Don't Miss!
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೋಲ್ಡನ್ ಸ್ಟಾರ್ ಜೊತೆ 'ಯುವರತ್ನ' ನಿರ್ದೇಶಕ ಸಂತೋಷ್
Recommended Video
ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ರಾಜಕುಮಾರ ಅಂತಹ ಸೂಪರ್ ಹಿಟ್ ಸಿನಿಮಾ ನಿರ್ದೇಶನ ಮಾಡಿರುವ ಸಂತೋಷ್ ಆನಂದ್ ರಾಮ ಈಗ ಪುನೀತ್ ಜೊತೆಯಲ್ಲಿ ಯುವರತ್ನ ಎಂಬ ಸಿನಿಮಾ ಮಾಡ್ತಿದ್ದಾರೆ.
ಈಗಾಗಲೇ ಯುವರತ್ನ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ಧನಂಜಯ್, ವಸಿಷ್ಠ ಸಿಂಹ, ಸಯೇಶಾ ಸೈಗಲ್, ರಾಧಿಕಾ ಶರತ್ ಕುಮಾರ್ ಅಂತಹ ಸ್ಟಾರ್ ಕಲಾವಿದರಿದ್ದಾರೆ. ಹೀಗೆ, ಒಬ್ಬೊಬ್ಬರ ಸ್ಟಾರ್ ಗಳು ಪುನೀತ್ ಸಿನಿಮಾ ಸೇರುತ್ತಿರುವ ಇಂತಹ ಸಮಯದಲ್ಲಿ ಸಂತೋಷ್ ಆನಂದ್ ರಾಮ್ ಸರ್ಪ್ರೈಸ್ ನೀಡಿದ್ದಾರೆ.
ಗಣೇಶ್ ಅಭಿನಯದ 'ವೇರ್ ಈಸ್ ಮೈ ಕನ್ನಡಕ' ಚಿತ್ರಕ್ಕೆ ಚಾಲನೆ
ಗೋಲ್ಡನ್ ಸ್ಟಾರ್ ಗಣೇಶ್ ಅವರ ಭೇಟಿ ಮಾಡುವ ಮೂಲಕ ಹೊಸ ಚರ್ಚೆಗೆ ಕಾರಣವಾಗಿದ್ದಾರೆ. ಹೌದು, ಗೀತಾ ಚಿತ್ರೀಕರಣ ಮಾಡುತ್ತಿರುವ ಗಣೇಶ್ ಅವರನ್ನ, ಗೀತಾ ಸೆಟ್ ನಲ್ಲಿ ಸಂತೋಷ್ ಭೇಟಿ ಮಾಡಿದ್ದಾರೆ.
ಗೋಲ್ಡನ್ ಸ್ಟಾರ್ ಮನೆಯಲ್ಲಿಂದು ಸಂಭ್ರಮದ ದಿನ
ಇದು ಸಹಜ ಭೇಟಿ ಎನ್ನಲಾಗುತ್ತಿದ್ದರೂ, ಏನಾದರೂ ಸಂಥಿಂಗ್ ಇರಬಹುದಾ ಎಂಬ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು. ಯಾಕಂದ್ರೆ, ಗಣೇಶ್ ಅವರ ಜೊತೆ ಸಂತೋಷ್ ಆನಂದ್ ರಾಮ್ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ.
ಈ ಹಿಂದೆ ಸಂತೋಷ್ ಮನೆಗೆ ನಟ ಗಣೇಶ್ ಕೂಡ ಭೇಟಿ ನೀಡಿದ್ದರು. ಹೀಗೆ ಪದೇ ಪದೇ ಭೇಟಿಯಾಗುತ್ತಿರುವುದನ್ನ ನೋಡಿದ್ರೆ, ಬಹುಶಃ ಮುಂದಿನ ದಿನದಲ್ಲಿ ಇವರಿಬ್ಬರ ಕಾಂಬಿನೇಷನ್ ನಲ್ಲಿ ಒಂದು ಸಿನಿಮಾ ಬರಬಹುದು ಅಥವಾ ಪುನೀತ್ ಅವರ ಯುವರತ್ನ ಚಿತ್ರದಲ್ಲಿ ಗಣೇಶ್ ಸರ್ಪ್ರೈಸ್ ನಟನೆ ಮಾಡಬಹುದು. ಬಟ್, ಅಧಿಕೃತವಾಗಿ ಇದು ನಿಜ ಆಗುತ್ತಾ ಎಂದು ಕಾದುನೋಡೋಣ.