Don't Miss!
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಧೀರ ಪಾತ್ರವನ್ನ ಸಂಜಯ್ ದತ್ ಯಾವುದಕ್ಕೆ ಹೋಲಿಸಿದ್ರು ಗೊತ್ತಾ?
Recommended Video
ಬಾಲಿವುಡ್ ಸೂಪರ್ ಸ್ಟಾರ್ ನಟ ಸಂಜಯ್ ದತ್ ಕೆಜಿಎಫ್ ಚಾಪ್ಟರ್-2 ಚಿತ್ರದಲ್ಲಿ ಅಧೀರನಾಗಿ ನಟಿಸುತ್ತಿದ್ದಾರೆ. ಈ ಮೂಲಕ ಕನ್ನಡಕ್ಕೆ ಅಧಿಕೃತವಾಗಿ ದತ್ ಪ್ರವೇಶವಾಗಿದೆ.
ಅಧೀರ ಪಾತ್ರ ಕೆಜಿಎಫ್ ಚಿತ್ರದ ಬಹುಮುಖ್ಯ ವಿಲನ್ ಪಾತ್ರ. ಮೊದಲ ಭಾಗದಲ್ಲಿ ಅಷ್ಟಾಗಿ ಪ್ರಾಮುಖ್ಯತೆ ಇಲ್ಲದ ಈ ಪಾತ್ರ ಸೆಕೆಂಡ್ ಚಾಪ್ಟರ್ ನಲ್ಲಿ ಕಥೆಗೆ ಪ್ರಧಾನವಾಗಿದೆ. ಅದಕ್ಕಾಗಿಯೇ ಸಂಜಯ್ ದತ್ ಎಂಬ ಅದ್ಭುತ ನಟನನ್ನ ಈ ಪಾತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.
'ಅಧೀರ' ಸಂಜಯ್ ದತ್ ಮುಖದ ಮೇಲಿನ ಟ್ಯಾಟೂ ಅರ್ಥ ಏನು ?
ಈಗಾಗಲೇ ಅಧೀರನ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಾಗಿದೆ. ಸಂಜಯ್ ದತ್ ಆಗಮನದಿಂದ ಕೆಜಿಎಫ್ ಚಿತ್ರವನ್ನ ಬಾಲಿವುಡ್ ಮಂದಿ ಸ್ವಲ್ಪ ಗಂಭೀರವಾಗಿ ಪರಿಗಣಿಸಿದ್ದಾರೆ.
ಇನ್ನು ಅಧೀರ ಪಾತ್ರದ ಬಗ್ಗೆ ಮಾತನಾಡಿದ ಸಂಜಯ್ ದತ್ ''ಈ ಪಾತ್ರವನ್ನ ಹಾಲಿವುಡ್ ಸೂಪರ್ ಹಿಟ್ ಸಿನಿಮಾ ಅವೆಂಜರ್ಸ್ ಸರಣಿಯಲ್ಲಿ ಬರುವ ಥಾನೋಸ್ ಗೆ ಹೋಲಿಸಿದ್ದಾರೆ. ಥಾನೋಸ್ ರೀತಿಯಾದ ಪಾತ್ರ ಅಧೀರ ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಿಸಿದ್ದಾರೆ.
'ಕೆಜಿಎಫ್-2' ಚಿತ್ರಕ್ಕಾಗಿ ಈ ಬಾಲಿವುಡ್ ನಟಿ ಬರೋದು ಖಚಿತ.!
''ಅಧೀರ ಪವರ್ ಫುಲ್ ಪಾತ್ರ. ನೀವು ಅವೇಂಜರ್ ಸಿನಿಮಾ ನೋಡಿದ್ದರೆ, ಅದರಲ್ಲಿ ಬರುವ ಥಾನೋಸ್ ಪಾತ್ರದಂತೆ ಇದು. ಬಹಳ ಭಯಂಕರ ಪಾತ್ರ ಮತ್ತು ಭಯಂಕರ ಗೆಟಪ್ ಅದು. ನಾನು ಕುತೂಹಲದಿಂದ ಕಾಯ್ತಿದ್ದೇನೆ'' ಎಂದು ಸಂಜಯ್ ದತ್ ಮಾಧ್ಯಮಗಳ ಜೊತೆ ಮಾತನಾಡುವಾಗ ಹೇಳಿದರು.
60ನೇ ವರ್ಷಕ್ಕೆ ಕಾಲಿಟ್ಟು ಸಂಜಯ್ ದತ್ ಈಗ ಕನ್ನಡಕ್ಕೆ ಬರ್ತಿದ್ದಾರೆ. ಯಶ್ ಅಭಿನಯದ ಈ ಚಿತ್ರವನ್ನ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಶ್ರೀನಿಧಿ ಶೆಟ್ಟಿ ನಾಯಕಿಯಾಗಿದ್ದು, ಪ್ರಮುಖ ಪಾತ್ರದಲ್ಲಿ ರವಿನಾ ಟಂಡನ್ ಕೂಡ ಬಣ್ಣ ಹಚ್ಚಿದ್ದಾರೆ. ಈಗಷ್ಟೇ ಚಿತ್ರೀಕರಣ ಆರಂಭಿಸಿರುವ ಕೆಜಿಎಫ್ 2, 2020ರಲ್ಲಿ ತೆರೆಗೆ ಬರಲಿದೆ.