Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೂರನೇ ಬಾರಿ ಒಂದಾದ ಪುನೀತ್-ಸಂತೋಶ್: ಚಿತ್ರೀಕರಣ ಆರಂಭ ಯಾವಾಗ?
ನಟ ಪುನೀತ್ ರಾಜ್ಕುಮಾರ್, ನಿರ್ದೇಶಕ ಸಂತೋಶ್ ಆನಂದ್ ಅವರುಗಳು ಮೂರನೇ ಬಾರಿ ಸಿನಿಮಾಕ್ಕಾಗಿ ಒಂದಾಗುತ್ತಿದ್ದಾರೆ. ಈ ಹಿಂದೆ ಎರಡು ಸೂಪರ್ ಹಿಟ್ ಸಿನಿಮಾ ನೀಡಿರುವ ಈ ಜೋಡಿಯ ಮೂರನೇ ಸಿನಿಮಾದ ಬಗ್ಗೆ ಈಗಾಗಲೇ ಕುತೂಹಲ ಆರಂಭವಾಗಿದೆ.
Recommended Video
ಈ ಹಿಂದೆ ಸಂತೋಶ್ ಆನಂದ್ ರಾಮ್ ಪುನೀತ್ ರಾಜ್ಕುಮಾರ್ಗಾಗಿ 'ರಾಜಕುಮಾರ' ಸಿನಿಮಾ ನಿರ್ದೇಶಿಸಿದ್ದರು. ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಅದರ ಬಳಿಕ ಮತ್ತೆ 'ಯುವರತ್ನ' ಸಿನಿಮಾ ನಿರ್ದೇಶನ ಮಾಡಿದರು. ಆ ಸಿನಿಮಾ ಕೊರೊನಾ ಕಾರಣಕ್ಕೆ ಹಲವು ಅಡೆ-ತಡೆ ಅನುಭವಿಸಿತಾದರೂ ಸಿನಿಮಾ ಹಿಟ್ ಆಯಿತು. ಹಾಗಾಗಿ ಈ ಜೋಡಿ ಈಗ ಮತ್ತೆ ಒಂದಾಗಿದೆ.
ಈ ಹಿಂದೆ ಸಂತೋಶ್ ಆನಂದ್ ರಾಮ್ ಹಾಗೂ ಪುನೀತ್ ಒಟ್ಟಿಗೆ ನಟಿಸಿದ್ದ ಎರಡೂ ಸಿನಿಮಾಗಳನ್ನು ಹೊಂಬಾಳೆ ಫಿಲಮ್ಸ್ನ ವಿಜಯ್ ಕಿರಗಂದೂರು ಅವರೇ ನಿರ್ಮಾಣ ಮಾಡಿದ್ದರು. ಇದೀಗ ಈ ನಿರ್ದೇಶಕ-ನಟ ಜೋಡಿಯ ಮೂರನೇ ಸಿನಿಮಾವನ್ನು ಸಹ ವಿಜಯ್ ಕಿರಗಂದೂರು ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಹೊಂಬಾಳೆ ಫಿಲಮ್ಸ್ ಮೂಲಕವೇ ಈ ಸಿನಿಮಾ ಹೊರಗೆ ಬರಲಿದೆ.
ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ
ತಮ್ಮ ಹಾಗೂ ಪುನೀತ್ ರಾಜ್ಕುಮಾರ್ರ ಮುಂದಿನ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಸಂತೋಶ್ ಆನಂದ್ರಾಮ್, ''ನನ್ನ ಹಾಗೂ ಪುನೀತ್ ನಟನೆಯ ಸಿನಿಮಾ ಮುಂದಿನ ವರ್ಷಾರಂಭದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ'' ಎಂದಿದ್ದಾರೆ. ನಿಮ್ಮ ಪ್ರೀತಿ, ಅಭಿಮಾನ ಹೀಗೆಯೇ ನಮ್ಮ ಮೇಲೆ ಮುಂದುವರೆಯಲಿ'' ಎಂದು ಸಂತೋಶ್ ಆನಂದ್ರಾಮ್ ಹೇಳಿದ್ದಾರೆ.
ಪುನೀತ್ ನಟನೆಯ ಹಲವು ಸಿನಿಮಾ ನಿರ್ಮಿಸಿರುವ ಹೊಂಬಾಳೆ
ಸಂತೋಶ್ ಆನಂದ್ರಾಮ್ ಹಾಗೂ ಪುನೀತ್ ನಟನೆಯ 'ರಾಜಕುಮಾರ' ಹಾಗೂ 'ಯುವರತ್ನ' ಸಿನಿಮಾಗಳನ್ನು ಹೊಂಬಾಳೆ ಫಿಲಮ್ಸ್ ಅವರೇ ನಿರ್ಮಾಣ ಮಾಡಿದ್ದರು. ಅಲ್ಲದೆ ಪುನೀತ್ ನಟನೆಯ 'ನಿನಗಾಗಿ' ಸಿನಿಮಾವನ್ನು ಸಹ ಹೊಂಬಾಳೆ ಫಿಲಮ್ಸ್ ಅವರೇ ನಿರ್ಮಾಣ ಮಾಡಿದ್ದರು. ಅದು ಆ ಬ್ಯಾನರ್ನ ಮೊತ್ತ ಮೊದಲ ಸಿನಿಮಾ ಆಗಿತ್ತು. ಮೊದಲಿನಿಂದಲೂ ಹೊಂಬಾಳೆ ಫಿಲಮ್ಸ್ ಹಾಗೂ ಪುನೀತ್ ನಡುವೆ ಒಳ್ಳೆಯ ಬಾಂದವ್ಯವಿದೆ.
