Don't Miss!
- Technology ಜಿಯೋ ನಿವ್ವಳ ಲಾಭದಲ್ಲಿ ಭರ್ಜರಿ ಹೆಚ್ಚಳ: ಇಲ್ಲಿದೆ ವಿವರ
- Lifestyle ಉಪ್ಪು ನೀರಿನಿಂದ ಮುಖ ತೊಳೆದರೆ ಆಗುವ ಲಾಭವೇನು.? ಇದರ ಅನಾನುಕೂಲವೇನು ಗೊತ್ತಾ?
- Finance ಬೆಂಗಳೂರಿಗೆ ಪ್ರತ್ಯೇಕ ನ್ಯಾವಿಗೇಟಿಂಗ್ ಅಪ್ಲಿಕೇಶನ್, ಟೆಕ್ ಕಂಪೆನಿಯೊಂದಿಗೆ ಒಪ್ಪಂದ
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- News Bengaluru Heat Wave: ಮಳೆಯ ನಡುವೆ ಮತ್ತೆ ದಾಖಲೆಯ ಗರಿಷ್ಠ ತಾಪಮಾನ: ಶಾಖದ ಅಲೆ ಮುನ್ಸೂಚನೆ
- Automobiles Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬ್ರಹ್ಮಾಚಾರಿ'ಯಾಗ್ತಾರಂತೆ ನಟ ನೀನಾಸಂ ಸತೀಶ್
ನೀನಾಸಂ ಸತೀಶ್ ಸದ್ಯ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. 'ಅಯೋಗ್ಯ' ಮತ್ತು ಚಂಬಲ್ ಸಿನಿಮಾದ ಸಕ್ಸಸ್ ನ ಖುಷಿಯಲ್ಲಿ ಇರುವ ಸತೀಶ್ ಈಗ 'ಬ್ರಹ್ಮಾಚಾರಿ'ಯಾಗ್ತಿದ್ದಾರಂತೆ. ಸತೀಶ್ ಯಾಕೆ ಬ್ರಹ್ಮಾಚಾರಿ ಆಗಲು ನಿರ್ಧರಿಸಿದ್ದಾರೆ ಅಂತ ಅಚ್ಚರಿ ಪಡಬೇಡಿ, ಇದು ರಿಯಲ್ ಅಲ್ಲ ರೀಲ್. ಸತೀಶ್ ಅಭಿನಯದ ಮುಂದಿನ ಸಿನಿಮಾದ ಹೆಸರು 'ಬ್ರಹ್ಮಾಚಾರಿ'
ಹೌದು, ನೀನಾಸಂ ಸತೀಶ್ 'ಬ್ರಹ್ಮಾಚಾರಿ' ಎನ್ನುವ ಹೊಸ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಉದಯ್ ಮೆಹ್ತಾ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಸತೀಶ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಬ್ರಹ್ಮಾಚಾರಿ' ಅಂತ ಟೈಟಲ್ ಇಟ್ಟಿರುವ ಚಿತ್ರತಂಡ '100 ಪರ್ಸೆಂಟ್ ವರ್ಜಿನ್' ಎನ್ನುವ ಸಬ್ ಟೈಟಲ್ ಇಟ್ಟಿದೆ.
ಅಂದ್ಹಾಗೆ, 'ಬ್ರಹ್ಮಾಚಾರಿ' ಪಕ್ಕಾ ಕಾಮಿಡಿ ಸಿನಿಮಾ. ಈ ಸಿನಿಮಾಗೆ ನಿರ್ದೇಶಕ ಚಂದ್ರ ಮೋಹನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ 'ಬಾಂಬೆ ಮಿಠಾಯಿ' ಮತ್ತು 'ಡಬಲ್ ಇಂಜಿನ್' ಸಿನಿಮಾ ನಿರ್ದೇಶನ ಮಾಡಿದ್ದ ಚಂದ್ರ ಮೋಹನ್ 'ಬ್ರಹ್ಮಾಚಾರಿ' ಸಿನಿಮಾ ಮೂಲಕ ಮೂರನೇ ಚಿತ್ರ ಕೈಗೆತ್ತಿಕೊಂಡಿದ್ದಾರೆ.
'ಲವ್ ಇನ್ ಮಂಡ್ಯ' ಸಿನಿಮಾದ ನಂತರ ನಿರ್ಮಾಪಕ ಉದಯ್ ಮೆಹ್ತಾ ಮತ್ತು ಸತೀಶ್ ಎರಡನೇ ಬಾರಿಗೆ ಒಂದಾಗುತ್ತಿದ್ದಾರೆ. ಇನ್ನು ಈಗಾಗಲೆ ಎರಡು ದೊಡ್ಡ ಸಕ್ಸಸ್ ನೀಡಿರುವ ಸತೀಶ್ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.
ಹಾಗಾಗಿ, 'ಬ್ರಹ್ಮಾಚಾರಿ' ಸಿನಿಮಾ ಸತೀಶ್ ಪಾಲಿಗೆ ಬಹುಮುಖ್ಯವಾದ ಸಿನಿಮಾವಾಗಿದೆ. ಅದೇನೆ ಇದ್ದರು 'ಬ್ರಹ್ಮಾಚಾರಿ' ಆಗಲು ಹೊರಟಿರುವ ಸತೀಶ್ ಜೊತೆಗೆ ಸಿನಿಮಾದಲ್ಲಿ ಯಾರೆಲ್ಲ ಸಾಥ್ ನೀಡಲಿದ್ದಾರೆ ಎನ್ನುವುದು ಸದ್ಯದಲ್ಲೆ ಗೊತ್ತಾಗಲಿದೆ. ಯುಗಾದಿ ಹಬ್ಬಕ್ಕೆ ಸಿನಿಮಾ ಲಾಂಚ್ ಆಗಲಿದೆ.