Don't Miss!
- Automobiles Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- News ಮಳೆ.. ಮಳೆ.. ಭರ್ಜರಿ ಮಳೆ.. ಬೇಸಿಗೆಯಲ್ಲೂ ಮಳೆ!
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Sports ಟಿ20 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡದ ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ಸಂಜು, ರಾಹುಲ್ಗೆ ಸ್ಥಾನವಿಲ್ಲ!
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಗ್ನ ದೃಶ್ಯದ ಬಗ್ಗೆ ಹೊಸ 'ಬಾಂಬ್' ಸಿಡಿಸಿದ ನಟಿ ಸಂಜನಾ
ಕಡೆಗೂ ಬೆತ್ತಲೆ ಸೀನ್ ವಿವಾದದ ಬಗ್ಗೆ ನಟಿ ಸಂಜನಾ ಮಾತನಾಡಿದ್ದಾರೆ. '2' (ದಂಡುಪಾಳ್ಯ 2) ಸಿನಿಮಾದಲ್ಲಿ ಸಂಜನಾ ನಗ್ನವಾಗಿ ಕಾಣಿಸಿಕೊಂಡಿದ್ದ ದೃಶ್ಯ ವೈರಲ್ ಆಗಿತ್ತು. ನಿನ್ನೆಯಿಂದ ಆ ವಿಡಿಯೋ ದೊಡ್ಡ ಸುದ್ದಿ ಮಾಡಿತ್ತು.
'ಬೆತ್ತಲೆ ಸೀನ್' ಬಗ್ಗೆ ನಿಜ ಬಾಯ್ಬಿಟ್ಟ ನಟಿ ಸಂಜನಾ.!
ಮೊದಲು ಈ ವಿವಾದದ ಬಗ್ಗೆ ಮಾತನಾಡುವುದಕ್ಕೆ ಹಿಂದೇಟು ಹಾಕಿದ್ದ ಸಂಜನಾ ಈಗ ಒಂದಷ್ಟು ಮಾಹಿತಿಯನ್ನು ಹೇಳಿದ್ದಾರೆ. ಬೆತ್ತಲೆ ಸೀನ್ ವಿವಾದ ಬಗ್ಗೆ ನಟಿ ಸಂಜನಾ ಆಡಿದ ಮಾತುಗಳು ಇಲ್ಲಿದೆ ಓದಿ...
ಸಂಜನಾ ಹೇಳಿಕೆ
''ನಾನು ಇಷ್ಟೇ ಹೇಳುವುದಕ್ಕೆ ಇಷ್ಟ ಪಡುತ್ತೇನೆ. ಸೆನ್ಸಾರ್ ಅವರಿಗೆ ನಾನು ಗೌರವ ಅರ್ಪಿಸುತ್ತೇನೆ. ಅವರು ಮಾಡುವುದು ಸಮಾಜದ ಒಳ್ಳೆಯದಕ್ಕೆ ಅಂತ ನನಗೆ ಗೊತ್ತು''- ಸಂಜನಾ, ನಟಿ
ಶೂಟ್ ಮಾಡಿದ್ದೇ ಬೇರೆ
''ಚಿತ್ರದಲ್ಲಿ ಶೂಟ್ ಮಾಡಿದ್ದೇ ಬೇರೆ. ಅದು ತೆರೆಗೆ ಬಂದಿದ್ದೇ ಬೇರೆ. ನಾನು ಶೂಟಿಂಗ್ ಮಾಡುವಾಗ ನೂರಾರೂ ಜನ ಅಲ್ಲಿ ಇದ್ದರು. ಟೆಕ್ನಿಕಲಿ ಆ ಸೀನ್ ನ ಹೇಗೆ ಬದಲಿಸಲಾಗಿದೆ ಎಂದು ನಾಳೆ ನಾನು ಹೇಳುತ್ತೇನೆ'' - ಸಂಜನಾ, ನಟಿ
ಕನ್ನಡದ ನಟಿ ಸಂಜನಾ ಬೆತ್ತಲೆ ಫೋಟೋ ಲೀಕ್..!