ಹಲವು ಸಿನಿಮಾಗಳಲ್ಲಿ ಪುನೀತ್ ಬ್ಯುಸಿ
ಪುನೀತ್ ರಾಜ್ಕುಮಾರ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಚೇತನ್ ಕುಮಾರ್ ನಿರ್ದೇಶಿಸುತ್ತಿರುವ 'ಜೇಮ್ಸ್' ಸಿನಿಮಾದಲ್ಲಿ ಪುನೀತ್ ನಟಿಸುತ್ತಿದ್ದಾರೆ. ಅದರ ಬಳಿಕ 'ಲೂಸಿಯಾ' ಖ್ಯಾತಿಯ ಪವನ್ ಕುಮಾರ್ ನಿರ್ದೇಶನ ಮಾಡಲಿರುವ 'ದ್ವಿತ್ವ' ಸಿನಿಮಾದಲ್ಲಿ ಪುನೀತ್ ನಟಿಸಲಿದ್ದಾರೆ. ಈ ಸಿನಿಮಾವನ್ನೂ ಸಹ ಹೊಂಬಾಳೆ ಫಿಲಮ್ಸ್ನವರೇ ನಿರ್ಮಾಣ ಮಾಡುತ್ತಿದ್ದಾರೆ. ಅದರ ಬಳಿಕ ದಿನಕರ್ ತೂಗುದೀಪ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಬಳಿಕ ಸಂತೋಶ್ ಆನಂದ್ರಾಮ್ ಜೊತೆಗಿನ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಅಥವಾ ಸಂತೋಶ್ ಆನಂದ್ರಾಮ್ ಸಿನಿಮಾದ ಬಳಿಕ ದಿನಕರ್ ತೂಗುದೀಪ್ ಜೊತೆ ಸಿನಿಮಾ ಮಾಡಲಿದ್ದಾರೆ ಪುನೀತ್.
ಸಂತೋಶ್ ಆನಂದ್ರಾಮ್ ನಿರ್ದೇಶನದ ಸಿನಿಮಾಗಳು
ಇನ್ನು ಸಂತೋಶ್ ಆನಂದ್ರಾಮ್ ಈವರೆಗೆ ನಿರ್ದೇಶನ ಮಾಡಿರುವುದು ಮೂರು ಸಿನಿಮಾಗಳಷ್ಟೆ. ಅದರಲ್ಲಿ ಎರಡು ಸಿನಿಮಾಗಳಲ್ಲಿ ಪುನೀತ್ ರಾಜ್ಕುಮಾರ್ ನಾಯಕ ನಟ. ಸಂತೋಶ್ ಆನಂದ್ರಾಮ್ ನಿರ್ದೇಶನ ಮಾಡಿದ ಮೊದಲ ಸಿನಿಮಾ ಯಶ್ ಮತ್ತು ರಾಧಿಕಾ ಪಂಡಿತ್ ನಟನೆಯ 'ಮಿಸ್ಟರ್ ಆಂಡ್ ಮಿಸಸ್ ರಾಮಚಾರಿ'. ಆ ಸಿನಿಮಾದ ಬಳಿಕ ಪುನೀತ್ ರಾಜ್ಕುಮಾರ್ ಜೊತೆಗೆ 'ರಾಜಕುಮಾರ' ಸಿನಿಮಾ ಮಾಡಿದರು. ಅದರ ಬಳಿಕ, 'ಯುವರತ್ನ' ಸಿನಿಮಾ ನಿರ್ದೇಶನ ಮಾಡಿದರು. 'ಯುವರತ್ನ' ಸಿನಿಮಾ ಬಿಡುಗಡೆ ಆದ ಎರಡೇ ದಿನದಲ್ಲಿ ಸರ್ಕಾರವು ಚಿತ್ರಮಂದಿರದ ಮೇಲೆ ಲಾಕ್ಡೌನ್ ಹೇರಿತ್ತು. ಆಗ ಪುನೀತ್ ರಾಜ್ಕುಮಾರ್, ಸಿಎಂ ಯಡಿಯೂರಪ್ಪ ಅವರನ್ನು ಮನವಿ ಮಾಡಿಕೊಂಡು ಇನ್ನೂ ಕೆಲವು ದಿನ ಚಿತ್ರಮಂದಿರಗಳು ತೆರೆದಿರುವಂತೆ ಮಾಡಿದ್ದರು. ನಂತರ ಆ ಸಿನಿಮಾವನ್ನು ಅಮೆಜಾನ್ ಪ್ರೈಂಗೆ ಮಾರಾಟ ಮಾಡಲಾಯ್ತು.