Don't Miss!
- Finance Tumakuru namma metro: ಮಾದಾವರದಿಂದ ತುಮಕೂರು ಮೆಟ್ರೋ ಕಾರಿಡಾರ್ ಅಪಡೇಟ್
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಡಿಯೋ:ಸಂಕ್ರಾಂತಿ ಶುಭಾಶಯ ಹೇಳಿದ ಸ್ಯಾಂಡಲ್ ವುಡ್ ತಾರೆಯರು
ಸಂಕ್ರಾಂತಿ ಹಬ್ಬ ಎಂದರೆ, ಎಲ್ಲೆಡೆ ಸಂಭ್ರಮ ಮನೆ ಮಾಡಿರುತ್ತದೆ. ಎಲ್ಲಿ ನೋಡಿದರೂ ಎಳ್ಳು-ಬೆಲ್ಲ, ಕಬ್ಬು, ಪೊಂಗಲ್, ಹೂವು-ಹಣ್ಣು ಹಂಪಲುಗಳದೇ ಕಾರುಬಾರು. ಇನ್ನು ಹಬ್ಬದ ಸಮಯದಲ್ಲಂತೂ ಹೊಸ-ಹೊಸ ಬಟ್ಟೆ ಹಾಕಿ ಕಲರ್ ಫುಲ್ ಆಗಿ ರೆಡಿಯಾಗಿ ಮಿಂಚೋದು ನಮ್ಮ ಹೆಣ್ಣು ಮಕ್ಕಳು.
ಅಂದಹಾಗೆ ಈ ಸಂಕ್ರಾಂತಿ ಹಬ್ಬವನ್ನು ನಮ್ಮ ಸ್ಯಾಂಡಲ್ ವುಡ್ ನ ತಾರೆಯರು ಕೂಡ ವಿಭಿನ್ನವಾಗಿ ಆಚರಿಸುತ್ತಾರೆ. ಅದರಲ್ಲೂ ನಟಿಯರಂತೂ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ತಮ್ಮ ಮನೆ-ಮಂದಿಯರೊಂದಿಗೆ ಆಚರಿಸಿಕೊಳ್ಳುತ್ತಾರೆ.[ಸಂಕ್ರಾಂತಿ ಸಂಭ್ರಮದಲ್ಲಿ 'ಸಿಂಪಲ್ ಹುಡುಗಿ' ಶ್ವೇತಾ ಶ್ರೀವಾತ್ಸವ್]
ನಟಿ ಶ್ವೇತಾ ಶ್ರೀವಾತ್ಸವ್ ಅವರು ಚಿಕ್ಕಂದಿನಲ್ಲಿರುವಾಗ ಸಂಕ್ರಾಂತಿ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದರಂತೆ. ಆದರೆ ಇದೀಗ ನಟಿಯಾದ ಮೇಲೆ ಹಲವಾರು ಚಿತ್ರಗಳಲ್ಲಿ ಬ್ಯುಸಿಯಾಗಿರುವುದರಿಂದ ಹಬ್ಬ ಆಚರಿಸಲು ಅಷ್ಟಾಗಿ ಸಮಯ ಇಲ್ಲ ಎನ್ನುತ್ತಾರೆ.
ನಟಿ ಕಮ್ ನಿರ್ಮಾಪಕಿ ಪ್ರಿಯಾಂಕ ಉಪೇಂದ್ರ ಅವರು ಕೂಡ ಈ ಬಾರಿ ಹಬ್ಬವನ್ನು ಬಹಳ ಸಿಂಪಲ್ ಆಗಿ ತಮ್ಮ ಮನೆಯಲ್ಲಿಯೇ ಗಂಡ ಉಪೇಂದ್ರ ಮತ್ತು ಮಕ್ಕಳು ಹಾಗೂ ಮನೆ-ಮಂದಿಯೊಂದಿಗೆ ಆಚರಿಸುತ್ತಾರಂತೆ.[ನಿಮ್ಮೆಲ್ಲರಿಗೂ ಎಳ್ಳು ಬೆಲ್ಲ ನೀಡಲು ಬಂದ್ರು ಪ್ರಿಯಾಂಕ ಉಪೇಂದ್ರ]
ಇನ್ನು ನಟಿ ರೂಪಶ್ರೀ ಅವರು ಈ ಬಾರಿ ಹೊಸದಾಗಿ ಮದುವೆ ಆಗಿರುವುದರಿಂದ ಗಂಡ ಹಾಗೂ ತನ್ನ ಹೊಸ ಪರಿವಾರದೊಂದಿಗೆ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಸ್ಯಾಂಡಲ್ ವುಡ್ ನ ತಾರೆಯರಾದ ಅಮೂಲ್ಯ, ಕವಿರಾಜ್, ದಿನಕರ್ ತೂಗುದೀಪ್, ಸೂರಜ್ ಗೌಡ, ಸುಮನಾ ಕಿತ್ತೂರು ಮತ್ತು ನಟಿ ಕಾರುಣ್ಯ ರಾಮ್ ಅವರು ಸಂಕ್ರಾಂತಿ ಎಲ್ಲರ ಬಾಳಲ್ಲಿ ಹೊಸ ಹುಮ್ಮಸ್ಸಿನ ಜೊತೆಗೆ ಸಂತಸವನ್ನು ತರಲಿ ಎಂದು ಮನತುಂಬಿ ಹಾರೈಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ...