Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬೆತ್ತಲೆ ಸೀನ್' ಬಗ್ಗೆ ನಿಜ ಬಾಯ್ಬಿಟ್ಟ ನಟಿ ಸಂಜನಾ.!
ನಟಿ ಸಂಜನಾ ರವರ ಬೆತ್ತಲೆ ಸೀನ್ ಸಾಕಷ್ಟು ಸದ್ದು ಮಾಡಿದೆ. '2' (ದಂಡುಪಾಳ್ಯ 2) ಸಿನಿಮಾದ ಒಂದು ದೃಶ್ಯದಲ್ಲಿ ಸಂಜನಾ ಸಂಪೂರ್ಣ ನಗ್ನವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕನ್ನಡದ ನಟಿ ಸಂಜನಾ ಬೆತ್ತಲೆ ಫೋಟೋ ಲೀಕ್..!
'2' ಚಿತ್ರದ 'ಬೆತ್ತಲೆ ದೃಶ್ಯ'ದ ಬಗ್ಗೆ ನಟಿ ಸಂಜನಾ ಮಾತನಾಡಿದ್ದಾರೆ. ಅವರು ಏನು ಹೇಳಿದ್ದಾರೆ ಅಂತ ತಿಳಿಯಲು ಫೋಟೋ ಸ್ಲೈಡ್ ಗಳಲ್ಲಿ ಓದಿರಿ...
ಸಂಜನಾ ಮಾತು
''ಚಿತ್ರದ ಪ್ರಮುಖ ದೃಶ್ಯಕ್ಕೆ ಸೆನ್ಸಾರ್ ಕತ್ತರಿ ಹಾಕಿದೆ. ಪೊಲೀಸ್ ಟಾರ್ಚರ್ ಸನ್ನಿವೇಶದಲ್ಲಿ ನಾನು ಒಬ್ಬ ಕಲಾವಿದೆಯಾಗಿ ನ್ಯಾಯ ಒದಗಿಸಿದ್ದ ಖುಷಿ ಇತ್ತು'' - ಸಂಜನಾ, ನಟಿ
ಬೇಸರ ತಂದಿದೆ
''ಆ ದೃಶ್ಯ ತೆರೆ ಮೇಲೆ ಬಂದಿದ್ದರೆ ನನ್ನ ಅಭಿನಯ ಪ್ರೇಕ್ಷಕರಿಗೆ ಗೊತ್ತಾಗುತಿತ್ತು. ಆದರೆ ಸೆನ್ಸಾರ್ ಆ ಸೀನ್ ಗೆ ಕತ್ತರಿ ಹಾಕಿದೆ. ಇದು ನನಗೆ ತೀವ್ರ ಬೇಸರ ತಂದಿದೆ'' - ಸಂಜನಾ, ನಟಿ
ಮತ್ತೆ ದೊಡ್ಡ ಎಡವಟ್ಟು ಮಾಡಿಕೊಂಡ ಸಂಜನಾ
ಅರೆಬರೆ ಬಟ್ಟೆ ತೊಟ್ಟಿದ್ದೆ
''ನಾನು ಪೊಲೀಸ್ ಟಾರ್ಚರ್ ಗೆ ಒಳಗಾಗುವಾಗ ಅರೆಬರೆ ಬಟ್ಟೆ ತೊಟ್ಟಿದ್ದು ನಿಜ. ಕಲಾವಿದರು ಪಾತ್ರಕ್ಕೆ ತಕ್ಕಂತೆ ಅಭಿನಯಿಸದಿದ್ದರೆ ಔಟ್ ಡೇಟೆಡ್ ಆಗಿಬಿಡುತ್ತೇವೆ'' - ಸಂಜನಾ, ನಟಿ
ಟಾಪ್ ಲೆಸ್ ಆಗಿಲ್ಲ
''ನಾನು ಚಿತ್ರದ ಆ ಸೀನ್ ನಲ್ಲಿ ಸಂಪೂರ್ಣ ಟಾಪ್ ಲೆಸ್ ಆಗಿರಲಿಲ್ಲ. ಬೆನ್ನಿನ ಭಾಗದಿಂದ ಸಂಪೂರ್ಣ ಬೆತ್ತಲಾಗಿದ್ದೆ ಅಷ್ಟೇ. ಆದರೆ ನಾನು ಮುಂಭಾಗ ಮುಚ್ಚಿಕೊಂಡಿದ್ದೆ. ನಂತರ ಸಿ.ಜಿ ವರ್ಕ್ ನಲ್ಲಿ ಬೆತ್ತಲಾಗಿಸುವ ಕೆಲಸ ನಡೆದಿದೆ'' - ಸಂಜನಾ, ನಟಿ
ಏನಿದು ವಿವಾದ..?
'2' (ದಂಡುಪಾಳ್ಯ 2) ಸಿನಿಮಾದ ಒಂದು ದೃಶ್ಯದಲ್ಲಿ ನಟಿ ಸಂಜನಾ ಬೆತ್ತಲಾಗಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಸೆನ್ಸಾರ್ ನಲ್ಲಿ ಕಟ್ ಮಾಡಿರುವ ಈ ದೃಶ್ಯ ಇದೀಗ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ.
ಸಿನಿಮಾದ ವಿವರ
'2' (ದಂಡುಪಾಳ್ಯ 2) ಸಿನಿಮಾವನ್ನು ನಿರ್ದೇಶಕ ಶ್ರೀನಿವಾಸ್ ರಾಜು ನಿರ್ದೇಶನ ಮಾಡಿದ್ದಾರೆ. ಪೂಜಾ ಗಾಂಧಿ, ರವಿಶಂಕರ್, ಶೃತಿ, ಮಕರಂದ್ ದೇಶಪಾಂಡೆ, ರವಿ ಕಾಳೆ ಚಿತ್ರದಲ್ಲಿ ನಟಿಸಿದ್ದಾರೆ. 'ದಂಡುಪಾಳ್ಯ' ಸಿನಿಮಾದ ಮೊದಲ ಭಾಗದಲ್ಲಿ ದಂಡುಪಾಳ್ಯ ಗ್ಯಾಂಗ್ ನ ಕ್ರೌರ್ಯತೆ ಕಂಡಿದ್ದ ಪ್ರೇಕ್ಷಕರಿಗೆ ಈ ಬಾರಿ ಅವರ ಇನ್ನೊಂದು ಮುಖ ದರ್ಶನವನ್ನು ಮಾಡಿಸುವ ಸಿನಿಮಾ ಇದಾಗಿದೆ. ಅಂದಹಾಗೆ, ಕಳೆದ ಶುಕ್ರವಾರ ರಿಲೀಸ್ ಆಗಿದ್ದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.