Don't Miss!
- News Mysore Candidate : ಮೈಸೂರಿನಲ್ಲಿ ಬಿಜೆಪಿಯಿಂದ ರಾಜವಂಶಸ್ಥ- ಕಾಂಗ್ರೆಸ್ ಲೆಕ್ಕಾಚಾರವೇನು?
- Lifestyle ಕೆಜಿಎಫ್ ಎಲ್ ಡೊರಾಡೊ ಕಥೆ ಕೇಳಿದ್ದೀರಾ? ಇದು ಸಮುದ್ರದಲ್ಲಿ ಮುಳುಗಿದ ಎಲ್ ಡೊರಾಡೊ ಹಡಗಿನ ಕಥೆ..!
- Finance ಬೆಂಗಳೂರಿನ ಮೇಘನಾ ಫುಡ್ಸ್ ಹೋಟೆಲ್ ಮಳಿಗೆಗಳ ಮೇಲೆ ಐಟಿ ದಾಳಿ
- Automobiles ಕಾಶ್ಮೀರ ಟು ಕನ್ಯಾಕುಮಾರಿ ಟ್ರಿಪ್ ಮುಗಿಸಿದ ಎಲೆಕ್ಟ್ರಿಕ್ ಸ್ಕೂಟರ್: ಗೇಮ್ ಚೇಂಜರ್ ಸದ್ಯದಲ್ಲೇ ಅಖಾಡಕ್
- Technology iPhone: ಐಫೋನ್ 16 ನಲ್ಲಿ ಆಪಲ್ನಿಂದ ನಿರೀಕ್ಷಿಸಬಹುದಾದ ದೊಡ್ಡ ನವೀಕರಣಗಳಿವು!ಇಷ್ಟ ಆಗದೇ ಇರದು
- Sports IPL 2024: RCB ಫ್ಯಾನ್ಸ್ ಕಂಡರೆ ಹೆಚ್ಚು ಹೆದರುತ್ತೇನೆ; ಅವೇಶ್ ಖಾನ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಂ.ಎಲ್.ಎ ಹ್ಯಾರಿಸ್ ಪರವಾಗಿ ಟ್ವೀಟ್ ಮಾಡಿದ ನಟಿ ಸಂಜನಾ.!
ಕಳೆದ ಮೂರ್ನಾಲ್ಕು ದಿನಗಳಿಂದ ಯಾವುದೇ ಸುದ್ದಿ ವಾಹಿನಿ ಹಾಕಿದ್ರೂ, ಅದರಲ್ಲಿ ಶಾಂತಿನಗರದ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಗೂಂಡಾಗಿರಿ ಬಗ್ಗೆಯೇ ಬ್ರೇಕಿಂಗ್ ನ್ಯೂಸ್ ಬರುತ್ತಿದೆ.
ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಇದೀಗ ಮೊಹಮ್ಮದ್ ನಲಪಾಡ್ ಜೈಲು ಪಾಲಾಗಿದ್ದಾರೆ. ಮೊಹಮ್ಮದ್ ನಲಪಾಡ್ ವರ್ತನೆ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಹೀಗಿರುವಾಗಲೇ, ಕನ್ನಡ ನಟಿ ಸಂಜನಾ ಗಲ್ರಾನಿ ಎಂ.ಎಲ್.ಎ ಹ್ಯಾರಿಸ್ ಪರವಾಗಿ ಟ್ವೀಟ್ ಒಂದನ್ನು ಮಾಡಿದ್ದಾರೆ.
My sympathies to #MohammedHarisNalapad ji,a very efficient leader is paying a price for no fault of his own but rather for his son ! #MLAHaris has been a very sincere leader for about 2 decades now,before we could witness this entire tamasha by #NalapadAttackOnVidvat !
— Sanjjjanaa galrani❤️ (@sanjjanagalrani) February 19, 2018
''ಎರಡು ದಶಕಗಳಿಂದ ಪ್ರಾಮಾಣಿಕ ಲೀಡರ್ ಆಗಿರುವ ಎಂ.ಎಲ್.ಎ ಹ್ಯಾರಿಸ್ ಇದೀಗ ತಮ್ಮ ತಪ್ಪಿಲ್ಲದೇ, ಪುತ್ರ ಎಸಗಿರುವ ಕೃತ್ಯದಿಂದ ಬೆಲೆ ತೆರಬೇಕಾಗಿ ಬಂದಿರುವುದಕ್ಕೆ ಅನುಕಂಪವಿದೆ'' ಎಂದು ಶಾಸಕ ಹ್ಯಾರಿಸ್ ಪರವಾಗಿ ನಟಿ ಸಂಜನಾ ಟ್ವೀಟ್ ಮಾಡಿದ್ದಾರೆ.
ನಿಮ್ಮ ಜನಪ್ರತಿನಿಧಿ: ಉದ್ಯಮಿ ನಲಪಾಡ್ ಅಹ್ಮದ್ ಹ್ಯಾರೀಸ್
#CongEmbarrassed so shocked to hea & witness the assault that has happened in #ubcity in the very constituency of congress mla #MohammedHarisNalapad i live ! May justice happen to the victim ! Law should be law for all the poor or specially the rich !
— Sanjjjanaa galrani❤️ (@sanjjanagalrani) February 19, 2018
ಜೊತೆಗೆ, ''ಯು.ಬಿ.ಸಿಟಿಯಲ್ಲಿ ನಡೆದ ಘಟನೆ ಕೇಳಿ ನಿಜಕ್ಕೂ ಶಾಕ್ ಆಗಿದೆ. ಹಲ್ಲೆಗೊಳಗಾದ ವಿದ್ವತ್ ಗೆ ನ್ಯಾಯ ಸಿಗಲಿ. ಬಡವರಾಗಲಿ, ಶ್ರೀಮಂತರಾಗಲಿ.. ಕಾನೂನು ಎಲ್ಲರಿಗೂ ಒಂದೇ ಆಗಿರಲಿ'' ಎಂದೂ ಕೂಡ ಸಂಜನಾ ಟ್ವೀಟ್ ಮಾಡಿದ್ದಾರೆ.
ಮೊಹಮ್ಮದ್ ನಲಪಾಡ್ ನಿಂದ ಹಲ್ಲೆಗೊಳಗಾದ ವಿದ್ವತ್ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದೆ.