Don't Miss!
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೆಲುಗು ಸ್ಟಾರ್ ನಟನ ಪತ್ನಿ ವಿರುದ್ಧ ಇಂತಹ ಆರೋಪ.! ಇದು ನಿಜನಾ.?
Recommended Video
ತೆಲುಗು ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸುತ್ತಿರುವ ನಟಿಯರು ದೊಡ್ಡ ದೊಡ್ಡ ನಟರ ಬಗ್ಗೆ ಭಯಾನಕ ಸಂಗತಿಗಳನ್ನ ಬಿಚ್ಚಿಡುತ್ತಿದ್ದಾರೆ. ಇಂಡಸ್ಟ್ರಿಯಲ್ಲಿ ಯುವತಿಯರ ಮೇಲೆ ಇಷ್ಟೆಲ್ಲಾ ಅತ್ಯಾಚಾರ, ದೌರ್ಜನ್ಯ ನಡೆಯುತ್ತಿದೆ. ಇದಕ್ಕೆ ದೊಡ್ಡ ಕುಟುಂಬಗಳು ಎನಿಸಿಕೊಂಡಿರವವರೇ ಬೆನ್ನಿಗೆ ನಿಂತಿರೋದೂ ನಿಜಕ್ಕೂ ದುರಂತ ಎಂಬ ಮಾತುಗಳು ಕೇಳಿ ಬರುತ್ತಿದೆ.
ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಯುವತಿಯರಿಗೆ ವಂಚನೆ ಮಾಡಲಾಗ್ತಿದೆ ಎಂಬ ಗಂಭೀರ ಆರೋಪದ ಬೆನ್ನಲ್ಲೆ ಇದೀಗ, ತೆಲುಗು ಖ್ಯಾತ ನಟನ ಪತ್ನಿ ಮೇಲೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
'ಕಾಸ್ಟಿಂಗ್ ಕೌಚ್' ವಿಚಾರದಲ್ಲಿ ಚಿರಂಜೀವಿಗೆ ಎಚ್ಚರಿಕೆ ನೀಡಿದ ಶ್ರೀರೆಡ್ಡಿ
ಹೌದು, ಸಮಾಜದಲ್ಲಿ ಉತ್ತಮರು ಎಂದು ಮುಖವಾಡ ಹಾಕಿಕೊಂಡು, ಮಾಡುವುದೆಲ್ಲವೂ ಅನಾಚಾರವೇ ಎಂದು ಸ್ಟಾರ್ ನಟನ ಪತ್ನಿ ವಿರುದ್ಧ ಸೆನ್ಸೆಷ್ನಲ್ ಕಾಮೆಂಟ್ ಮಾಡಿದ್ದಾರೆ. ಅಷ್ಟಕ್ಕೂ, ಯಾರು ಆ ಸ್ಟಾರ್ ನಟ.? ಅವರ ಪತ್ನಿ ಬಗ್ಗೆ ಹರಿದಾಡುತ್ತಿರುವ ಸುದ್ದಿ ಏನು.?
ರಾಜಶೇಖರ್ ಪತ್ನಿ ಬಗ್ಗೆ ಶಾಕಿಂಗ್ ಹೇಳಿಕೆ
ತೆಲುಗಿನ ಖ್ಯಾತ ಹಾಗೂ ಹಿರಿಯ ನಟ ರಾಜಶೇಖರ್ ಹಾಗೂ ಅವರ ಪತ್ನಿ ಬಗ್ಗೆ ತೆಲುಗು ಯುವ ನಟಿಯರು ಭಯಾನಕ ಆರೋಪ ಮಾಡ್ತಿದ್ದಾರೆ. ಅದರಲ್ಲೂ, ತೆಲುಗಿನ ಮಹಿಳಾ ಕಾರ್ಯಕರ್ತೆ ಸಂಧ್ಯಾ ಅವರು ಬಹಿರಂಗವಾಗಿ ರಾಜಶೇಖರ್ ಪತ್ನಿ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಬೆಳಿಗ್ಗೆ 'ಅಮ್ಮ' ಅಂತಾರೆ, ರಾತ್ರಿ ಮಂಚಕ್ಕೆ ಕರೀತಾರೆ ಎಂದ ತೆಲುಗು ನಟಿ
ಗಂಡನಿಗೆ ಯುವತಿಯರನ್ನ ಸಪ್ಲೈ ಮಾಡ್ತಿದ್ದರಂತೆ.!
ನಟ ರಾಜಶೇಖರ್ ಅವರಿಗೆ ಯುವತಿಯರನ್ನ ಸಪ್ಲೈ ಮಾಡ್ತಿದ್ದರಂತೆ ಜೀವಿತಾ ರಾಜಶೇಖರ್ ಎಂಬ ವಿಷ್ಯವನ್ನ ಬಹಿರಂಗಪಡಿಸಿದ್ದಾರೆ. ನೊಂದ ಹೆಣ್ಣು ಮಕ್ಕಳ ಕಣ್ಣೀರು ವರೆಸುವ ಕಾರ್ಯಕ್ರಮವನ್ನ ನಿರೂಪಣೆ ಮಾಡುವ ಜೀವಿತಾ, ತಮ್ಮ ಪತಿಗೆ ಹುಡುಗಿಯರನ್ನ ಕಳುಹಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಜೀವಿತಾ
ಹಾಸ್ಟೆಲ್ ನಲ್ಲಿ ವಾಸವಾಗಿದ್ದ ಕೆಲವು ಹೆಣ್ಣು ಮಕ್ಕಳಿಗೆ ಹಣ ಹಾಗೂ ಅವಕಾಶದ ಆಮಿಷ ತೋರಿಸಿ ಅವರನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳಿದ್ದಾರೆ. ಇದಕ್ಕೆ ನಮ್ಮ ಬಳಿ ಸಾಕ್ಷಿ ಕೂಡ ಇದೆ. ಈ ಬಗ್ಗೆ ಯುವತಿಯೊಬ್ಬಳ ಪತ್ರಿಕೆಗೆ ಲೇಖನ ಬರೆದಿದ್ದರೂ, ಅದನ್ನ ಪ್ರಕಟಿಸುವ ಧೈರ್ಯ ಯಾರೂ ಮಾಡಿಲ್ಲ ಎಂದು ದೂರಿದ್ದಾರೆ.
ಮಂಗಳಮುಖಿ ಮೇಲೆಯೂ ಅತ್ಯಾಚಾರವೆಸಗಿದ್ದ ನಿರ್ಮಾಪಕನ ಮಗ.!
ಜೀವಿತಾ ಪ್ರತಿಕ್ರಿಯೆ ಏನಿರಬಹುದು.?
ನಟ ರಾಜಶೇಖರ್ ಹಾಗೂ ಜೀವಿತಾ ರಾಜಶೇಖರ್ ಅವರ ಬಗ್ಗೆ ಇಷ್ಟು ದೊಡ್ಡ ಮಟ್ಟದ ಆರೋಪ ಕೇಳಿ ಬಂದಿದ್ದು, ಈಗ ರಾಜಶೇಖರ್ ದಂಪತಿ ಈ ಬಗ್ಗೆ ಏನು ಹೇಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಮತ್ತಿಬ್ಬರ ಹೆಸರು ಲೀಕ್ ಮಾಡಿದ ಶ್ರೀರೆಡ್ಡಿ.! ಅವರದ್ದು ಅದೇ ಬುದ್ಧಿಯಂತೆ.!