Don't Miss!
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- News Bengaluru Rain: ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಜಿನುಗು ಮಳೆ.. ಮನೆಯಿಂದ ಹೊರಬಂದು ಕುಣಿದು ಕುಪ್ಪಳಿಸಿದ ಮಕ್ಕಳು
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸದ್ಯದಲ್ಲೇ ತೆರೆಗೆ ದರ್ಶನ್ 'ಸಂಗೊಳ್ಳಿ ರಾಯಣ್ಣ'
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರವು ಬರುವ ತಿಂಗಳು 12ರಂದು (ಅಕ್ಟೋಬರ್ 12, 2012) ತೆರೆಗೆ ಬರುವ ನಿರೀಕ್ಷೆಯಿದೆ. ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿ ನಿರ್ಮಾಣವಾದ ಈವರೆಗಿನ ಚಿತ್ರಗಳಲ್ಲೇ ಅತಿ ಹೆಚ್ಚು ಬಜೆಟ್ ಹೊಂದಿರುವ ಚಿತ್ರವಾಗಿದೆ. 'ಸಂಗೊಳ್ಳಿ ರಾಯಣ್ಣ' ಚಿತ್ರದ ಒಟ್ಟೂ ಬಜೆಟ್ ಕನ್ನಡದ ಮಟ್ಟಿಗೆ ಬರೋಬ್ಬರಿ ಎನ್ನಬಹುದಾದ 30 ಕೋಟಿ ರೂಪಾಯಿಗಳಿಗೂ ಹೆಚ್ಚು.
'ಸಂಗೊಳ್ಳಿ ರಾಯಣ್ಣ' ಚಿತ್ರದ ನಿರ್ಮಾಪಕರು ಆನಂದ್ ಅಪ್ಪುಗೋಳ್. ಸಂಗೊಳ್ಳಿ ರಾಯಣ್ಣ ಹುಟ್ಟಿದ ಬೆಳಗಾವಿ ಜಿಲ್ಲೆಯವರಾದ ನಿರ್ಮಾಪಕ ಆನಂದ ಅಪ್ಪುಗೋಳ್ ಈ ಚಿತ್ರವನ್ನು ನಿರ್ಮಾಣ ಮಾಡಲು ಪ್ರಮುಖ ಕಾರಣ, ಸಂಗೊಳ್ಳಿ ರಾಯಣ್ಣ ಮೇಲೆ ಆನಂದ್ ಅವರಿಗಿರುವ ಉತ್ಕಟ ಅಭಿಮಾನ. ರಾಯಣ್ಣರ ಮೇಲೆ ಚಿತ್ರ ಮಾಡುವುದೇ ಅವರ ಕನಸು ಹಾಗೂ ಗುರಿಯತಾಗಿತ್ತು. ಅದನ್ನವರು ಈಗ ನೆರವೇರಿಸಿಕೊಂಡಿದ್ದಾರೆ.
ಈ ಚಿತ್ರದ ನಿರ್ಮಾಣ ಕಾರ್ಯವನ್ನು ಮುಗಿಸಿ ಇದೀಗ ಬಿಡುಗಡೆಗೆ ಸಿದ್ಧರಾಗಿರುವ ಆನಂದ್ ಅಪ್ಪುಗೋಳ್ ಇತ್ತೀಚಿಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. "ಈ ಚಿತ್ರ ಗೆದ್ದರೂ ಸೋತರೂ ನಾನಂತೂ ತಲೆಕೆಡಿಸಿಕೊಳ್ಳಲಾರೆ. ಚಿತ್ರದಿಂದ ರು. 100 ಕೋಟಿ ಬಂದರೆ ನಾನು ಖುಷಿಯಾಗಲಾರೆ, ಗೋತಾ ಹೊಡೆದರೂ ಚಿಂತೆ ಮಾಡಲಾರೆ. ಚಿತ್ರ ನಿರ್ಮಿಸುವ ಏಕೈಕ ಕನಸಿತ್ತು, ನಿರ್ಮಿಸಿದ್ದೇನೆ" ಎಂದಿದ್ದಾರೆ.
ಮುಂದುವರಿದ ಆನಂದ್ ಅಪ್ಪುಗೋಳ್, "ಸಂಗೊಳ್ಳಿ ರಾಯಣ್ಣ ಚಿತ್ರವನ್ನು ಮಾಡಿ ಮುಗಿಸಿರುವ ಮೂಲಕ ನನ್ನ ಭಾರಿ ಕನಸು ಈಡೇರಿದೆ, ಅಷ್ಟು ನನಗೆ ಸಾಕು. ನಮ್ಮ ದೇಶದ ಯುವ ಜನತೆಗೆ ಇಂತಹ ಚಿತ್ರ ಸ್ಫೂರ್ತಿ ನೀಡಲಿ. ರಾಷ್ಟ್ರಕ್ಕೆ ಆಪತ್ತು ಎದುರಾದಾಗ, ಯುದ್ಧದಂತಹ ಸಂದರ್ಭದಲ್ಲಿ ದೇಶ ರಕ್ಷಣೆಗೆ ಸಂಗೊಳ್ಳಿ ರಾಯಣ್ಣರಂತೆ ಎಲ್ಲರೂ ಮುಂದಾಗಲಿ. ದೇಶಭಕ್ತಿ ಎಂಬುದು ಎಲ್ಲರ ನರನಾಡಿಗಳಲ್ಲಿ ಹರಿಯಲಿ" ಎಂದಿದ್ದಾರೆ ಆನಂದ್ ಅಪ್ಪುಗೋಳ್. ಮುಂದಿನ ಪುಟ ನೋಡಿ...