ಲಿಮಿಟ್ ಮೀರಿಲ್ಲ
''ನಾನು ನನ್ನ ಸಂಸ್ಕೃತಿ, ಪರಂಪರೆ ಹಾಗೂ ಕೆಲ ಪ್ರಿನ್ಸಿಪಲ್ ಇಟ್ಟುಕೊಂಡಿದ್ದೇನೆ. ಹೆಣ್ಣು ಮಕ್ಕಳೆಂದರೆ ಹೇಗೆ ಇರಬೇಕು ಅಂತ ಗೊತ್ತಿದೆ. ನನ್ನನ್ನು ನೂರಾರು ಜನ ಉದಾಹರಣೆಯಾಗಿ ನೋಡುತ್ತಾರೆ. ನಾನು ನನ್ನ ಲಿಮಿಟ್ ಮೀರಿ ಏನು ತಪ್ಪು ಮಾಡಿಲ್ಲ'' - ಸಂಜನಾ, ನಟಿ
ನಾಳೆ ಹೇಳುತ್ತೇನೆ
ಇಡೀ ವಿವಾದದ ಬಗ್ಗೆ ಸಂಜನಾ ನಾಳೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತೇನೆ ಅಂತ ಹೇಳಿದ್ದಾರೆ. ನಾಳೆ ಮಧ್ಯಾಹ್ನ ಈ ವಿವಾದ ಬಗ್ಗೆ ಸಂಜನಾ ಪತ್ರಿಕಾಗೋಷ್ಠಿ ಕರೆದಿದ್ದಾರೆ.
ಮತ್ತೆ ದೊಡ್ಡ ಎಡವಟ್ಟು ಮಾಡಿಕೊಂಡ ಸಂಜನಾ
ವಿವಾದದ ಬಗ್ಗೆ
'2' (ದಂಡುಪಾಳ್ಯ 2) ಸಿನಿಮಾದ ಒಂದು ದೃಶ್ಯದಲ್ಲಿ ನಟಿ ಸಂಜನಾ ಬೆತ್ತಲಾಗಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಸೆನ್ಸಾರ್ ನಲ್ಲಿ ಕಟ್ ಮಾಡಿರುವ ಈ ದೃಶ್ಯ ಇದೀಗ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ.
ಚಿತ್ರದ ಬಗ್ಗೆ
'2' (ದಂಡುಪಾಳ್ಯ 2) ಸಿನಿಮಾವನ್ನು ನಿರ್ದೇಶಕ ಶ್ರೀನಿವಾಸ್ ರಾಜು ನಿರ್ದೇಶನ ಮಾಡಿದ್ದಾರೆ. ಪೂಜಾ ಗಾಂಧಿ, ರವಿಶಂಕರ್, ಶೃತಿ, ಮಕರಂದ್ ದೇಶಪಾಂಡೆ, ರವಿ ಕಾಳೆ ಚಿತ್ರದಲ್ಲಿ ನಟಿಸಿದ್ದಾರೆ. 'ದಂಡುಪಾಳ್ಯ' ಸಿನಿಮಾದ ಮೊದಲ ಭಾಗದಲ್ಲಿ ದಂಡುಪಾಳ್ಯ ಗ್ಯಾಂಗ್ ನ ಕ್ರೌರ್ಯತೆ ಕಂಡಿದ್ದ ಪ್ರೇಕ್ಷಕರಿಗೆ ಈ ಬಾರಿ ಅವರ ಇನ್ನೊಂದು ಮುಖ ದರ್ಶನವನ್ನು ಮಾಡಿಸುವ ಸಿನಿಮಾ ಇದಾಗಿದೆ. ಅಂದಹಾಗೆ, ಕಳೆದ ಶುಕ್ರವಾರ ರಿಲೀಸ್ ಆಗಿದ್ದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.