Don't Miss!
- Lifestyle 2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್ನಲ್ಲಿರುವ ಶುಭ ದಿನಾಂಕಗಳಿವು
- Finance 2023 ಡಿಸೆಂಬರ್ ವೇಳೆಗೆ 160 ಲಕ್ಷ ಕೋಟಿ ರೂ. ದಾಟಿದ ಸರ್ಕಾರದ ಸಾಲ!
- Automobiles Vande Bharat: ವಂದೇ ಭಾರತ್ ಸ್ಲೀಪರ್ ವಿಶೇಷತೆಗಳು: ಇಂಟೀರಿಯರ್ಗೆ ಫಿದಾ ಆಗ್ತೀರ!
- News Karnataka Lok Sabha: 28 ಕ್ಷೇತ್ರಗಳ ಜಾತಿವಾರು ಅಭ್ಯರ್ಥಿಗಳು ಯಾರು? ಮಾಹಿತಿ ಇಲ್ಲಿದೆ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸತೀಶ್ ನೀನಾಸಂ ಮೊದಲ ಫೋಟೋಶೂಟ್ ಫೋಟೋ ಇದು
ಸತೀಶ್ ನೀನಾಸಂ ಅಂದಾಕ್ಷಣ 'ಲೂಸಿಯಾ' ಹೀರೋ ಅಂತಾರೆ ಕನ್ನಡ ಸಿನಿ ಪ್ರೇಕ್ಷಕರು. ಹೊರರಾಜ್ಯದ ಪ್ರೇಕ್ಷಕರು ಕೂಡ ಸತೀಶ್ ಅವರನ್ನ ಫಟ್ ಅಂತು ಗುರುತಿಸುವುದು 'ಲೂಸಿಯಾ' ಚಿತ್ರದ ಮೂಲಕವೇ.
ಸದ್ಯ 'ಅಯೋಗ್ಯ' ಚಿತ್ರದ ಮೂಲಕ ದೊಡ್ಡ ಯಶಸ್ಸು ಪಡೆದುಕೊಂಡಿರುವ ಸತೀಶ್, ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕನ್ನಡ ಸಿನಿಮಾ ಜೊತೆ ತಮಿಳಿನಲ್ಲೂ ನಾಯಕನಾಗಿ ಅಭಿನಯಿಸುತ್ತಿದ್ದಾರೆ.
ಅಂದು ಅವರ ಸಿನಿಮಾ ನೋಡಲು ಕ್ಯೂನಲ್ಲಿದ್ದರು, ಇಂದು ಅವರ ಪಕ್ಕದಲ್ಲೇ ಕಟೌಟ್.!
ಈ ಮಧ್ಯೆ ಸತೀಶ್ ನೀನಾಸಂ ತನ್ನ ಮೊಟ್ಟ ಮೊದಲ ಫೋಟೋಶೂಟ್ ನ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ. 2008ರ ಸಮಯದಲ್ಲಿ ಸಿನಿಮಾ ಹೀರೋ ಆಗ್ಬೇಕು ಎಂಬ ಆಸೆಯಿಂದ ಈ ಫೋಟೋಶೂಟ್ ಮಾಡಿಸಿದ್ದರಂತೆ. ಈ ಅಪರೂಪದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.
My first photoshoot in 2008... pic.twitter.com/pHAslHngqE
— Sathish Ninasam (@SathishNinasam) December 9, 2018
ನೀನಾಸಂನಲ್ಲಿ ನಟನೆಯ ತರಬೇತಿ ಪಡೆದಿದ್ದ ಸತೀಶ್ ಗೆ 2008ರಲ್ಲಿ 'ಮಾದೇಶ' ಚಿತ್ರದಲ್ಲಿ ಸಣ್ಣದೊಂದು ಪಾತ್ರ ನಿರ್ವಹಿಸುವ ಅವಕಾಶ ಸಿಕ್ಕಿತ್ತು. ನಂತರ ಮನಸಾರೆ, ಪಂಚರಂಗಿ, ಏನೋ ಒಂಥರಾ, ಪರಮಾತ್ಮ, ಲೈಫು ಇಷ್ಟೇನೇ, ಪುಟ್ಟಕ್ಕನ ಹೈವೇ, ಡ್ರಾಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೋಷಕ ನಟನಾಗಿ ಅಭಿನಯಿಸಿದ್ದರು.
ಮತ್ತೊಂದು ಮಹತ್ವ ಕಾರ್ಯಕ್ಕೆ ಮುಂದಾದ 'ಅಯೋಗ್ಯ' ಸತೀಶ್ ನೀನಾಸಂ
2013ರಲ್ಲಿ ತೆರೆಕಂಡ 'ಲೂಸಿಯಾ' ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕನಾದ ಸತೀಶ್, ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಈ ಸಿನಿಮಾ ಸತೀಶ್ ಜೀವನವನ್ನೇ ಬದಲಾಯಿಸಿತು. ಅಂಜದ ಗಂಡು, ಲವ್ ಇನ್ ಮಂಡ್ಯ, ರಾಕೆಟ್, ಬ್ಯೂಟಿಫುಲ್ ಮನಸುಗಳು, ಟೈಗರ್ ಗಲ್ಲಿ, ಅಯೋಗ್ಯ ಹೀಗೆ ಸಾಲು ಸಾಲು ಸಿನಿಮಾ ಮಾಡಿದ್ರು.
ಉತ್ತರ ಕರ್ನಾಟಕದ ಹಳ್ಳಿ ದತ್ತು ಪಡೆಯಲಿದ್ದಾರೆ ನೀನಾಸಂ ಸತೀಶ್
ಅಯೋಗ್ಯನ ಆರ್ಭಟದ ನಂತರ ಸತೀಶ್ ಹವಾ ಮತ್ತಷ್ಟು ಹೆಚ್ಚಾಗಿದ್ದು, ಚಂಬಲ್, ಗೋದ್ರಾ, ರಾಮನು ಕಾಡಿಗೆ ಹೋದಾಗ ಹಾಗೂ ತಮಿಳಿನ ಒಂದು ಸಿನಿಮಾ ಸೇರಿದಂತೆ ಇನ್ನು ಹಲವು ಪ್ರಾಜೆಕ್ಟ್ ಕೈಯಲ್ಲಿದೆ.
ಸತೀಶ್ ಅವರ ಜರ್ನಿ ನೋಡಿದ್ರೆ, ಅನೇಕರಿಗೆ ಸ್ಫೂರ್ತಿಯಾಗಿದೆ. ಅನೇಕ ಏಳುಬೀಳುಗಳನ್ನ ಕಂಡು ಯಶಸ್ಸಿನ ಬಾಗಿಲು ತಟ್ಟಿದ್ದಾರೆ. ಇದರ ಜೊತೆಗೆ ಕೆಲವು ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.