ಸಂಜೆ 4.30ಕ್ಕೆ ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ 'ಸ್ವರಾಮೃತ-3' ಆರಕ್ಷಕರಿಗೆ ಗೌರವ ನಮನ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಮೈಸೂರು ನಗರದ ಪೊಲೀಸರ ಕರ್ತವ್ಯ ಪಾಲನೆಗೆ ಕೃತಜ್ಞತೆ ಮತ್ತು ಪ್ರಶಂಸೆ ವ್ಯಕ್ತಪಡಿಸುವ ಮನೋಜ್ಞ ಆಶಯದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಸೌಕರ್ಯವಿಲ್ಲದ ಯುವಜನರಿಗಾಗಿ ಡಿಜಿಟಲ್ ಗ್ರಂಥಾಲಯವುಳ್ಳ ಒಂದು ತರಬೇತಿ ಕೇಂದ್ರವನ್ನು ಸ್ಥಾಪಿಸುವ ಸುದುದ್ದೇಶವನ್ನೂ ಈ ಕಾರ್ಯಕ್ರಮ ಒಳಗೊಂಡಿರುವುದು ಗಮನಾರ್ಹ.
ಖ್ಯಾತ ಚಿತ್ರತಾರೆಯರ ರಂಗು: ಕನ್ನಡದ ನಾಯಕ ನಟರಾದ ವಿ.ರವಿಚಂದ್ರನ್, ದರ್ಶನ್ ತೂಗುದೀಪ್, ಯಶ್, ಸಂಗೀತ ನಿರ್ದೇಶಕರಾದ ಹಂಸಲೇಖ, ಅರ್ಜುನ್ ಜನ್ಯ, ಅನೂಪ್ ಸಿಳೀನ್, ಖ್ಯಾತ ಹಿನ್ನೆಲೆ ಗಾಯಕರಾದ ವಿಜಯ ಪಕಾಶ್, ಸಿನಿಮಾ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಒಳಗೊಂಡಂತೆ ಇತರೆ ಸಿನಿಮಾ ತಾರೆಗಳು ಪೊಲೀಸರಿಗೆ ಗೌರವ ಸಮರ್ಪಿಸಲು ಆಗಮಿಸುತ್ತಿದ್ದಾರೆ.
ಇವರೊಟ್ಟಿಗೆ ಮೈಸೂರಿನ ಗಾಯಕರಾದ ಶುಭಾ ರಾಘವೇಂದ್ರ, ಶ್ರೀ ಹರ್ಷ, ಶ್ರೇಯ ಭಟ್, ರಕ್ಷಿತಾ ಸುರೇಶ್, ವಸುಧಾ ಶಾಸ್ತ್ರಿ, ಸರಿಗಮಪ ಖ್ಯಾತಿಯ ತನುಶ್ರೀ, ಬೆಂಗಳೂರಿನ ಅರವಿಂದ್ ಸುಮಧುರ ಹಾಡುಗಳ ಮೂಲಕ ಪೊಲೀಸರು ಮತ್ತು ಅವರ ಕುಟುಂಬದವರನ್ನು ರಂಜಿಸಲಿದ್ದಾರೆ.