Don't Miss!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- News ಚಾಮರಾಜನಗರ: ಚೊಂಬುಗಳ ಪಾರ್ಟಿ ಕಾಂಗ್ರೆಸ್
- Lifestyle ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಂಡನ್ ನಲ್ಲಿ ಕನ್ನಡ ನಟ ಸತೀಶ್ ನೀನಾಸಂಗೆ ಏನು ಕೆಲಸ.?
'ಅಯೋಗ್ಯ' ಮತ್ತು 'ಚಂಬಲ್' ಯಶಸ್ವಿ ಪ್ರದರ್ಶನ ಕಂಡ ಮೇಲೆ ನಟ ಸತೀಶ್ ನೀನಾಸಂ ಕೈಯಲ್ಲಿ ಸಾಲು ಸಾಲು ಪ್ರಾಜೆಕ್ಟ್ ಗಳಿವೆ. 'ಬ್ರಹ್ಮಾಚಾರಿ', 'ಗೋಧ್ರಾ', 'ಪರಿಮಳ ಲಾಡ್ಜ್' ಚಿತ್ರಗಳ ಶೂಟಿಂಗ್ ನಲ್ಲಿ ಸತೀಶ್ ನೀನಾಸಂ ಬಿಜಿಯಾಗಿದ್ದಾರೆ.
ಈ ಎಲ್ಲದರ ನಡುವೆ ಸತೀಶ್ ನೀನಾಸಂ ಲಂಡನ್ ಗೆ ಹಾರಿದ್ದಾರೆ. ಸತೀಶ್ ನೀನಾಸಂ ಏಕ್ದಂ ಲಂಡನ್ ಗೆ ಫ್ಲೈಟ್ ಹತ್ತಿದ್ಯಾಕೆ ಅಂದ್ರೆ ಹೊಸ ಸಿನಿಮಾದ ಶೂಟಿಂಗ್ ಗೆ.! ಹೌದು, 'ವೈತರಣಿ' ಎಂಬ ಹೊಸ ಚಿತ್ರಕ್ಕೆ ಸತೀಶ್ ನೀನಾಸಂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರದ ಶೂಟಿಂಗ್ ಲಂಡನ್ ನಲ್ಲಿ ಸಾಗುತ್ತಿದೆ.
ಅಂದ್ಹಾಗೆ, 'ವೈತರಣಿ' ಚಿತ್ರವನ್ನು ನಟಿ ಶರ್ಮಿಳಾ ಮಾಂಡ್ರೆ ನಿರ್ಮಾಣ ಮಾಡುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ ನಟಿಸಿ, ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಸತೀಶ್ ನೀನಾಸಂ ಹೀರೋ. 'ವೈತರಣಿ' ಮೂಲಕ ಇದೇ ಮೊದಲ ಬಾರಿಗೆ ಸತೀಶ್ ನೀನಾಸಂ ಮತ್ತು ಶರ್ಮಿಳಾ ಮಾಂಡ್ರೆ ಜೊತೆಯಾಗಿದ್ದಾರೆ.
'ಪರಿಮಳ ಲಾಡ್ಜ್' ಕಡೆಯಿಂದ ಡಿ ಬಾಸ್ ಗೆ ಅಪ್ಪನ ಫೊಟೋ ಗಿಫ್ಟ್
ಈ ಹಿಂದೆ 'ಕಹಿ' ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಅರವಿಂದ್ ಶಾಸ್ತ್ರಿ ಇದೀಗ 'ವೈತರಣಿ' ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಅತ್ತ 'ಅಳಿದು ಉಳಿದವರು' ಚಿತ್ರದಲ್ಲೂ ಅರವಿಂದ್ ಶಾಸ್ತ್ರಿ ಬಿಜಿಯಿದ್ದಾರೆ.